ಉಡುಪಿ: 200ಕ್ಕೂ ಅಧಿಕ ವಿದ್ಯುತ್ ಕಂಬ ಧರಾಶಾಯಿ
Team Udayavani, Jun 14, 2019, 10:01 AM IST
ಉಡುಪಿ: ಎರಡು ದಿನಗಳಲ್ಲಿ ಗಾಳಿ – ಮಳೆಗೆ ಉಡುಪಿ ಜಿಲ್ಲೆಯಲ್ಲಿ 200ಕ್ಕೂ ಅಧಿಕ ವಿದ್ಯುತ್ ಕಂಬಗಳು, 10ಕ್ಕೂ ಅಧಿಕ ಟ್ರಾನ್ಸ್ಫಾರ್ಮರ್ಗಳು ಹಾನಿಗೊಳಗಾಗಿವೆ.
ಉಡುಪಿ-ಕಾರ್ಕಳ ತಾಲೂಕುಗಳನ್ನೊಳಗೊಂಡ ಉಡುಪಿ ಉಪ ವಿಭಾಗ ವ್ಯಾಪ್ತಿಯೊಂದರಲ್ಲೇ 150ಕ್ಕೂ ಅಧಿಕ ಕಂಬಗಳು ನೆಲಕ್ಕುರುಳಿವೆ. ಕುಂದಾಪುರ ಉವಿಭಾಗದಲ್ಲಿ 35 ಕಂಬಗಳು ಹಾನಿಗೀಡಾಗಿವೆ.
ಮಣಿಪಾಲ, ಪೆರ್ಡೂರಿನಲ್ಲಿ ವ್ಯಾಪಕ ಹಾನಿ
ಮಣಿಪಾಲ, ಪರ್ಕಳ, ಪೆರ್ಡೂರು ಮತ್ತು ಅಂಬಲಪಾಡಿ ಪ್ರದೇಶದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಬುಧವಾರ ರಾತ್ರಿ ಮಣಿಪಾಲ ಎಂಐಟಿ ಸಮೀಪ ಸಾಲು ಸಾಲಾಗಿ 7 ಕಂಬಗಳು ನೆಲಕ್ಕುರುಳಿವೆ. ಮಣಿಪಾಲ ಹೆದ್ದಾರಿ ಬದಿ 3 ಕಂಬಗಳು; ಪೆರ್ಡೂರು, ಹಿರಿಯಡಕ, ಕುದಿ ಪ್ರದೇಶದಲ್ಲಿ ಕಂಬಗಳು ನೆಲಕ್ಕುರುಳಿ ವಿದ್ಯುತ್ ವ್ಯತ್ಯಯ ಉಂಟಾಯಿತು.
ಅಲೆವೂರು, ಮಾರ್ಪಳ್ಳಿ, ಮಣಿಪುರ, ಅರ್ಬಿ, ಸರಳೇಬೆಟ್ಟು, ಪರ್ಕಳದಲ್ಲಿಯೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಉಡುಪಿ ನಗರ ವ್ಯಾಪ್ತಿಯಲ್ಲಿ 2 ಕಂಬಗಳು ಹಾನಿಗೊಂಡಿವೆ. ಕುಂದಾಪುರ ಭಾಗದಲ್ಲಿ 1 ವಿದ್ಯುತ್ ಪರಿವರ್ತಕ ಧರಾಶಾಯಿಯಾಗಿದ್ದು, 6 ಪರಿವರ್ತಕಗಳಿಗೆ ಹಾನಿಯಾಗಿದೆ. ಪರ್ಕಳದಲ್ಲಿ ವಿದ್ಯುತ್ ಪರಿವರ್ತಕಕ್ಕೆ ಹಾನಿಯಾಗಿದ್ದು, ಮನೆಗಳ ವಿದ್ಯುತ್ ಉಪಕರಣಗಳು, ವಯರಿಂಗ್ ಸುಟ್ಟು ಹೋಗಿವೆ. ಪೆರ್ಡೂರು ಪೇಟೆಯಲ್ಲಿ ಗುರುವಾರ ಅಪರಾಹ್ನ ಮರ ಬಿದ್ದು 3 ಮನೆಗಳಿಗೆ ಹಾನಿಯಾಗಿದೆ. ಮಣಿಪಾಲ ಕೈಗಾರಿಕಾ ವಲಯದಲ್ಲಿ ಸಿಡಿಲಿನಿಂದ ವಿದ್ಯುತ್ ಪರಿವರ್ತಕ ಸ್ಫೋಟಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್