ಚುನಾವಣಾ ಕರ್ತವ್ಯ ಗೌಜಿ: ಸಾರ್ವಜನಿಕ ಕೆಲಸಗಳಿಗೆ “ಗ್ರಹಣ’


Team Udayavani, Mar 14, 2019, 1:00 AM IST

chunavana-kartavya.jpg

ಉಡುಪಿ: “ನಾನು ಜಾಗದ ದಾಖಲೆಯ ಕೆಲಸಕ್ಕಾಗಿ ಬಂದಿದ್ದೇನೆ. ಅಧಿಕಾರಿಗಳು ಚುನಾವಣಾ ಕೆಲಸದಲ್ಲಿದ್ದಾರೆ ಎಂದು ಸಿಬಂದಿ ಹೇಳುತ್ತಿದ್ದಾರೆ. ಸಂಜೆವರೆಗೂ ಕಾಯುತ್ತೇನೆ. ಚುನಾವಣೆ ಬಂತೆಂದರೆ ಅಧಿಕಾರಿ, ಸಿಬಂದಿ ನಮ್ಮ ಕೆಲಸಕ್ಕೆ ಸಿಗದಿರುವುದು ದೊಡ್ಡ ತೊಂದರೆ’.

ಉಡುಪಿಯ ಕಂದಾಯ ಇಲಾಖೆ ಕಚೇರಿಗೆ ಮಂಗಳವಾರ ಆಗಮಿಸಿದ್ದ ಉದ್ಯಾವರದ ವಿಶ್ವನಾಥ ಅಮೀನ್‌ ಸೇರಿದಂತೆ ಹಲವು ಮಂದಿ ಮಧ್ಯಾಹ್ನದ ವೇಳೆಗೆ ಈ ರೀತಿಯ ಅಸಮಾಧಾನದ ಮಾತುಗಳನ್ನು ಹೊರಹಾಕಿದರು.
ಪಹಣಿ, ರೇಷನ್‌ ಕಾರ್ಡ್‌, ಬಿಲ್‌ ಮಂಜೂರಾತಿ, ಪ್ರಮಾಣಪತ್ರಗಳು ಮೊದಲಾದ ಕೆಲಸಗಳಿಗೆ ಚುನಾವಣೆ ಬಿಸಿ ತಟ್ಟಲಾರಂಭಿಸಿದೆ. ಚುನಾವಣಾ ಘೋಷಣೆಯಾದ ಎರಡೇ ದಿನಕ್ಕೆ ಸರಕಾರಿ ಯಂತ್ರಗಳು ಪೂರ್ಣ ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಂಡ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರ ಕೆಲಸ ಸ್ಥಗಿತದ ವಾತಾವರಣ ಕಂಡುಬರುತ್ತಿದೆ.

ಎಲ್ಲ ಇಲಾಖೆಗಳಿಂದಲೂ ನಿಯೋಜನೆ
ಶಿಕ್ಷಣ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ಆರೋಗ್ಯ ಸೇರಿ ಚುನಾವಣಾ ಕರ್ತವ್ಯಕ್ಕೆ ಈಗಾಗಲೇ ಅಧಿಕಾರಿ, ಸಿಬಂದಿಯ ನಿಯೋಜನೆ ನಡೆದಿದೆ. ಉಳಿದ ಸಿಬಂದಿಯ ನಿಯೋಜನಾ ಪ್ರಕ್ರಿಯೆ ಎರಡು ಮೂರು ದಿನಗಳೊಳಗೆ ಅಂತಿಮಗೊಳ್ಳಲಿದೆ. ಚುನಾವಣಾ ಪ್ರಕ್ರಿಯೆ ಸಾರ್ವಜನಿಕರ ಕೆಲಸಗಳ ಮೇಲೆ ದೊಡ್ಡ ಪರಿಣಾಮ ಬೀರದು ಎಂದು ಅಧಿಕಾರಿಗಳು ಹೇಳುತ್ತಾರಾದರೂ ವಾಸ್ತವ  ಭಿನ್ನವಾಗಿದೆ. ಚುನಾವಣೆಯದ್ದು ಹೆಚ್ಚುವರಿ ಕೆಲಸ. ಇದಕ್ಕಾಗಿ ಸಿಬಂದಿ ಮೂಲ ಇಲಾಖೆ ಪೂರ್ಣವಾಗಿ ಬಿಟ್ಟು ಬರಬೇಕು ಎಂದು ನಿಯಮವಿಲ್ಲ. ಚುನಾವಣೆ ವೇಳೆ ಕಚೇರಿ ಕೆಲಸಗಳು ತುಸು ವಿಳಂಬವಾಗಬಹುದು. ಆದರೆ ಸ್ಥಗಿತಗೊಂಡಿಲ್ಲ ಎಂದು ಹಿರಿಯ ಅಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದಾರೆ.

