ಆ ಟಾಯ್ಲೆಟ್‌ ಹೋಗಿ ಇ -ಟಾಯ್ಲೆಟ್‌ ಬಂದರೂ  ಪ್ರಯೋಜನವಿಲ್ಲ 


Team Udayavani, Sep 2, 2021, 3:20 AM IST

ಆ ಟಾಯ್ಲೆಟ್‌ ಹೋಗಿ ಇ -ಟಾಯ್ಲೆಟ್‌ ಬಂದರೂ  ಪ್ರಯೋಜನವಿಲ್ಲ 

ಕಾರ್ಕಳ:  ಸರಕಾರರ ನೂರೆಂಟು ಯೋಜನೆಗಳು ಅಂತಿಮವಾಗಿ ಜನರಿಗೆ ತಲುಪಲು ವಿಫ‌ಲವಾಗುವುದು ಹೇಗೆ ಎಂಬುದಕ್ಕೆ  ಕಾರ್ಕಳ ಪುರಸಭೆ ವ್ಯಾಪ್ತಿಯ ಇ ಟಾಯ್ಲೆಟ್‌ಗಳೇ ಒಂದು ನಿದರ್ಶನ. ಮಾಮೂಲಿ ಟಾಯ್ಲೆಟ್‌ ಹೋಗಿ ಇ ಟಾಯ್ಲೆಟ್‌ ಬಂದಿದ್ದರೂ ಬಳಕೆಗೆ ಸಿಗದಂತಾಗಿದೆ.

2018ರಲ್ಲಿ  ಸರಕಾರದ ನಗರೋತ್ಥಾನ  ಹಂತ-3ರ ಅಡಿಯಲ್ಲಿ  ಬಿಡುಗಡೆಗೊಳಿಸಿದ  3. ಕೋ.ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳಲ್ಲಿ ಇ ಟಾಯ್ಲೆಟ್‌ ಕೂಡ ಒಳಗೊಂಡಿದೆ. ಪುರಸಭೆ ವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ಸುಮಾರು 26 ಲ.ರೂ. ವೆಚ್ಚದಲ್ಲಿ  ಇದನ್ನು ನಿರ್ಮಿಸಲಾಗಿದೆ. ಗುತ್ತಿಗೆದಾರರು ಸರಿಯಾಗಿ ನಿರ್ವಹಿಸದೆ ಇರುವುದೇ  ಬಳಕೆಗೆ ಸಿಗದಿರಲು ಕಾರಣ ಎನ್ನಲಾಗಿದೆ.

ಬಂಗ್ಲೆಗುಡ್ಡೆ ಬಳಿಯ ಇ- ಶೌಚಾಲಯಕ್ಕೆ  ಡ್ರೈನೇಜ್‌ ವ್ಯವಸ್ಥೆ ಕಲ್ಲಿಸಿಲ್ಲ. ನೀರಿನ ಸಂಪರ್ಕವೂ ನೀಡಿಲ್ಲ. ಅದು ಅರ್ಧಕ್ಕೆ  ನಿಂತಿದೆ.  ಅಲ್ಲಿ  ಶುಚಿತ್ವದ  ಕೊರತೆಯಿಂದ ಘಟಕ ನಾರುತ್ತಿದೆ. ಗುತ್ತಿಗೆದಾರರಿಗೆ ಅರ್ಧ ಬಿಲ್‌ ಕೂಡ ಪಾವತಿಯಾಗಿದೆ. ಸಾರ್ವಜನಿಕರ ಉಪಯೋಗಕ್ಕೆ ಸಿಗುವ ತನಕ ಟಾಯ್ಲೆಟ್‌  ತಲುಪಿಲ್ಲ. ಇನ್ನು ಪುರಸಭೆ ಕಚೇರಿ  ಪಕ್ಕದಲ್ಲಿ ಬಸ್‌ಸ್ಟಾಂಡ್‌ ಸಮೀಪದ  ಇ-ಟಾಯ್ಲೆಟ್‌ ಕೂಡ  ಸಾರ್ವಜನಿಕ ಬಳಕೆಗೆ ಸಿಗುತ್ತಿಲ್ಲ.  ಗಾಂಧಿ ಮೈದಾನ ಬಳಿಯಲ್ಲಿ ಇರುವುದರ ಕಥೆ ಕೂಡ ಇದೇ ಆಗಿದೆ. ಎರಡೂ ಕಡೆಯ ಇ ಟಾಯ್ಲೆಟ್‌ ಸಾಂಕೇತಿಕವಾಗಿ ಉದ್ಘಾಟನೆ  ನೆರವೇರಿಸಲಾಗಿದೆ. ಅನಂತರ  ಅದರ  ನಿರ್ವಹಣೆಯನ್ನು ಮರೆಯಲಾಗಿದೆ.

“ಶುಚಿ ಇಲ್ಲಿ ಕಾಣಿರಿ’ ಎಂಬ ಬೋಡ್‌  :

“ಕೊನೆಗೂ ನಿಮ್ಮ ನಿರೀಕ್ಷೆಗೂ ಮೀರಿ ಶುಚಿಯಾಗಿರುವ ಶೌಚಾಲಯವನ್ನು ಇಲ್ಲಿ  ಕಾಣಿರಿ’ -ಇದು  ಆನೆಕೆರೆ ಇ-ಟಾಯ್ಲೆಟ್‌ನ ಹೊರಗೆ ಕಂಡುಬರುತ್ತಿರುವ ಬರಹ. ಹತ್ತಿರಕ್ಕೆ ತೆರಳಿ ಒಳಗೆ ಇಣುಕಿ ನೋಡಿದರೆ ಅಲ್ಲಿ ಗಬ್ಬು ವಾಸನೆಯಿದೆ.  ಶೌಚಾಲಯ ಪ್ರಯೋಜನ ಪಡೆಯಬೇಕಿದ್ದವರು ಇದರಿಂದ ರೋಸಿ ಹೋಗಿದ್ದಾರೆ.

