ಸಕಾಲದಲ್ಲಿ ಸಿಗದ ಬಿತ್ತನೆ ಬೀಜ ನೆಲಗಡಲೆ ಕೃಷಿಕರು ಕಂಗಾಲು


Team Udayavani, Nov 24, 2020, 1:52 PM IST

ಸಕಾಲದಲ್ಲಿ ಸಿಗದ ಬಿತ್ತನೆ ಬೀಜ ನೆಲಗಡಲೆ ಕೃಷಿಕರು ಕಂಗಾಲು

ಕುಂದಾಪುರ, ನ. 23:  ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ನೆಲಗಡಲೆ (ಶೇಂಗಾ) ಕೃಷಿಯನ್ನು ಉಡುಪಿ ಜಿಲ್ಲೆಯ ಕರಾವಳಿ ತೀರದ ರೈತರು ಹಿಂಗಾರು ಹಂಗಾಮಿನಲ್ಲಿ ಬೆಳೆಯುತ್ತಿದ್ದು, ಈ ಬಾರಿ ಸಕಾಲದಲ್ಲಿ ಬಿತ್ತನೆ ಬೀಜ ಲಭ್ಯವಾಗದೆ ಸಂಕಷ್ಟಕ್ಕೀಡಾಗಿದ್ದಾರೆ.

ಜಿಲ್ಲೆಯ ಕುಂದಾಪುರ, ಬೈಂದೂರು, ಕೋಟ ವ್ಯಾಪ್ತಿಯ 18,000 ಹೆಕ್ಟೇರ್‌ ಪ್ರದೇಶದಲ್ಲಿ 4 ಸಾವಿರಕ್ಕೂ ಹೆಚ್ಚು ರೈತರು ನೆಲಗಡಲೆ ಬೆಳೆಯುತ್ತಾರೆ. ಕೆಲವು ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜ ಅಲ್ಪ ಪ್ರಮಾಣದಲ್ಲಿ ಪೂರೈಕೆಯಾಗಿದ್ದು, ಕೆಲವು ಕೇಂದ್ರಗಳಿಗೆ ಇನ್ನೂ  ಬಂದಿಲ್ಲ.

ಬೇಗ ಬೆಳೆಯುವ ತಳಿ ಬೇಕು :

ಈ ಪ್ರದೇಶದಲ್ಲಿ ಉಪ್ಪುನೀರಿನ ಪ್ರಭಾವ ಹೆಚ್ಚಾಗಿರುವುದರಿಂದ ಕಡಿಮೆ ತೇವಾಂಶ ಹಾಗೂ ಕಡಿಮೆ ದಿನಗಳಲ್ಲಿ ಬೆಳೆಯುವ ಬೀಜದ ಅಗತ್ಯವಿದೆ. 120 ಹಾಗೂ 90 ದಿನಗಳಲ್ಲಿ ಬೆಳೆಯುವ 2 ತಳಿಗಳಿದ್ದು ಶೇ. 60ರಷ್ಟು ಜವಾರಿ (90 ದಿನಗಳದ್ದು) ಬೀಜ ಬೇಕಿದ್ದರೆ, ಶೇ. 40ರಷ್ಟು ಮಾತ್ರ ಜಿಪಿಬಿಡಿ-4 (120 ದಿನಗಳದ್ದು) ಅಗತ್ಯವಿದೆ. ಆದರೆ ಇಲ್ಲಿಗೆ 120 ದಿನಗಳಲ್ಲಿ ಬೆಳೆಯುವ ಜಿಪಿಬಿಡಿ-4 ತಳಿಯ ಬೀಜವನ್ನೇ ಹೆಚ್ಚಾಗಿ ಪೂರೈಕೆ ಮಾಡುತ್ತಾರೆ ಎನ್ನುವುದು ರೈತರ ಆರೋಪ.

