ನಂಬರ್‌ ಪ್ಲೇಟ್‌ ನಕಲಿ ದಂಧೆಗಿಲ್ಲ ಬ್ರೇಕ್‌!

ವ್ಯವಸ್ಥಿತ ಜಾಲ ರಾಜಾರೋಷ

Team Udayavani, Mar 18, 2020, 6:10 AM IST

ನಂಬರ್‌ ಪ್ಲೇಟ್‌ ನಕಲಿ ದಂಧೆಗಿಲ್ಲ  ಬ್ರೇಕ್‌!

ಸಾಂದರ್ಭಿಕ ಚಿತ್ರ

ಉಡುಪಿ: ಒಂದೆಡೆ ಹೊಸ ವಾಹನಗಳ ಅಬ್ಬರ; ಮತ್ತೂಂದೆಡೆ ಸೆಕೆಂಡ್‌ ಹ್ಯಾಂಡ್‌ ವಾಹನಗಳ ದಂಧೆ. ಈ ಎರಡರ ನಡುವೆ ಖದೀಮರು ನಂಬರ್‌ ಪ್ಲೇಟ್‌ಗಳನ್ನು ತಿರುಚುವ ಮೂಲಕ ಜನರನ್ನು ವಂಚಿಸಿ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಈ ನಕಲಿ ಮಾರಾಟ ಜಾಲ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ನಡೆಯುತ್ತಿದೆ. ಕಮಿಷನರೆಟ್‌ ವ್ಯಾಪ್ತಿಯಲ್ಲಿ ಸಿಸಿಟಿವಿ ದೃಶ್ಯಾವಳಿಗಳಲ್ಲಿ ನಿಯಮ ಉಲ್ಲಂಫಿಸುವವರಿಗೆ ನೇರವಾಗಿ ನೋಟಿಸ್‌ ಬರುವ ಕ್ರಮ ಪ್ರಾರಂಭವಾದಾಗಿನಿಂದ ನಕಲಿ ನಂಬರ್‌ ಪ್ಲೇಟ್‌ ಪ್ರಕರಣಗಳೂ ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

ಮಣಿಪಾಲದ ಮಹಿಳೆಗೆ ಬೆಂಗಳೂರಿನಿಂದ ನೋಟಿಸ್‌
ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲದ ಮಹಿಳೆ
ಯೋರ್ವರಿಗೆ ಬೆಂಗಳೂರು ನಗರ ಟ್ರಾಫಿಕ್‌ ಠಾಣೆಯಿಂದ ನೋಟಿಸ್‌ ಬಂತು. ನೋಟಿಸ್‌ನಲ್ಲಿದ್ದ ಸ್ಕೂಟರ್‌ ಹೆಸರು ಹೋಂಡಾ ಡಿಯೋ ಕೆಎ 20 ಇಕ್ಯೂ 7181. ನೋಟಿಸ್‌ ಪಡೆದ ಮಹಿಳೆಯ ವಾಹನ ಟಿವಿಎಸ್‌ ಝೆಸ್ಟ್‌. ಆದರೆ ವಾಹನ ಸಂಖ್ಯೆ ಅದೇ! ಮಹಿಳೆ ಮಾತ್ರ ತಾನು ಮಣಿಪಾಲ ಬಿಟ್ಟು ಬೇರೆ ಎಲ್ಲಿಗೂ ವಾಹನ ತೆಗೆದು ಕೊಂಡು ಹೋಗಿಲ್ಲ ಅನ್ನುತ್ತಿದ್ದಾರೆ.ಇಂತಹ ಘಟನೆಗಳು ಇದು ಮೊದಲೇನಲ್ಲ.

ನಕಲಿ ಮಾರಾಟ ಜಾಲ ಸಕ್ರಿಯ
ಕಳವು ಮಾಡಿದ ವಾಹನಗಳಿಗೆ ಈಗ ಇರುವ ಚಾಸಿಸ್‌ ಸಂಖ್ಯೆಯ ದಾಖಲೆ ಗಳನ್ನು ವಿರೂಪಗೊಳಿಸುವುದು ಒಂದು ವಿಧವಾದರೆ, ಮತ್ತೂಂದೆಡೆ ಅಸ್ತಿತ್ವದಲ್ಲಿ ರುವ ದಾಖಲೆಗಳನ್ನು ಆಧರಿಸಿ ಚಾಸಿಸ್‌ ಸಂಖ್ಯೆಯನ್ನು ಬದಲಿಸಿ ಮಾರಾಟ ಮಾಡುವ ಜಾಲವೂ ಸಕ್ರಿಯವಾಗಿದೆ. ದಂಧೆಕೋರರು ಹಳೆಯ ವಾಹನಗಳ ಚಾಸಿಸ್‌ ಅನ್ನು ನವೀಕರಿಸಿ, ಅನಂತರ ನಕಲಿ ನಂಬರ್‌ ಪ್ಲೇಟ್‌ ತಯಾರು ಮಾಡುತ್ತಾರೆ. ವಾಹನದ ದಾಖಲೆಗಳು, ನಂಬರ್‌ ಪ್ಲೇಟ್‌, ಚಾಸಿಸ್‌ ಸಂಖ್ಯೆ ಮತ್ತು ಎಂಜಿನ್‌ ಸಂಖ್ಯೆಗಳನ್ನೂ ಇದೇ ರೀತಿ ನಕಲು ಮಾಡುವ ಜಾಲವೂ ಸಕ್ರಿಯವಾಗಿದೆ.

ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ ಅಸ್ತ್ರ
ನಂಬರ್‌ ಪ್ಲೇಟ್‌ಗಳನ್ನು ಬದಲಾವಣೆ ಮಾಡುವುದನ್ನು ತಡೆಯುವ ಉದ್ದೇಶದಿಂದ ಒಂದೇ
ವಿನ್ಯಾಸವಿರುವ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ ಜಾರಿಗೆ ತರಲಾಗಿತ್ತು. ಅಲ್ಯೂ ಮೀನಿಯಂನಿಂದ ತಯಾರಿಸಲಾದ ಪ್ಲೇಟ್‌ ಇದಾಗಿದ್ದು, ವಾಹನದ ನೋಂದಣಿ ಸಂಖ್ಯೆಯ ಜತೆಗೆ ಪ್ರತೀ ಪ್ಲೇಟ್‌ನಲ್ಲೂ 7 ಅಂಕಿಗಳ ವಿಶಿಷ್ಟ ಲೇಸರ್‌ ಕೋಡ್‌ ಇರುತ್ತದೆ. ಒಂದುವೇಳೆ ಎಡವಟ್ಟಾದರೆ ಆರ್‌ಟಿಒ ಕಚೇರಿಯಿಂದಲೇ ಹೊಸ ನಂಬರ್‌ ಪ್ಲೇಟ್‌ ಪಡೆಯಬೇಕಾಗುತ್ತದೆ.

ಐಷಾರಾಮಿ ವಾಹನಗಳಲ್ಲೂ ನಕಲಿ
ಐಷಾರಾಮಿ ವಾಹನಗಳನ್ನು ಕಡಿಮೆ ಬೆಲೆಗೆ ಖರೀದಿಸಿ ತೆರಿಗೆ ತಪ್ಪಿಸುವ ಉದ್ದೇಶದಿಂದ ನಕಲಿ ನಂಬರ್‌ ಪ್ಲೇಟ್‌ಗಳನ್ನು ಬಳಸುವವರು ಇದ್ದಾರೆ. ಪೊಲೀಸರು ಐಷಾರಾಮಿ ವಾಹನಗಳನ್ನು ಹೆಚ್ಚಾಗಿ ತಪಾಸಣೆ ಮಾಡುವುದಿಲ್ಲ ಎಂಬುದು ಅಂಥವರ ಭ್ರಮೆ. ಹೊಸ ಕಾರು ಖರೀದಿಸಿದಾಗ ಶೋರೂಂನಲ್ಲಿ ತಾತ್ಕಾಲಿಕ ನಂಬರ್‌ ಪ್ಲೇಟ್‌ ನೀಡುತ್ತಾರೆ. ಒಂದು ತಿಂಗಳವರೆಗೆ ಇದರ ಅವಧಿ ಇರುತ್ತದೆ. ಅನಂತರ ಹೊಸ ಸಂಖ್ಯೆ ಪಡೆಯಬೇಕಾಗುತ್ತದೆ. ಆದರೆ ಹೆಚ್ಚಿನವರು ಇದನ್ನು ಮಾಡದೆ ನಕಲಿಯ ಮೊರೆ ಹೋಗುತ್ತಾರೆ.

ನಕಲಿ ವಾಹನ ಸಂಖ್ಯೆ ಅಥವಾ ವಾಹನ ಸಂಖ್ಯೆಯ ಅಸ್ಪಷ್ಟತೆದಿಂದಾಗಿ ಈ ರೀತಿ ತಪ್ಪಾಗಿಯೂ ನೋಟಿಸ್‌ ಬರಬಹುದು. ಅದರಲ್ಲಿ ಸೂಚಿಸಿರುವ ಸಂಖ್ಯೆಗೆ ಕರೆ ಮಾಡಿ ದಾಖಲೆ ಸಹಿತ ವಿವರಣೆ ನೀಡಿದರೆ ಉತ್ತಮ. ಇಲ್ಲದಿದ್ದರೆ ದಂಡ ಪಾವತಿಸಬೇಕಾಗುತ್ತದೆ.
– ರಾಮಕೃಷ್ಣ ರೈ , ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ

- ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.