ಕೊಲ್ಲೂರಿನಲ್ಲಿ ತೀವ್ರಗೊಂಡ ಜಲಕ್ಷಾಮ
Team Udayavani, May 29, 2019, 6:10 AM IST
ಕೊಲ್ಲೂರು: ಸೌಪರ್ಣಿಕಾ ನದಿ ನೀರು ಬತ್ತಿ ಹೋದ ಪ್ರಯುಕ್ತ ಈ ಭಾಗದ ಬಹುತೇಕ ಕಡೆಗಳಲ್ಲಿ ನೀರಿನ ಕ್ಷಾಮ ಮತ್ತಷ್ಟು ಬಿಗಡಾಯಿಸಿದ್ದು, ದುಬಾರಿ ಬೆಲೆಗೆ ನೀರು ಖರೀದಿಸಬೇಕಾಗಿದೆ.
2000 ಲೀ. ನೀರಿಗೆ ರೂ. 600
ಹಲವಾರು ವಸತಿಗೃಹಗಳು, ಹೊಟೇಲುಗಳಿಗೆ ಈಗ ಟ್ಯಾಂಕರ್ ನೀರೇ ಗತಿ. ಹೊಟೇಲ್ಲೊಂದಕ್ಕೆ ಪ್ರತಿದಿನ ಕನಿಷ್ಠ 2000 ಲೀ. ನೀರು ಬೇಕಾಗಿದ್ದು, ಖಾಸಗಿಯವರಿಂದ ತರಿಸಿಕೊಳ್ಳುತ್ತಿದ್ದಾರೆ.
64 ವಿಧದ ಔಷಧೀಯ ಗಿಡ ಹಾನಿ
ಕೊಡಚಾದ್ರಿ ಬೆಟ್ಟದಲ್ಲಿರುವ ನಾನಾ ರೀತಿಯ ಔಷಧೀಯ ಗಿಡಗಳು ನೀರಿಲ್ಲದೇ ನಾಶವಾಗುತ್ತಿದೆ. ಇದರೊಂದಿಗೆ ಅಭಯಾರಣ್ಯ ಸಹಿತ ಈ ಭಾಗದ ಅರಣ್ಯ ಪ್ರದೇಶಗಳಲ್ಲಿ ವಾಸವಾಗಿರುವ ನಾನಾ ರೀತಿಯ ಪ್ರಾಣಿಗಳು, ಪಕ್ಷಿಗಳು, ಜಲಚರಗಳು ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ನದಿ ತಟ ಹಾಗೂ ಹಳ್ಳ ಹೊಂಡಗಳಲ್ಲಿರುವ ಹಾವು, ಮೀನು, ಜಲಚರಗಳು ನೀರಿನ ಅಭಾವದಿಂದ ಸಾವನ್ನಪ್ಪುತ್ತಿವೆ.
ಅತಿಥಿಗೃಹಗಳಿಗೆ ನೀರಿನ ಬರದ ಬಿಸಿ
ಶ್ರೀ ಮೂಕಾಂಬಿಕಾ ದೇಗುಲ ಸಹಿತ ಇಲ್ಲಿನ ಸುಮಾರು 45 ಖಾಸಗಿ ವಸತಿಗೃಹಗಳಿಗೆ ನೀರಿಲ್ಲ. ಕೆಲವೊಂದು ಮನೆಗಳಿಂದ ದುಬಾರಿ ಬೆಲೆ ತೆತ್ತು ನೀರು ಸಂಗ್ರಹಿಸಬೇಕಾದ ಅನಿವಾರ್ಯ ಸ್ಥಿತಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