ಹೊಳೆ ಮೀನುಗಳಿಗೆ ಮೀನು ಪ್ರಿಯರ ಗಾಳ!
ಮಾರುಕಟ್ಟೆಯಲ್ಲಿ ತಾಜಾ ಮೀನುಗಳ ಬೆಲೆ ಬಲು ದುಬಾರಿ
Team Udayavani, Jul 10, 2019, 5:57 AM IST
ಕಟಪಾಡಿ : ಮಾರುಕಟ್ಟೆಗೆ ಮೀನು ಬರುವುದು ಕಡಿಮೆಯಾಗುತ್ತಿದ್ದಂತೆ, ಇತ್ತ ಮೀನು ಪ್ರಿಯರು ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ಖುಷಿಯಲ್ಲಿದ್ದಾರೆ.
ಮಣಿಪುರ, ಉದ್ಯಾವರ, ಕಟಪಾಡಿ, ಕೆಮ್ತೂರು, ದುರ್ಗಾ ನಗರ, ನಾಯ್ಕ ತೋಟ, ಮಟ್ಟು, ಕುರ್ಕಾಲು, ರೈಲ್ವೇ ಮೇಲ್ಸೇತುವೆ, ಹೊಳೆಯ ಮೇಲ್ಸೇತುವೆಯ ತಪ್ಪಲುಗಳಲ್ಲಿ ಗಾಳ ಹಾಕಿ ಸಿಹಿನೀರಿನ ಮೀನಿಗಾಗಿ ಹಲವಾರು ಮಂದಿ ಜಾಲಾಡುತ್ತಿದ್ದಾರೆ.
ಸಮುದ್ರದಲ್ಲಿ ಯಾಂತ್ರಿಕ ಮೀನುಗಾರಿಕೆಗೆ ನಿಷೇಧವಿರುವುದರಿಂದ ಸಮುದ್ರದ ಮೀನುಗಳು ದೊರಕುತ್ತಿಲ್ಲ. ತಾಜಾ ಮೀನಿಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಮಾಂಸಾಹಾರಿಗಳು ಕೆರೆ ಅಥವಾ ಹೊಳೆ ಮೀನುಗಳನ್ನೇ ಅವಲಂಬಿಸಬೇಕಾಗಿದೆ. ಆದ್ದರಿಂದ ಸಿಹಿನೀರಿನ ಮೀನುಗಾರಿಕೆ ಚುರುಕುಗೊಂಡಿದೆ. ಮಳೆ ಬರುತ್ತಿದ್ದಂತೆ ಗಾಳ ಹಾಕಿದ ಮತ್ತು ಬಲೆಬೀಸಿ ತಂದ ಹೊಳೆಯ ತಾಜಾ ಮೀನುಗಳೂ ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಉತ್ತಮ ಬೇಡಿಕೆ
ಹೊಳೆ ಮೀನುಗಳಿಗೆ ಉತ್ತಮ ಬೇಡಿಕೆ ಇದೆ. ಹಳ್ಳ ತೊರೆಗಳು ಮಳೆಗಾಲದಲ್ಲಿ ತುಂಬಿಹರಿಯುವುದರಿಂದ ಮೀನುಗಳ ಸಂತತಿಯೂ ಹೆಚ್ಚು ಈ ತಾಜಾ ಮೀನುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ದರದಲ್ಲಿ ವಿಕ್ರಯವಾಗುತ್ತಿವೆ. ಮೀನು ಪ್ರಿಯರೂ ಹವ್ಯಾಸಿಗಳಾಗಿ ಹೊಳೆ ದಡದಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಾರೆ. ಹೊಳೆ ಮೀನು ಗಳು ಕೆಲವರಿಗೆ ಅನಿವಾರ್ಯವಾದರೆ, ರುಚಿ ಅರಿತವರು ದುಬಾರಿಯಾದರೂ ಮೀನು ಖರೀದಿಗೆ ಮುಗಿಬೀಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
MUST WATCH
ಹೊಸ ಸೇರ್ಪಡೆ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್ನಿಂದ ಸುಳ್ಳಿನ ರಾಜಕಾರಣ: BYR
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?