ಕೊರವಡಿ ಹೊಳೆಕಟ್ಟು: ದಲಿತ ಕಾಲನಿಯಲ್ಲಿ ತೀವ್ರ ಜಲಕ್ಷಾಮ
Team Udayavani, May 15, 2019, 6:20 AM IST
ತೆಕ್ಕಟ್ಟೆ: ಕುಂಭಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರವಡಿ ಹೊಳೆಕಟ್ಟು ದಲಿತ ಕಾಲನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಈ ಭಾಗದ 15 ಮನೆಗಳು ನೀರಿಲ್ಲದೆ ಬಳಲಿವೆ. ಪರಿಸರದಲ್ಲಿ ಬಾವಿ ಇದ್ದರೂ ಉಪ್ಪು ನೀರಾಗಿದೆ. ಕೆಲವು ಬಾವಿಗಳಲ್ಲಿ ನೀರು ಆರಿದೆ.
ಮನೆ ಬಳಕೆಗೂ ಸಾಲುತ್ತಿಲ್ಲ
ಪ್ರತಿ ಮನೆಗಳಿಗೆ ನಳ್ಳಿ ನೀರಿನ ವ್ಯವಸ್ಥೆ ಇದೆ. ಸರಕಾರಿ ಬಾವಿಯಿಂದ ನೀರು ಪೂರೈಕೆ ಮಾಡುತ್ತಾರೆ. ಆದರೆ ಸಾಕಷ್ಟು ಒತ್ತಡ ಇಲ್ಲದ್ದರಿಂದ ನೀರ ಹರಿವು ಕಡಿಮೆಯಾಗಿ ದಿನ ಬಳಕೆಗೆ ಬೇಕಾಗುವಷ್ಟು ನೀರು ಸಿಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿ ದಯಾನಂದ ಹೊಳೆಕಟ್ಟು.
ಪ್ರಯೋಜನಕ್ಕಿಲ್ಲದ ಬಾವಿ
ಪ್ರತಿ ವರ್ಷ ಬೇಸಗೆ ಆರಂಭವಾದರೆ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿದೆ. ಈ ಭಾಗದಲ್ಲಿ ಮೂರು ಸರಕಾರಿ ಬಾವಿಯಲ್ಲಿ ಸಮೃದ್ಧ ನೀರಿದ್ದರೂ ಉಪ್ಪು ನೀರಿಂದಾಗಿ ಬಳಕೆಗೆ ಯೋಗ್ಯವಾಗಿಲ್ಲ. ಹೊಳೆಕಟ್ಟಿನ ಉತ್ತರ ಭಾಗದಲ್ಲಿರುವ ಮನೆಗಳಿಗೆ ಪಣ್ಹತ್ವಾರ್ ಬೆಟ್ಟು ಸಮೀಪದಿಂದ ನೀರು ಪೂರೈಕೆಯಾಗುತ್ತಿದೆ. ಅದೂ ಕೂಡ ಕಲುಷಿತವಾಗಿದೆ ಎಂದು ಇಲ್ಲಿನವರಾದ ರಮೇಶ್ ಹೊಳೆಕಟ್ಟು ಅವರು ಹೇಳುತ್ತಾರೆ.
ವಾರ್ಡ್ನವರ ಬೇಡಿಕೆ
– ಗ್ರಾ.ಪಂ. ತತ್ಕ್ಷಣವೇ ಟ್ಯಾಂಕರ್ನಲ್ಲಿ ನೀರು ಪೂರೈಕೆ ಮಾಡಬೇಕು
– ಪೈಪ್ಲೈನ್ ನೀರು ದುರಪಯೋಗಪಡಿಸಿ ಕೊಳ್ಳುತ್ತಿರುವವರ ಬಗ್ಗೆ ಕ್ರಮ ಕೈಗೊಳ್ಳಬೇಕು
– ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