ಮಾದಕದ್ರವ್ಯ ವ್ಯಸನ ಜಾಗೃತಿ
Team Udayavani, Jun 30, 2019, 5:09 AM IST
ಹೆಬ್ರಿ: ಪಿಆರ್ಎನ್ ಅಮೃತ ಭಾರತಿ ಪ.ಪೂ. ಕಾಲೇಜಿನಲ್ಲಿ ಜೂ. 29ರಂದು ಹೆಬ್ರಿ ಪೋಲೀಸ್ ಠಾಣಾ ವತಿಯಿಂದ ಮಾದಕದ್ರವ್ಯ ವ್ಯಸನ ಜಾಗೃತಿ ಕಾರ್ಯಕ್ರಮ ನಡೆಯಿತು.
ಹೆಬ್ರಿಯ ಠಾಣಾಧಿಕಾರಿ ಮಹಾಬಲ ಶೆಟ್ಟಿ ಅವರು ಮಾದಕ ದ್ರವ್ಯಜಾಲದ ಹಾನಿಯ ಬಗ್ಗೆ ವಿವರಿಸಿದರು. ರಸ್ತೆ ಸುರಕ್ಷೆಯ ಬಗ್ಗೆಯೂ ಮಾತನಾಡಿದ ಅವರು, ವಾಹನಕ್ಕೆ ಇರಬೇಕಾದ ಅಗತ್ಯದಾಖಲೆಯ ಕುರಿತು ವಿದ್ಯಾರ್ಥಿ ಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭ ಪೊಲೀಸ್ ಸಿಬಂದಿ ದಿನೇಶ್ ಉಪಸ್ಥಿತರಿದ್ದರು. ಕಾಲೇಜಿನ ದೈಹಿಕ ಶಿ. ಶಿಕ್ಷಕ ವಿಜಯ್ ಕುಮಾರ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.