9 ಫ್ಲೈಯಿಂಗ್‌ ಸ್ಕ್ವಾಡ್‌
ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ 9 ಫ್ಲೈಯಿಂಗ್‌ ಸ್ಕ್ವಾಡ್‌ ರಚಿಸಲಾಗಿದೆ. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ 9 ತಂಡ 3 ಪಾಳಿಗಳಲ್ಲಿ ಕೆಲಸ ಮಾಡಲಿದೆ. 

ಪ್ರತಿಯೊಂದು ತಂಡದಲ್ಲಿಯೂ ತಾಲೂಕು ಮಟ್ಟದ ಓರ್ವ ಅಧಿಕಾರಿ, ಪೊಲೀಸ್‌ ಹಾಗೂ ವೀಡಿಯೋ ಗ್ರಾಫ‌ರ್‌ಗಳಿರುತ್ತವೆ. ವೀಡಿಯೋ ಕಣ್ಗಾವಲಿಗೆ 3 ತಂಡಗಳಿರುತ್ತವೆ. 

ಇದು ಕೂಡ ಓರ್ವ ಅಧಿಕಾರಿಯನ್ನೊಳಗೊಂಡಿರುತ್ತದೆ. ವೀಡಿಯೋ ವೀವಿಂಗ್‌ ತಂಡ ತನಗೆ ಬಂದ ವೀಡಿಯೋಗಳನ್ನು ಪರಿಶೀಲಿಸಲಿದೆ. ಇದಲ್ಲದೆ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನೋಡೆಲ್‌ ಅಧಿಕಾರಿಗಳಿರುತ್ತಾರೆ. ಇವುಗಳಲ್ಲಿ ಹೆಚ್ಚಿನ ತಂಡಗಳು ಒಂದು ತಿಂಗಳ ಹಿಂದೆಯೇ ಕೆಲಸ ಆರಂಭಿಸಿವೆ !. 

ಬಹುಮಾನದ ಮೂಲ ನೀಡುವ ಸವಾಲು!
ವಿವಿಧ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದಕ್ಕಾಗಿ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಬನ್ನಂಜೆಯ ಹಳೆ ಜಿ.ಪಂ. ಕಚೇರಿಯಲ್ಲಿ ಸುವಿಧ ಏಕಗವಾಕ್ಷಿ ಸೇವಾ ಕೇಂದ್ರ ಆರಂಭಿಸಲಾಗಿದೆ. ಕಳೆದೆರಡು ದಿನಗಳಿಂದ ನೇಮ, ಉತ್ಸವಗಳು ಸೇರಿದಂತೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುತ್ತಿದೆ. ಪೊಲೀಸ್‌ ಅನುಮತಿ ಕೂಡ ಇಲ್ಲಿಯೇ ನೀಡಲಾಗುತ್ತಿದೆ. ಆದರೆ ಕ್ರಿಕೆಟ್‌ ಪಂದ್ಯಾಕೂಟಕ್ಕೆ ಅನುಮತಿ ಕೋರಿ ಸಲ್ಲಿಸಲಾಗಿದ್ದ 2 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಟ್ರೋಫಿಯ ಬಹುಮಾನಕ್ಕೆ ಮೊತ್ತ ನೀಡುವವರ ಬಗ್ಗೆ ಸೂಕ್ತ ದಾಖಲೆ ನೀಡಲು ಆಯೋಜಕರು ವಿಫ‌ಲವಾದ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಗಿದೆ ಎನ್ನಲಾಗಿದೆ. ಈ ರೀತಿ ಕ್ರೀಡಾಕೂಟ ಆಯೋಜಿಸುವವರು ಬಹುಮಾನದ ಪ್ರಾಯೋಜಕರ ಕುರಿತು ಪೂರ್ಣ ಮಾಹಿತಿ ನೀಡುವುದು ಅನಿವಾರ್ಯವಾಗಿದೆ.

