ಶಿರೂರು ಅಣೆಕಟ್ಟು ಎತ್ತರಿಸಿದರೂ ನೀರಿನ ಕೊರತೆ ಸಂಭವ


Team Udayavani, Apr 3, 2018, 6:15 AM IST

310318Astro01.jpg

ಉಡುಪಿ: ದಿನೇ ದಿನೇ ನಗರದಲ್ಲಿ ಹೆಚ್ಚುತ್ತಿರುವ ಕುಡಿಯುವ ನೀರಿನ ಬೇಡಿಕೆಯನ್ನು ಸಮರ್ಪಕವಾಗಿ ಈಡೇರಿಸುವುದೇ ನಗರಸಭೆಗೆ ಸವಾಲಾಗಿ ಪರಿಣಮಿಸಿದೆ. 

ಈ ಮಧ್ಯೆ ಶಿರೂರು ಬಳಿ ಇರುವ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಮಟ್ಟ ಏರಿಸಿದರೂ ಬಹಳ ಪ್ರಯೋಜನವಾಗದು ಎಂಬ ಅಭಿಪ್ರಾಯ ಕೇಳಿಬಂದಿದೆ.

ಪ್ರಸ್ತುತ ಒಂದು ಮೀಟರ್‌ನಷ್ಟು ಎತ್ತರದ ಬಂಡ್‌ಗಳನ್ನು ಹಾಕಿ ನೀರು ನಿಲ್ಲಿಸಲಾಗುತ್ತಿದೆ. ಇದರಿಂದ ಸಿಗಬಹುದಾದ ಒಂದು ಮೀಟರ್‌ ಹೆಚ್ಚುವರಿ ನೀರು ಕನಿಷ್ಠ ಒಂದು ವಾರಕ್ಕೆ ಸಾಲಬಹುದು. ಆದರೆ ಇದಕ್ಕಾಗಿ ಸ್ಥಳೀಯ ಸುಮಾರು 70 ಎಕ್ರೆ ಕೃಷಿ ಭೂಮಿ ಮುಳುಗಡೆಯಾಗಲಿದೆ. ಜತೆಗೆ ಇಲ್ಲಿಯ ನದಿಪಾತ್ರ ಕಲ್ಲುಬಂಡೆಯಿಂದ ಕೂಡಿದ್ದು, ಬಹಳ ನೀರು ಸಂಗ್ರಹಿಸಲಾಗದು. ಇಲ್ಲಿನ ಗುಂಡಿಗಳಲ್ಲಿ ನೀರು ನಿಂತರೆ ಪುನಾ ಪಂಪ್‌ಗ್ಳಮೂಲಕ ಬಜೆಗೆ ಹಾಯಿಸಬೇಕು ಎನ್ನುತ್ತಾರೆ ತಾಂತ್ರಿಕ ಪರಿಣಿತರು.

ವಾರಾಹಿಯಿಂದ 21 ಎಂಎಲ್‌ಡಿ ನೀರು 
ನಗರದ ಜನರಿಗೆ ವಾರಾಹಿಯಿಂದ ಕುಡಿಯುವ ನೀರು ಪೂರೈಸಲು ಯೋಜಿಸಲಾಗಿದೆ. ಸುಮಾರು 38.ಕಿ.ಮೀ. ಪೈಪ್‌ಲೈನ್‌ ಮೂಲಕ 30 ಎಂಎಲ್‌ಡಿ ನೀರು ತರಲು 300 ಕೋ.ರೂ. ವ್ಯಯಿಸಲಾಗುತ್ತಿದೆ. ಈ ನೀರನ್ನು 12 ಗ್ರಾಮಗಳ ಮೂಲಕ ಹಾಯಿಸುವುದರಿಂದ ಆ ಗ್ರಾಮಗಳಿಗೂ ನೀರು ಪೂರೈಸಬೇಕು. ಅದಕ್ಕಾಗಿ ಕನಿಷ್ಠ 3 ಎಂಎಲ್‌ಡಿ ನೀರು ಬಳಕೆಯಾಗಲಿದೆ. ನೀರನ್ನು ತರುವಾಗ ಶೇ. 15 ರಿಂದ ಶೇ.20 ರಷ್ಟು ಸೋರಿಕೆಯಾಗಬಹುದು. ಅಂದರೆ ಸುಮಾರು 6 ಎಂಎಲ್‌ಡಿ. ಒಟ್ಟೂ 9 ಎಂಎಲ್‌ಡಿ ಬಳಕೆಯಾಗಿ 21 ಎಂಎಲ್‌ಡಿ ನೀರು ನಗರಕ್ಕೆ ಸಿಗಲಿದೆ.
 
