ಪೆರ್ಡೂರು: ದನದ ವ್ಯಾಪಾರಿಯ ಶವ ಪತ್ತೆ, ಕೊಲೆ ಶಂಕೆ


Team Udayavani, May 31, 2018, 10:06 AM IST

crime.jpg

ಹೆಬ್ರಿ: ಪೆರ್ಡೂರು ಕಾಫಿತೋಟದ ಸಮೀಪ ಶೇಣರಬೆಟ್ಟು ಬಳಿ ಸಂಶಯಾಸ್ಪದವಾಗಿ ಶವವೊಂದು ಬುಧವಾರ ಪತ್ತೆಯಾಗಿದೆ.

ಮೃತಪಟ್ಟವರನ್ನು ಜೋಕಟ್ಟೆ ಮೂಲದ ದನದ ವ್ಯಾಪಾರಿ ಹಸನಬ್ಬ (60) ಎಂದು ಗುರುತಿಸಲಾಗಿದೆ.
ಬುಧವಾರ ಬೆಳಗ್ಗೆ ಸುಮಾರು 9 ಗಂಟೆ ಸುಮಾರಿಗೆ ಅಪರಿಚಿತ ಶವವನ್ನು ನೋಡಿದ ಸ್ಥಳೀಯರಾದ ಸುಂದರ ಅವರು ಹಿರಿಯಡಕ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಗನಿಗೆ ಕೊನೆಯ ಕರೆ
 ಮೃತಪಟ್ಟ ವ್ಯಕ್ತಿಯ ಮೊಬೈಲ್‌ ಅನ್ನು ಪರೀಕ್ಷಿಸಿದಾಗ ತನ್ನ ಮಗನಿಗೆ ರಾತ್ರಿ 3 ಗಂಟೆ ಸುಮಾರಿಗೆ ಕರೆಮಾಡಿರುವುದು ತಿಳಿದು ಬಂದಿದೆ. ಬಿಳಿ ಪಂಚೆ, ಶರ್ಟ್‌ ಧರಿಸಿದ್ದು ಜೇಬಿನಲ್ಲಿ 17 ಸಾವಿರ ನಗದು ಇತ್ತು ಎನ್ನಲಾಗುತ್ತಿದೆ.

ಕೊಲೆ ಶಂಕೆ
ನನ್ನ ಸಹೋದರ ಕಳೆದ 35 ವರ್ಷಗಳಿಂದ ಕೋಣಗಳ ವ್ಯಾಪಾರ ಮಾಡಿಕೊಂಡಿದ್ದು, ಇದೇ ಕಾರಣಕ್ಕಾಗಿ ಪೆರ್ಡೂರಿಗೆ ಬಂದಿದ್ದರು.  ಅವರನ್ನು ಭಜರಂಗದಳದ ಕಾರ್ಯಕರ್ತರು ಅವರನ್ನು ಅಡ್ಡಗಟ್ಟಿ  ಅಟ್ಟಿಸಿಕೊಂಡು ಹೋಗಿದ್ದಾರೆ.  ವೃದ್ಧರಾದ ಅವರು ಓಡಲಾಗದೆ ಕುಸಿದು ಬಿದ್ದಿದ್ದಾರೆ. ಕಳೆದ ಬಾರಿ ಕೂಡ ಪೆರ್ಡೂರಿನ ಭಜರಂಗದಳದ ಕಾರ್ಯಕರ್ತರು ಅವರಿಗೆ  ಮೂತ್ರ ಕುಡಿಯುವಂತೆ ಬಲವಂತ ಮಾಡಿ ಚಿತ್ರಹಿಂಸೆ ಕೊಟ್ಟಿದ್ದರು. ಆದ್ದರಿಂದ ಅವರೇ ಕೊಲೆ ಮಾಡಿರುವ ಬಗ್ಗೆ ಸಂಶಯವ್ಯಕ್ತವಾಗಿದ್ದು ಕೂಡಲೇ ತನಿಖೆ ನಡೆಸುವಂತೆ ಮೃತರ ಸಹೋದರ  ಮಹಮ್ಮದ್‌ ಇಸ್ಮಾಯಿಲ್‌  ಅವರು ಸೂರ್ಯ ಮತ್ತು ಇತರರ ವಿರುದ್ಧ ಹಿರಿಯಡಕ ಠಾಣೆಗೆ ದೂರು ನೀಡಿದ್ದಾರೆ.       

