ಡಿವೈಎಸ್ಪಿ ಗಣಪತಿ ಕರೆ ಬರಲಿಲ್ಲ, ಕರೆ ಮಾಡಲೂ ಇಲ್ಲ: ಸೊರಕೆ
Team Udayavani, Aug 25, 2017, 6:10 AM IST
ಉಡುಪಿ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಸಂದರ್ಭ ಯಾವುದೇ ಕರೆಗಳು ನನಗೆ ಬಂದಿರಲಿಲ್ಲ ಎಂದು ಮಾಜಿ ಸಚಿವ ವಿನಯ ಕುಮಾರ ಸೊರಕೆ ತಿಳಿಸಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಕರೆ ಮಾಡಿದವರ ವಿವರ ಡಿಲೀಟ್ ಆದ ಕುರಿತು ಬಂದ ಸುದ್ದಿ ಕುರಿತಂತೆ ಪ್ರತಿಕ್ರಿಯೆ ಕೇಳಿದಾಗ “ಪುತ್ತೂರಲ್ಲಿ ಶಾಸಕನಾಗಿದ್ದಾಗ ಎಸ್ಐ ಆಗಿದ್ದರು. ಆಗ ಸಂಪರ್ಕ ಇತ್ತು. ಅಮಾನತಾದ ಸಂದರ್ಭ ನನ್ನನ್ನು ಸಂಪರ್ಕಿಸಿ ಅಮಾನತು ವಾಪಸ್ ಪಡೆದುಕೊಳ್ಳಲು ಆಯುಕ್ತರು, ಗೃಹಸಚಿವರ ಜತೆ ಮಾತನಾಡುವಂತೆ ಮನವಿ ಮಾಡಿದ್ದರು. ಬಳಿಕ ಯಾವುದೇ ಸಂಪರ್ಕ ಇರಲಿಲ್ಲ’ ಎಂದರು.