ವಾಹನ ನೋಂದಣಿ ಮೇಲೆ ಕರಭಾರ


Team Udayavani, Mar 13, 2019, 1:00 AM IST

rto.png

ಕುಂದಾಪುರ: ವಾಹನಗಳ ನೋಂದಣಿ ಸಂದರ್ಭ ತೆರಿಗೆ ಜತೆಗೆ ಮೇಲೆ¤ರಿಗೆ ವಿಧಿಸುತ್ತಿರುವ ಸರಕಾರ ಈಗ ಮತ್ತೂಂದು ಕರಭಾರ ಹೊರಿಸುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ನಿರ್ವಹಣೆಗಾಗಿ ಪ್ರತೀ ವಾಹನಗಳ ನೋಂದಣಿ ತೆರಿಗೆ ಮೇಲೆ ವಿಧಿಸಲಾಗುತ್ತಿರುವ ಉಪತೆರಿಗೆ ಜತೆಗೆ ಹೆಚ್ಚುವರಿ ಉಪತೆರಿಗೆ (ಸೆಸ್‌) ವಿಧಿಸಲು ಆದೇಶ ಬಂದಿದೆ. ಆದರೆ ಇದಕ್ಕಾಗಿ ಇಲಾಖಾ ಸಾಫ್ಟ್ವೇರ್‌ ಇನ್ನೂ ಸಿದ್ಧಗೊಂಡಿಲ್ಲ. 

ತೆರಿಗೆ ಮತ್ತು ಉಪತೆರಿಗೆ
ಪ್ರಸ್ತುತ ಚಾಲ್ತಿಯಲ್ಲಿರುವ ತೆರಿಗೆ ಹಾಗೂ ಉಪತೆರಿಗೆ ವಸೂಲಾತಿ ದರ ಹೀಗಿದೆ. ಶೋರೂಂ ದರ 50 ಸಾವಿರ ರೂ. ಒಳಗಿರುವ ದ್ವಿಚಕ್ರ ವಾಹನಕ್ಕೆ ಶೇ.10, 1 ಲಕ್ಷ ರೂ. ಒಳಗೆ ಶೇ.18, 5 ಲಕ್ಷ ರೂ. ಒಳಗಿನ ಕಾರಿಗೆ ಶೇ.13, 5 ಲಕ್ಷ ರೂ. ಮೇಲಿನ ಕಾರಿಗೆ ಶೇ.14, 10 ಲಕ್ಷ ರೂ. ಮೇಲಿನ ಕಾರಿಗೆ ಶೇ.17, 20 ಲಕ್ಷ ರೂ.ಗೂ ಮೇಲ್ಪಟ್ಟ ಕಾರು ಹಾಗೂ ಇತರ ವಾಹನಗಳಿಗೆ ಶೇ.18 ತೆರಿಗೆ ವಿಧಿಸಲಾಗುತ್ತದೆ. ಎಲ್ಲ ಬಗೆಯ ವಾಹನಗಳಿಗೂ ಏಕರೂಪದಲ್ಲಿ ಆಯಾ ವಾಹನಗಳ ತೆರಿಗೆ ಮೇಲೆ ಶೇ.11 ಉಪಕರ (ಸೆಸ್‌) ವಿಧಿಸಲಾಗುತ್ತಿದೆ. 

ನಿಶ್ಚಿತ ಉಪತೆರಿಗೆ
ಈಗ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಅಧಿನಿಯಮ 2017ರಂತೆ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ನಿರ್ವಹಣೆಗಾಗಿ ನಿಧಿ ಸಂಗ್ರಹಿಸುವುದಕ್ಕಾಗಿ ನೋಂದಣಿ ಸಂದರ್ಭ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ 500 ರೂ. ನಿಶ್ಚಿತ ಉಪತೆರಿಗೆ, ಇತರ ಎಲ್ಲ ವರ್ಗದ ವಾಹನಗಳಿಗೆ 1 ಸಾವಿರ ರೂ. ನಿಶ್ಚಿತ ಉಪ ತೆರಿಗೆ ವಸೂಲಿಗೆ ಮಾ.6ರಂದು ಆದೇಶ ಹೊರಡಿಸಿದ್ದು, ಮಾ.8ರಿಂದ ಜಾರಿಗೆ ಬಂದಿದೆ. ರಿಕ್ಷಾಗಳಿಗೆ ಈವರೆಗೆ ಜೀವಿತಾವಧಿ ತೆರಿಗೆ ಎಂದು 2,750 ರೂ. ಮಾತ್ರ ಸ್ವೀಕರಿಸಲಾಗುತ್ತಿತ್ತು. ಇನ್ನು ಮುಂದೆ ಅದಕ್ಕೂ 500 ರೂ. ಮೇಲ್‌ತೆರಿಗೆ ಅನ್ವಯವಾಗಲಿದೆ.