ಸಾರ್ವಜನಿಕ ಉಪಯೋಗದ ನಾಗರಿಕರು 5 ರೂ. ನಾಣ್ಯ ಬಳಸಿ ಉಪಯೋಗಿಸಬಹುದಾದ ತಂತ್ರಜ್ಞಾನದ ಇ ಟಾಯ್ಲೆಟ್‌ಗಳಿವು. ದ್ವಾರದ ಪಕ್ಕದ ಯಂತ್ರದ ಪೆಟ್ಟಿಗೆಯೊಳಗೆ ನಾಣ್ಯ ಹಾಕಿದಾಗ ಸ್ವಯಂಚಾಲಿತ ಬಾಗಿಲು ತೆರೆದುಕೊಳ್ಳುತ್ತದೆ. ಸಾಮಾನ್ಯ ಕಾರ್ಮಿಕ ನಿರ್ವಹಣೆಯ ಶೌಚಾಲಯಗಳಲ್ಲಿ  ಸಂಗ್ರಹವಾಗುವ  ಶೌಚಾಲಯದ  ಶುಲ್ಕ  ನಿರ್ವಹಣೆ  ನಡೆಸುವ ಸಂಸ್ಥೆಯ ಪಾಲಾಗುತ್ತದೆ; ಇದರಿಂದ ಸ್ಥಳಿಯಾಡಳಿತಕ್ಕೆ ಆದಾಯ ದೊರಕುವುದಿಲ್ಲ ; ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ; ಸ್ಥಳಿಯಾಡಳಿತಕ್ಕೆ ನಿರ್ವಹಣೆ ಕಷ್ಟ ಎಂಬೆಲ್ಲ ಕಾರಣಕ್ಕೆ  ಕಾರ್ಮಿಕ ರಹಿತ ಇ-ಟಾಯ್ಲೆಟ್‌ ವ್ಯವಸ್ಥೆ ಜಾರಿಗೆ ಬಂದಿದ್ದರೂ ಅದಿನ್ನೂ  ಸಾರ್ವಜನಿಕರ  ಬಳಕೆಗೆ ದೊರೆತಿಲ್ಲ.

ಶುಚಿತ್ವ ಶೌಚಾಲಯ ಅಗತ್ಯ :

ಖಾಸಗಿ  ಬಸ್‌ನಿಲ್ದಾಣ ಬಳಿ   ಸಾರ್ವಜನಿಕ ಶೌಚಾಲಯ ಕಟ್ಟಡ ನಿರ್ಮಿಸಿ ಕೆಲವೇ ವರ್ಷಗಳು ಕಳೆದಿವೆ. ನೀರಿನ ವ್ಯವಸ್ಥೆ, ಕಟ್ಟಡದ ಮುಂಭಾಗ ದುರಸ್ತಿಯಾಗದೆ  ಬೀಗ ಜಡಿಯಲಾಗಿದೆ. ನಗರದ ಬಹುತೇಕ ಸ್ಥಳಗಳು ಜನನಿಬಿಡ ಸ್ಥಳಗಳಾಗಿದ್ದು,  ಬೆಳೆಯುತ್ತಿರುವ  ನಗರ ಪ್ರದೇಶದ ಪ್ರಮುಖ ಜನಸಂದಣಿ ಇರುವ ಕಡೆಗಳಲ್ಲಿ  ಸಾರ್ವಜನಿಕರಿಗೆ  ಉಪಯೋಗಕ್ಕೆ ಸಿಗುವ ರೀತಿಯಲ್ಲಿ ಶುಚಿತ್ವ ವಿರುವ ಶೌಚಾಲಯಗಳ ಅಗತ್ಯವಿದೆ.

ಇ-ಟಾಯ್ಲೆಟ್‌ ವಸ್ತುಸ್ಥಿತಿ ಪರಿಶೀಲಿಸಿದ್ದು  ಬಾಕಿ ಉಳಿದ ಕೆಲಸಗಳನ್ನು ಶೀಘ್ರವೇ ಪೂರ್ಣಗೊಳಿಸಿ ಬಳಕೆಗೆ ಯೋಗ್ಯವಾಗಿಸುವಂತೆ  ಗುತ್ತಿಗೆದಾರರಿಗೆ ಸೂಚಿಸಲಾಗುವುದು. -ರೂಪಾ ಡಿ.ಶೆಟ್ಟಿ  , ಮುಖ್ಯಾಧಿಕಾರಿ,  ಪುರಸಭೆ ಕಾರ್ಕಳ

ಬಂಗ್ಲೆಗುಡ್ಡೆಯಲ್ಲಿ  ಇ ಟಾಯ್ಲೆಟ್‌ ನಿರ್ಮಿಸಿ 4-5 ವರ್ಷಗಳಾಗಿವೆ. ಅದಿನ್ನು ಬಳಸುವಂತಿಲ್ಲ. ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಿಸಿದ್ದೇನೆ. ಮುಂದಿನ ಸಭೆಯಲ್ಲಿ ಪರಿಹಾರ ಆಗುವಂತೆ ಒತ್ತಾಯಿಸಿ  ಧರಣಿ ನಡೆಸುವೆ.-ಪ್ರತಿಮಾ ರಾಣೆ ,  ನಗರ ಸಭೆ ಸದಸ್ಯೆ

 

– ಬಾಲಕೃಷ್ಣ  ಭೀಮಗುಳಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.