ಜಾರಿಗೆಕಟ್ಟೆ ಜಂಕ್ಷನ್ ಬಸ್ ನಿಲ್ದಾಣ ತುಂಬ ನೀರು: ಪ್ರಯಾಣಿಕರ ಗೋಳು!
Team Udayavani, Jul 15, 2019, 5:16 AM IST
ಬೆಳ್ಮಣ್: ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮುಂಡ್ಕೂರು ಜಾರಿಗೆಕಟ್ಟೆ ಜಂಕ್ಷನ್ನ ಬಸ್ಸು ನಿಲ್ದಾಣದ ಮುಂಭಾಗ ನಿರಂತರವಾಗಿ ಜಲಾವೃತಗೊಳ್ಳುತ್ತಿದ್ದು ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಜೋರಾಗಿ ಮಳೆ ಬಂದಾಗ ಬಸ್ ನಿಲ್ದಾಣದ ಎದುರು ಕೆರೆಯಂತಾಗುತ್ತದೆ. ಇದರಿಂದ ಬಸ್ ನಿಲ್ದಾಣಕ್ಕೆ ಹೋಗುವುದೇ ಸಮಸ್ಯೆಯಾಗಿದೆ.
ಪ್ರಮುಖ ಜಂಕ್ಷನ್
ಈ ಜಾರಿಗೆಕಟ್ಟೆ ಜಂಕ್ಷನ್ನಲ್ಲಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನರ ಓಡಾಟವಿರುತ್ತದೆ. ಮೂಡಬಿದ್ರೆ, ಉಡುಪಿ, ಬೆಳ್ಮಣ್, ಕಾರ್ಕಳ, ಕಿನ್ನಿಗೋಳಿ, ಕಟೀಲು, ಮೂಲ್ಕಿ ಹಳೆಯಂಗಡಿ, ಮಂಗಳೂರು, ಬಜಪೆ ಕಡೆ ಸಂಚರಿಸುವ ಪ್ರಯಾಣಿಕರು ಈ ಜಂಕ್ಷನ್ ಮೂಲಕವೇ ಬಸ್ಸುಗಳನ್ನು ಬದಲಾಯಿಸಬೇಕು. ವಿದ್ಯಾರ್ಥಿಗಳೂ ಅತ್ಯಧಿಕ ಸಂಖ್ಯೆಯಲ್ಲಿ ಈ ಭಾಗದಿಂದ ಸಂಚರಿಸುತ್ತಿದ್ದು, ನಿರಂತರ ಮಳೆಯ ಸಂದರ್ಭ ಬಸ್ಸು ತಂಗುದಾಣ ಬಳಕೆಗೆ ಸಿಗದಂತಾಗಿದೆ.
ಸಮರ್ಪಕ ಚರಂಡಿಯಿಲ್ಲ
ಮಳೆ ನೀರು ಹರಿಯಲು ಸಮರ್ಪಕ ಚರಂಡಿಯಿಲ್ಲ. ಜತೆಗೆ ತಂಗುದಾಣದ ಎದುರು ತಗ್ಗು ಪ್ರದೇಶವಿದೆ. ಇದರಿಂದ ನೀರು ಹರಿಯದೆ ಸಮಸ್ಯೆಯಾಗುತ್ತದೆ. ಕೂಡಲೇ ಮುಂಡ್ಕೂರು ಗ್ರಾ.ಪಂ. ಇಲ್ಲಿನ ಚರಂಡಿ ಸಮಸ್ಯೆ ಸರಿಪಡಿಸಬೇಕೆನ್ನುವುದು ಜನರ ಆಗ್ರಹವಾಗಿದೆ.
ತಾತ್ಕಾಲಿಕ ಕ್ರಮ
ಕ್ರಮ ಕೈಗೊಳ್ಳಬೇಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