ದಾನಿಗಳ ನೆರವಿನಿಂದ ಕನ್ನಡ ಶಾಲೆ ಪುನಶ್ಚೇತನ’
Team Udayavani, Feb 10, 2019, 12:45 AM IST
ಮಣಿಪಾಲ: ಮಣಿಪಾಲ ಆಸ್ಪಿಯರ್ ಫೌಂಡೇಶನ್ ಮೂಲಕ ಸುಭಾಸ್ ಸಾಂಕಳ್ಕರ್, ತೃಪ್ತಿ ಸುಭಾಸ್ ದಂಪತಿ ರಾಜೀವನಗರ ಸಂಯುಕ್ತ ಪ್ರೌಢ ಶಾಲೆಗೆ ಸುಮಾರು ಆರು ಲಕ್ಷ ರೂ. ವೆಚ್ಚದಲ್ಲಿ ನೀಡಿದ ಸುಸಜ್ಜಿತ ಜ್ಞಾನಗಂಗಾ ವಾಚನಾಲಯ ಹಾಗೂ ಆರ್ಯಭಟ ಕಂಪ್ಯೂಟರ್ಗಳನ್ನೊಳ ಗೊಂಡ ಇ-ಲರ್ನಿಂಗ್ ವ್ಯವಸ್ಥೆಯನ್ನು ಶನಿವಾರ ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್ ಹಾಗೂ ಉಡುಪಿ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ರಮಾನಂದ ನಾಯಕ್ ಉದ್ಘಾಟಿಸಿದರು.
ಪ್ರಾಸ್ತಾವಿಕವಾಗಿ ದಾನಿ ಸುಭಾಸ್ ಸಾಂಕಳ್ಕರ್ ಮಾತನಾಡಿ, ತೀರಾ ಬಡವರ್ಗದ ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಮಕ್ಕಳಿಗೆ ನೀಡುವ ಉದ್ದೇಶದಿಂದ ಈಗಾಗಲೇ ಸುಸಜ್ಜಿತ ಶೌಚಾಲಯ ನೀಡಲಾಗಿದ್ದು, ಈ ದಿನ ವಾಚನಾಲಯ, ಕಂಪ್ಯೂಟರ್, ಅಲ್ಲದೆ ಮುಂದೆ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಆರಂಭಿಸಲಾಗುವುದು ಎಂದರು.
ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಆಂಗ್ಲ ಮಾಧ್ಯಮ ಶಾಲೆಗಳ ಪ್ರಭಾವದಿಂದ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿರುವಾಗ ದಾನಿ ಗಳು, ಹಳೆ ವಿದ್ಯಾರ್ಥಿಗಳು ಮೂಲ ಸೌಕರ್ಯ ಒದಗಿಸುವ ಮೂಲಕ ಶಾಲೆಗಳ ಪುನಶ್ಚೇತನಕ್ಕೆ ನೀಡುತ್ತಿರುವ ಸಹಕಾರ ಶ್ಲಾಘನೀಯ ಎಂದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ರಮಾನಂದ ನಾಯಕ್ ಮಾತನಾಡಿ, ಅಂದು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಷ್ಟಪಟ್ಟು ಕಲಿತವರು ಇಂದು ಉನ್ನತ ಸ್ಥಿತಿಯಲ್ಲಿದ್ದಾರೆ, ಮಾತೃಭಾಷಾ ಶಿಕ್ಷಣದಲ್ಲಿ ಕಲಿತವರಿಗೆ ಸಾಮಾನ್ಯ ಜ್ಞಾನ ಜಾಸ್ತಿ. ಆಸ್ಪಿಯರ್ ಫೌಂಡೇಶನ್ ಮೂಲಕ ಸುಭಾಸ್ ಸಾಂಕಳ್ಕರ್ ನೀಡಿದ ಕೊಡುಗೆ ಅನುಕರಣೀಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?