ಯಾಕಾಗಿ?
ರಸ್ತೆ ಸುರಕ್ಷತೆಗೆ ಸಂಬಂಧಿಸಿ ಪ್ರಾಧಿಕಾರದ ನಿರ್ವಹಣೆಗೆ ಈ ಉಪಸುಂಕ ವಸೂಲಿ ಮಾಡಲಾಗುತ್ತಿದೆ. ರಸ್ತೆ ಅಪಘಾತಗಳ ಸಂಖ್ಯೆ ತಗ್ಗಿಸುವುದು ಪ್ರಾಧಿಕಾರದ ಗುರಿ. ಈಗಾಗಲೇ ಲೋಕೋಪಯೋಗಿ ಇಲಾಖೆ ಮೂಲಕ ಅಪಘಾತ ತಾಣಗಳ ಕಪ್ಪುಪಟ್ಟಿಯನ್ನು ಗುರುತಿಸಿ ಅಪಘಾತರಹಿತ ವಲಯ ಆಗಿಸಲಾಗಿದೆ. ಇದನ್ನು ವಿಸ್ತರಿಸುವ ಯೋಜನೆ ಪ್ರಾಧಿಕಾರಕ್ಕಿದೆ. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರಕಾರ ಕೂಡ ಅನುದಾನ ನೀಡುತ್ತದೆ. ಸಂಗ್ರಹಿತ ಮೊತ್ತದಲ್ಲಿ ಗಾಯಾಳುಗಳಿಗೆ ಸಹಾಯಧನ, ರಸ್ತೆ ಸುರಕ್ಷತೆ ಕುರಿತು ಸಂಶೋಧನೆ ನಡೆಸುವವರಿಗೆ ಉತ್ತೇಜನಧನ ನೀಡಲಾಗುವುದು. ಚಾಲನಾ ಪರವಾನಗಿ, ಸ್ಮಾರ್ಟ್‌ ಕಾರ್ಡ್‌ ನೀಡುವಾಗಲೂ ಸಂಗ್ರಹವಾಗುವ ಮೊತ್ತ ದೊಡ್ಡದೇ ಇದೆ. 

ಸಾಫ್ಟ್ವೇರ್‌ ಸಿದ್ಧವಾಗಿಲ್ಲ
ಆರ್‌ಟಿಒ ಸಾಫ್ಟ್ವೇರ್‌ನಲ್ಲಿ ಇನ್ನೂ ಈ ಸೆಸ್‌ ವಿಧಿಸಲು ಅವಕಾಶ ಮಾಡಿಕೊಟ್ಟಿಲ್ಲ. ಆದರೆ ತೆರಿಗೆ ಸ್ವೀಕರಿಸಲು ಸುತ್ತೋಲೆ ಬಂದಿದೆ. ಮಾ.14ರ ವೇಳೆಗೆ ತಂತ್ರಾಂಶ ಸಿದ್ಧಗೊಳ್ಳಲಿದೆ ಎನ್ನುತ್ತವೆ ಇಲಾಖಾ ಮೂಲಗಳು. ಅಲ್ಲಿಯ ವರೆಗೆ ಉಡುಪಿ ಸಹಿತ ಕೆಲವೆಡೆ “ವಿವಿಧ ಮೂಲಗಳಿಂದ ಬಂದ ಆದಾಯದ ಬಾಬ್ತು’ (ಮಿಸಲೇನಿಯಸ್‌) ಎಂದು ಸ್ವೀಕರಿಸಲಾಗುತ್ತಿದೆ. ಆದರೆ ತಂತ್ರಾಂಶ ಸಿದ್ಧವಾಗಿಲ್ಲ ಎಂದೇ ರಾಜ್ಯದ ಅನೇಕ ಕಡೆ ಉಪತೆರಿಗೆ ಪಡೆಯುತ್ತಿಲ್ಲ ಎನ್ನುವ ಮಾಹಿತಿಯೂ ಲಭ್ಯವಾಗಿದೆ. 

ಸರಿಯಾಗಲಿದೆ
ತಂತ್ರಾಂಶ ಸಿದ್ಧಗೊಳ್ಳುತ್ತಿದ್ದು, ಮಾ.6ರಿಂದ ಆದೇಶ ಜಾರಿಗೆ ಬಂದಿದೆ. ಸರಕಾರೀ ಸುತ್ತೋಲೆಯಂತೆ ಈಗಾಗಲೇ ನೋಂದಣಿಯಾಗುತ್ತಿರುವ ವಾಹನಗಳಿಗೆ ಉಪಕರ ಪಡೆದುಕೊಳ್ಳಲಾಗುತ್ತಿದೆ.
– ರಮೇಶ್‌ ಎಂ. ವರ್ಣೇಕರ್‌ ಉಡುಪಿ ಉಪಸಾರಿಗೆ ಆಯುಕ್ತರು

ಹೆಚ್ಚಾಯಿತು ತೆರಿಗೆ
ಸಣ್ಣಪುಟ್ಟ ವಾಹನ ಕೊಳ್ಳುವವರಿಗೆ ಕರಭಾರ ಹೆಚ್ಚಾಗಿದೆ. ಏಕಾಏಕಿ ಮೊತ್ತ ನಿಗದಿಪಡಿಸಿದ ಕಾರಣ ದ್ವಿಚಕ್ರ ವಾಹನ ನೋಂದಣಿ ಮಾಡುವವರಿಗೆ ಹೊರೆಯಾಗಲಿದೆ. 
– ಸಂತೋಷ್‌ ಕುಮಾರ್‌ ಜೈನ್‌, ಮಹಾವೀರ ಚಾಲನಾ ತರಬೇತಿ ಸಂಸ್ಥೆ ಮುಖ್ಯಸ್ಥರು

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.