ತೂಫಾನ್ ನಿರೀಕ್ಷೆಯಲ್ಲಿ ನಾಡದೋಣಿ ಮೀನುಗಾರರು
Team Udayavani, Jun 17, 2019, 10:51 AM IST
ಕುಂದಾಪುರ/ಮಲ್ಪೆ : ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಇನ್ನೂ ಆರಂಭಗೊಳ್ಳದ ಕಾರಣ ಮತ್ತು ಸಮುದ್ರದಲ್ಲಿ ದೊಡ್ಡ ಮಟ್ಟದ ತೂಫಾನ್ ಉಂಟಾಗದ ಪರಿಣಾಮ ಕರಾವಳಿಯೆಲ್ಲೆಡೆ ನಾಡ ದೋಣಿ ಮೀನುಗಾರರು ಇನ್ನೂ ಕಡಲಿಗಿಳಿದಿಲ್ಲ.
ಪ್ರತಿ ವರ್ಷದಂತೆ ಯಾಂತ್ರೀಕೃತ ಮೀನು ಗಾರಿಕೆ ಮೇ 31ಕ್ಕೆ ಕೊನೆಗೊಂಡಿದ್ದು, ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆ ಮಾತ್ರ ನಡೆಯುತ್ತದೆ. ಆದರೆ ಅವು ಸಮುದ್ರಕ್ಕೆ ಇಳಿಯಬೇಕಾದರೆ ಮಳೆ ಉತ್ತಮವಾಗಿ ಬಂದು, ದೊಡ್ಡ ಮಟ್ಟದ ತೂಫಾನ್ ಉಂಟಾಗಿ, ಆ ಬಳಿಕ ಕಡಲು ಶಾಂತವಾಗಬೇಕು. ಆದರೆ ಈ ಬಾರಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ತುಸು ವಿಳಂಬವಾಗಿಯೇ ಮುಂಗಾರು ಆರಂಭ ವಾಗಿದೆ. ಇದರ ಪ್ರತಿಕೂಲ ಪರಿಣಾಮ ನಾಡದೋಣಿ ಮೀನುಗಾರಿಕೆಗೂ ತಟ್ಟಿದೆ.
ಮಂಗಳೂರು, ಮಲ್ಪೆ, ಗಂಗೊಳ್ಳಿ, ಹೆಜಮಾಡಿ, ಕೋಡಿ, ಮರವಂತೆ, ಕೊಡೇರಿ, ಶಿರೂರು ಸಹಿತ ಎಲ್ಲ ಕಡೆಗಳ ನಾಡದೋಣಿ ಮೀನುಗಾರರು ತೂಫಾನ್ ನಿರೀಕ್ಷೆಯಲ್ಲಿ ದ್ದಾರೆ. ಕುಂದಾಪುರ ತಾಲೂಕಿನಲ್ಲಿಯೇ ಸುಮಾರು 15ರಿಂದ 20 ಸಾವಿರ ನಾಡ ದೋಣಿ ಮೀನುಗಾರರಿದ್ದಾರೆ.
ಕೋಟ್ಯಂತರ ರೂ. ವಹಿವಾಟು
ಮುಂಗಾರಿನಲ್ಲಿ ನಡೆಯುವ ನಾಡ ದೋಣಿ ಮೀನುಗಾರಿಕೆಯಲ್ಲಿ ಸಿಗಡಿ ಸಹಿತ ಇನ್ನಿತರ ಮೀನುಗಳು ಸಿಕ್ಕಿದಲ್ಲಿ ದಿನವೊಂದರ ವಹಿವಾಟು ಕೋ.ರೂ. ಸ್ತರಕ್ಕೇರುತ್ತದೆ. ಈ ಸೀಸನ್ನಲ್ಲಿ ನಾಡದೋಣಿಗಳಿಗೆ ಕೋಟ್ಯಂತರ ರೂ. ವಹಿವಾಟು ನಡೆಯುತ್ತದೆ. ವಿಳಂಬವಾದಷ್ಟು ಮೀನುಗಾರರಿಗೆ ನಷ್ಟವೇ ಹೆಚ್ಚು.
ಜು.10ರ ಬಳಿಕ…
ಇನ್ನೂ ಮಳೆ ಬಂದಿಲ್ಲ. ತೂಫಾನ್ ಕೂಡ ಕಾಣಿಸಿಲ್ಲ. ಹಾಗಾಗಿ ನಾಡ ದೋಣಿ ಮೀನುಗಾರಿಕೆಯು ಜು.10ರ ಬಳಿಕವಷ್ಟೇ ಆರಂಭವಾಗಬಹುದು. ಕಳೆದ ಬಾರಿಯೂ ಜು. 20ರ ಅನಂತರವಷ್ಟೇ ಆರಂಭ ವಾಗಿತ್ತು ಎಂದು ಗಂಗೊಳ್ಳಿ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ “ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