ಹೊರಗೆ ದುಬಾರಿ ದರ :

ರೈತ ಸಂಪರ್ಕ ಕೇಂದ್ರದಲ್ಲಿ ಒಂದು ಕೆ.ಜಿ. ಬೀಜಕ್ಕೆ 70 ರೂ. ಇದ್ದು ರೈತರಿಗೆ ಈ ಬಾರಿ ಸಬ್ಸಿಡಿ ದರದಲ್ಲಿ 54 ರೂ. ನಿಗದಿಪಡಿಸಲಾಗಿದೆ. ಅದೇ ಖಾಸಗಿ ಅಥವಾ ಬೇರೆ ಕಡೆಯಿಂದ ತರಿಸುವುದಾದರೆ 60ರಿಂದ 70 ರೂ. ವರೆಗೂ ಇದೆ. ಕುಂದಾಪುರ ರೈತಸಂಪರ್ಕ ಕೇಂದ್ರಕ್ಕೆ 50 ಕ್ವಿಂಟಾಲ್‌ ಟಿಎಂವಿ – 2 ಬೀಜ ತರಿಸಲಾಗಿದೆ. ಬೈಂದೂರಲ್ಲಿ 300 ಕ್ವಿಂಟಾಲ್‌ ಬೇಡಿಕೆಯಿದ್ದು, ಈಗ 80 ಕ್ವಿಂಟಾಲ್‌ ಜಿಪಿಬಿಡಿ-4 ತರಿಸಲಾಗಿದೆ.

ದ್ವಿದಳ ಧಾನ್ಯ ದಾಸ್ತಾನು :

ಉಡುಪಿ ಜಿಲ್ಲೆಯಲ್ಲಿ  ಈ ಹಂಗಾಮಿನಲ್ಲಿ ನೆಲಗಡಲೆ ಹೊರತುಪಡಿಸಿ ಉದ್ದು, ಹೆಸರು ಬೆಳೆಯಲಾಗುತ್ತಿದ್ದು, ಅವುಗಳನ್ನು ಈಗಾಗಲೇ ಮಂಡ್ಯದಿಂದ ಅಗತ್ಯವಿರುವಷ್ಟು ತರಿಸಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಗತ್ಯವಿರುವಷ್ಟು ಪೂರೈಕ : ಈ ಬಾರಿ ಜಿಲ್ಲೆಯಿಂದ  650 ಕ್ವಿಂಟಾಲ್‌ ನೆಲಗಡಲೆ ಬೀಜಕ್ಕೆ ಬೇಡಿಕೆ ಕಳುಹಿಸಲಾಗಿದೆ. ಕೋಟ ರೈತ ಸಂಪರ್ಕ ಕೇಂದ್ರಕ್ಕೆ ಅಗತ್ಯವಿರುವಷ್ಟು ತರಿಸಲಾಗಿದೆ. ಕುಂದಾಪುರ, ಬೈಂದೂರಿಗೂ ಬಂದಿದ್ದು, ರೈತರಿಗೆ ಕೂಡಲೇ ವಿತರಿಸಲಾಗುವುದು. ಅಗತ್ಯವಿರುವಷ್ಟನ್ನೂ ಪೂರೈಸಲಾಗುವುದು. – ಎಚ್‌. ಕೆಂಪೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಉಡುಪಿ

ಹೊರಗಡೆಯಿಂದ ಖರೀದಿ : ನನಗೆ ವರ್ಷಕ್ಕೆ ಒಂದು ಕ್ವಿಂಟಾಲ್‌ ವರೆಗೆ ಬೀಜದ ಅಗತ್ಯವಿದೆ. ಆದರೆ ಗದ್ದೆಯ ತೇವಾಂಶ ಕಡಿಮೆಯಾಗು ತ್ತಿರುವ ಕಡೆಗಳಲ್ಲಿ ಬಿತ್ತನೆ ಮಾಡಲು ತುರ್ತಾಗಿ 40 ಕೆ.ಜಿ. ಅಗತ್ಯವಿತ್ತು. ಇಲಾಖೆಯಲ್ಲಿ ಕೇಳಿದಾಗ ಒಂದೆರಡು ದಿನ ಆಗಬಹುದು ಎಂದರು. ಹಾಗಾಗಿ ಹೊರಗಿನಿಂದ ಕೆ.ಜಿ.ಗೆ 60 ರೂ. ಕೊಟ್ಟು ತರಿಸಿದ್ದೇನೆ. – ಶೀನ, ಹೇರಂಜಾಲು, ನೆಲಗಡಲೆ ಕೃಷಿಕ

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.