11 ದನ ವಶ , 2 ದನ ಸಾವು
ಬುಧವಾರ ಮುಂಜಾನೆ 5 ಗಂಟೆ ಸುಮಾರಿಗೆ ಪೆರ್ಡೂರು ಕಾಫಿತೋಟದಿಂದ ಶೇಣರಬೆಟ್ಟಿನ ಕಡೆ 13 ದನಗಳನ್ನು ಕಟ್ಟಿ  ನಂಬರ್‌ ಪ್ಲೇಟ್‌ ಇಲ್ಲದ ಸ್ಕಾರ್ಪಿಯೋ ಕಾರಿನಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದ  ಮಾಹಿತಿ ತಿಳಿದ ಹಿರಿಯಡಕ  ಪೊಲೀಸರು ಬೆನ್ನಟ್ಟಿದ್ದು, ಕಾರನ್ನು ಅತಿವೇಗವಾಗಿ ಚಲಾಯಿಸಿದ ಪರಿಣಾಮ ಅದು ಚರಂಡಿಗೆ ಬಿದ್ದಿದೆ. ಕೂಡಲೇ  ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ. ಕಾರಿನಲ್ಲಿ  ಮೃತ ಹಸನಬ್ಬ ಸಹಿತ ನಾಲ್ವರು ಇದ್ದರು ಎಂದು ಹೇಳಲಾಗುತ್ತಿದೆ. ದನದ ಕೈಕಾಲುಗಳನ್ನು ಕಟ್ಟಿ ತುಂಬಿದ ಪರಿಣಾಮ 2 ದನಗಳು ಸಾವನಪ್ಪಿದ್ದು, ಸುಮಾರು 7,200 ಮೌಲ್ಯದ 11 ದನಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿದಿದ್ದು ಹಿರಿಯಡಕ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

2 ಕೇಸು ದಾಖಲು; ತನಿಖೆ ಪ್ರಗತಿ: ಎಸ್‌ಪಿ
ಪೆರ್ಡೂರಿನ ಘಟನೆಗೆ ಸಂಬಂಧಿಸಿ ದನ ಕಳವು ಹಾಗೂ ಮೃತಪಟ್ಟ ಹಸನಬ್ಬ ಅವರ ಕಡೆಯವರು ನೀಡಿದ ದೂರು ಸಹಿತ   2 ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೋಸ್ಟ್‌ ಮಾರ್ಟಮ್‌ ವರದಿ ಬಂದ  ಬಳಿಕ ಕೊಲೆಯೋ? ಆಕಸ್ಮಿಕ ಸಾವೋ ಎನ್ನುವುದನ್ನು ಖಚಿತಪಡಿಸಿ  ತನಿಖೆ ಮುಂದುವರಿಯಲಿದೆ. ಯುವಕರ ತಂಡವೊಂದು ವಾಹನವನ್ನು ಅಡ್ಡಗಟ್ಟಿದಾಗ ಮೂವರು ಓಡಿ ಹೋಗಿದ್ದು, ಹಸನಬ್ಬ ಅವರು ಗುಂಪಿನವರ ಮಧ್ಯೆ ಸಿಕ್ಕಿಹಾಕಿ ಕೊಂಡಿದ್ದರು. ಬಜರಂಗದಳದ ಸೂರ್ಯ ಮತ್ತಿತರರು ಕೊಲೆ ಮಾಡಿದ್ದಾಗಿ ಹಸನಬ್ಬ ಅವರ ಕಡೆಯವರಿಂದ ದೂರು ಬಂದಿದೆ. ತನಿಖೆ ಮುಂದುವರಿಸಲಾಗಿದೆ.
 – ಲಕ್ಷ್ಮಣ ಬ. ನಿಂಬರಗಿ, ಉಡುಪಿ ಎಸ್‌ಪಿ

ಟಾಪ್ ನ್ಯೂಸ್

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.