ಎಲೆಕ್ಷನ್‌ ಡ್ನೂಟಿ ನೆವ‌
ಕೆಲವೊಮ್ಮೆ ಒಂದು ಕಚೇರಿಯಿಂದ ಒಂದಿಬ್ಬರು ಮಾತ್ರ ಚುನಾವಣೆ ಕರ್ತವ್ಯಕ್ಕೆ ತೆರಳಿರುತ್ತಾರೆ. ಆದರೆ ಅಲ್ಲಿ ವಿಚಾರಿಸುವಾಗ ಎಲ್ಲರಿಗೂ ಚುನಾವಣಾ ಕರ್ತವ್ಯ ಎಂಬಂತೆ ಪ್ರತಿಕ್ರಿಯಿಸುತ್ತಾರೆ. ಕಾಫಿ ಕುಡಿಯಲು ಹೋಗಿದ್ದರೂ ಎಲೆಕ್ಷನ್‌ ಡ್ನೂಟಿಗೆ ಹೋಗಿದ್ದಾರೆ ಎಂದು ಸಾಗ ಹಾಕುವವರಿದ್ದಾರೆ. 
– ರಾಮಚಂದ್ರ ಆಚಾರ್ಯ, ಕಿನ್ನಿಮೂಲ್ಕಿ, ಸಾಮಾಜಿಕ ಹೋರಾಟಗಾರರು

ಸಾರ್ವಜನಿಕ ಕೆಲಸ ನಿಲ್ಲದು
ಚುನಾವಣಾ ಕರ್ತವ್ಯಕ್ಕೆ ಮೊದಲ ಆದ್ಯತೆ. ಆದರೆ ಎಲ್ಲ ಅಧಿಕಾರಿ, ಸಿಬಂದಿಯವರಿಗೂ ಎಲ್ಲ ದಿನಗಳಲ್ಲಿ ಅಥವಾ ದಿನವಿಡೀ ಚುನಾವಣಾ ಕರ್ತವ್ಯಗಳು ಇರುವುದಿಲ್ಲ. ತರಬೇತಿ ಸಂದರ್ಭ ನಿಯೋಜಿಸಲ್ಪಟ್ಟ ಎಲ್ಲರೂ ಭಾಗಿಯಾಗುತ್ತಾರೆ. ಫ‌ಲಾನುಭವಿಗಳ ಆಯ್ಕೆಯಂಥ ಕೆಲಸಗಳು ನಡೆಯುವುದಿಲ್ಲ. ಚುನಾವಣೆ ಕರ್ತವ್ಯವೆಂದು ಗೈರು ಹಾಜರಾದರೆ, ಅಂಥವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಪರಿಶೀಲಿಸುತ್ತೇವೆ. 
-ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ, ಜಿಲ್ಲಾ ಚುನಾಣಾಧಿಕಾರಿ ಉಡುಪಿ 

ಟಾಪ್ ನ್ಯೂಸ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

3-hegde

LS Polls: ಮಾಡಿದ ಕೆಲಸ ನೋಡಿ ಮತ ನೀಡಿ: ಜಯಪ್ರಕಾಶ್‌ ಹೆಗ್ಡೆ

Udupi-Chikkamagaluru ಲೋಕಸಭಾ ಕ್ಷೇತ್ರ: ಹಳೇ ಹುಲಿಗಳ ನಡುವೆ ಹೊಸ ಯುದ್ಧ

Udupi-Chikkamagaluru ಲೋಕಸಭಾ ಕ್ಷೇತ್ರ: ಹಳೇ ಹುಲಿಗಳ ನಡುವೆ ಹೊಸ ಯುದ್ಧ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-fusion

UV Fusion: ಇಂಡಿ ಪಂಪ್‌ ಮಟ..

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

5-fusion

UV Fusion: ನಾಟಕದ ಜೀವನಕ್ಕೆ ಯಾತಕ್ಕಾಗಿ ದೇವರ ಹೊಣೆ

4-uv-fusion

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

3-uv-fusion

Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.