ದೂರದೃಷ್ಟಿಯ ಕೊರತೆ
ವಾರಾಹಿಯಿಂದ ಉಡುಪಿಗೆ ನೀರು ತರುವ ಪೈಪ್‌ಗ್ಳ ವ್ಯಾಸ 85 ಮೀ. ರ ಬದಲು 1.3 ಮೀ. ವ್ಯಾಸವಿದ್ದರೆ ಸೂಕ್ತ. ನೀರೆತ್ತುವ ಪಂಪ್‌ಗ್ಳನ್ನು ಕಾಲ ಕ್ರಮೇಣ ಬದಲಿಸಬಹುದು. ಆದರೆ ಪೈಪ್‌ಗ್ಳನ್ನು ಬದಲಿಸಲಾಗದು. ಹಾಗಾಗಿ ಭವಿಷ್ಯದ ದೃಷ್ಟಿಯಿಂದ 1.3 ಮೀ. ವ್ಯಾಸದ ಪೈಪ್‌ ಅಳವಡಿಸಬೇಕು ಎನ್ನುತ್ತಾರೆ ತಜ್ಞರು.

ನೀರು ಪೂರೈಕೆಗೆ 117 ಕೋ.ರೂ.
ನಗರಕ್ಕೆ ವಾರಾಹಿ ನೀರು ಪೂರೈಸಲು 117 ಕೋ.ರೂ.ಗಳ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಇದರಲ್ಲಿ 
347 ಕಿ.ಮೀ. ಪರ್ಯಾಯ ಪೈಪ್‌ಲೈನ್‌ ಮತ್ತು 34 ಸಾವಿರ ಅಟೋಮ್ಯಾಟಿಕ್‌ ಮೀಟರ್‌ ರೀಡಿಂಗ್‌ ಉಪಕರಣಗಳ ಅಳವಡಿಕೆಯೂ ಸೇರಿದೆ. ಜತೆಗೆ ಎಂಟು ವರ್ಷಗಳ ಕಾಲ ವಾರ್ಷಿಕ 9 ಕೋ.ರೂ.ಗಳಂತೆ ನಿರ್ವಹಣಾ ವೆಚ್ಚವೂ ಸೇರಿದೆ.

5.5 ಕೋ.ರೂ. ವಿದ್ಯುತ್‌ ಬಿಲ್‌
ನಗರಸಭೆಯು ಸುಮಾರು 20 ಸಾವಿರ ನೀರಿನ ಸಂಪರ್ಕದಿಂದ ವಾರ್ಷಿಕ 9 ಕೋ.ರೂ. ಆದಾಯ ಪಡೆಯುತ್ತಿದೆ. ನೀರು ಶುದ್ಧೀಕರಣ ಘಟಕ, ಬಜೆ ನೀರೆತ್ತುವ ಪಂಪ್‌ಗ್ಳು, ಸ್ಥಳೀಯ ನೀರು ಪೂರೈಕೆ- ಹೀಗೆ ಇವುಗಳ ವಿದ್ಯುತ್‌ ಬಿಲ್‌ ಪ್ರತಿ ವರ್ಷಕ್ಕೆ 5.5 ಕೋ.ರೂ. ಬರುತ್ತಿದೆ. ಈ ಹಂತದಲ್ಲಿ  ವಾರ್ಷಿಕ ನಿರ್ವಹಣಾ ವೆಚ್ಚ 9 ಕೋ.ರೂ. ಬಂದರೆ ಸಾಕಾಗುವುದೇ ಎಂಬುದು ನಗರಸಭೆ ಅಧಿಕಾರಿಗಳ ಚಿಂತೆ.

ಶೀಘ್ರ ವಾರಾಹಿ ಟೆಂಡರ್‌ 
ವಾರಾಹಿ ಯೋಜನೆಯ ಸಾಧಕ ಬಾಧಕಗಳ ಅಧ್ಯಯನ ನಡೆಯಬೇಕೆಂಬ ಮಾತು ಕೇಳಿಬರುತ್ತಿರುವಾಗಲೇ ಟೆಂಡರ್‌ ಪ್ರಕ್ರಿಯೆ ಏಪ್ರಿಲ್‌ ಮೊದಲ ವಾರದಲ್ಲಿ ನಡೆಯುವ ಸಂಭವವಿದೆ. ಬೇಸಗೆಯ ಒಂದೆರಡು ತಿಂಗಳ ಬಳಕೆಗೆ 300 ಕೋಟಿ ರೂ. ವಿನಿಯೋಗವಾಗುವುದು ಸೂಕ್ತವೇ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಶೀಂಬ್ರ ಪ್ರಾಂತ ಉತ್ತಮ
ಸ್ವರ್ಣಾ ನದಿ ಹರಿದು ಅರಬ್ಬಿ ಸಮುದ್ರ ಸೇರುವ ಮುನ್ನ ಇರುವ ಪ್ರದೇಶ ಸುಮಾರು 8 ಕಿ.ಮೀ. ವಿಸ್ತಾರವಾಗಿದೆ. ಹೆರ್ಗ, ಶೆಟ್ಟಿ ಬೆಟ್ಟು ಪರಿಸರದಲ್ಲಿ ನದಿಯ ನೀರು ಆಳದಲ್ಲಿ ಸಂಗ್ರಹವಾಗುತ್ತಿದ್ದು, ಇಲ್ಲಿ ನೀರು ನಿಲ್ಲಿಸಿದರೆ ಹೆಚ್ಚು ಲಾಭವಾಗಬಹುದು ಎನ್ನುತ್ತಾರೆ ಪರಿಣಿತರು.

ಏನಿದು ಎಎಂಆರ್‌ ?
ಅಟೋಮ್ಯಾಟಿಕ್‌ ಮೀಟರ್‌ ರೀಡಿಂಗ್‌ ವ್ಯವಸ್ಥೆ ಜಾರಿಗೆ ಬರಲಿದೆ. ಪ್ರಸ್ತುತ ಇರುವ ನೀರಿನ ಮೀಟರ್‌ಗಳನ್ನು ತೆಗೆದು ಈ ಎಂಎಂಆರ್‌ ಗಳನ್ನು ಅಳವಡಿಸಲಾಗುತ್ತದೆ. ಈ ಮೀಟರ್‌ನಲ್ಲಿ ಸಿಮ್‌ ಅಳವಡಿಸಿದ್ದು, ಪ್ರತಿ ಗ್ರಾಹಕರಿಂದ ಸರ್ವರ್‌ ಮೂಲಕ ಮಾಹಿತಿ ರವಾನೆಯಾಗುತ್ತದೆ. ಹೀಗಾದಾಗ ಮಾಸಿಕ ಮೀಟರ್‌ ಮಾಪನ ಓದಬೇಕಾಗಿಲ್ಲ ಹಾಗೂ ನೀರು ಸೋರಿಕೆ-ಅಪವ್ಯಯವನ್ನೂ ಪತ್ತೆ ಹಚ್ಚಬಹುದು. 

– ಆಸ್ಟ್ರೋ ಮೋಹನ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.