ಮತ್ಸ್ಯ ಬೇಟೆಗೆ ಕಡಲಿಗಿಳಿಯಲು ಮೀನುಗಾರರು ಸಜ್ಜು


Team Udayavani, Aug 3, 2017, 8:25 AM IST

matsya-bete.jpg

ಕುಂದಾಪುರ: ಎರಡು ತಿಂಗಳ ನಿಷೇಧದ ಬಳಿಕ ಯಾಂತ್ರಿಕ ಮೀನುಗಾರಿಕೆ ಅಧಿಕೃತವಾಗಿ ಆ.1ರಂದು ಇತರ ಬಂದರುಗಳಲ್ಲಿ ಆರಂಭಗೊಳ್ಳುತ್ತಿದ್ದರೂ ಗಂಗೊಳ್ಳಿಯಲ್ಲಿ ಸಿದ್ಧತೆಗಳು ಮಾತ್ರ ನಡೆಯುತ್ತಿದ್ದು, ಬಹುತೇಕ ಆ. 5ರಿಂದ ಯಾಂತ್ರೀಕೃತ ಬೋಟುಗಳು ಮೀನುಗಾರಿಕೆಗೆ ಕಡಲಿಗೆ ಇಳಿಯುವ ಸಾಧ್ಯತೆಗಳು ಕಂಡು ಬಂದಿವೆ.

ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕೆಗೆ ತೆರಳಲು ಸಿದ್ಧತೆಯನ್ನು ನಡೆಸಲಾಗುತ್ತಿದೆ. ಕೋಡಿ ಭಾಗದಲ್ಲಿ ಲಂಗರು ಹಾಕಿದ ಬೋಟುಗಳು ಸೇರಿದಂತೆ ಟ್ರಾಲ್‌ ಬೋಟುಗಳು 4ರಿಂದ, ಪರ್ಸಿನ್‌ ಬೋಟುಗಳು ಆ.9ರಿಂದ ಹಾಗೂ ಉಳಿದ ಬೋಟುಗಳು ಆ. 5ರಿಂದ ಮೀನು ಬೇಟೆಗೆ ಕಡಲಿಗಿಳಿಯಲಿವೆ.

ಕೋಡಿ-ಕನ್ಯಾನದಿಂದ ಶಿರೂರು ತನಕ  ಸುಮಾರು 25 ಸಾವಿರಕ್ಕೂ ಅಧಿಕ ಮಂದಿ ಮೀನುಗಾರರು ಗಂಗೊಳ್ಳಿ ಬಂದರನ್ನು ವಿವಿಧ ರೀತಿಯಲ್ಲಿ ಅವಲಂಬಿಸಿದ್ದು, ಸುಮಾರು 350ಕ್ಕೂ ಹೆಚ್ಚು ಬೋಟುಗಳು, ಇನ್ನೂರಕ್ಕೂ ಅಧಿಕ ನಾಡದೋಣಿಗಳು ಇಲ್ಲಿ ಕಾರ್ಯಾಚರಿಸುತ್ತಿವೆ. ಮಲ್ಪೆ ಬಂದರಿನಿಂದ ಹೊರಡುವ ದಿನಕ್ಕೆ ಹೊಂದಿಕೊಂಡು ಬೋಟುಗಳನ್ನು ನೀರಿಗಿಳಿಸಲು ಮೀನುಗಾರರು ಸಿದ್ಧಗೊಂಡಿದ್ದಾರೆ. ಮಲ್ಪೆಯಲ್ಲಿ ಜು. 30ರಂದು ಮಾರಿ ಹಬ್ಬ ನಡೆದಿರುವುದರಿಂದ ಈ ಬಾರಿ ಬೋಟುಗಳು ಮೀನುಗಾರಿಕೆಗೆ ತೆರಳಲು ಯಾವುದೇ ತಡೆ ಇಲ್ಲ ಎನ್ನುತ್ತಾರೆ ಮೀನುಗಾರರು.

ಬೋಟುಗಳನ್ನು ಕಳೆದ ಒಂದು ವಾರದಿಂದ ನೀರಿಗಿಳಿಸುವ ಪ್ರಕ್ರಿಯೆಯಲ್ಲಿ ಮೀನುಗಾರರು ತೊಡಗಿಸಿಕೊಂಡಿದ್ದಾರೆ. ದುರಸ್ತಿ ಕಾರ್ಯವನ್ನು ಮುಗಿಸಿರುವ ಬೋಟು ಗಳನ್ನು ಈಗಾಗಲೇ ನೀರಿಗಿಳಿಸಿದ್ದು, ಬಲೆ ದುರಸ್ತಿ ಹಾಗೂ ಇನ್ನಿತರ ಕಾರ್ಯಗಳು ಪೂರ್ಣಗೊಂಡು ಮೀನು ಬೇಟೆಗೆ ಸಜ್ಜಾಗಿ ನಿಂತಿದ್ದಾರೆ.

ಕಳೆದ ಬಾರಿಯ ಯಾಂತ್ರಿಕ ಮೀನುಗಾರಿಕೆ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಅದೇ ರೀತಿ ಮಳೆಗಾಲದಲ್ಲಿ ಸಮಯದಲ್ಲಿ ನಾಡದೋಣಿ ಮೀನುಗಾರಿಕೆಗೂ ಕೂಡಾ ಹವಾಮಾನ ವೈಪರೀತ್ಯ ಹಾಗೂ ಕಡಿಮೆ ಅವಧಿಯಿಂದಾಗಿ ಯಾವುದೇ ಲಾಭವನ್ನು ತಂದುಕೊಡಲಿಲ್ಲ. ಹಲವಾರು ವರ್ಷಗಳಿಂದ ಮತ್ಸಕ್ಷಾಮದಿಂದಾಗಿ ಕಂಗೆಟ್ಟಿದ್ದ‌ ಮೀನುಗಾರರಿಗೆ ಕಳೆದ ಬಾರಿ ಮೀನಿನ ಬರದೊಂದಿಗೆ ಉತ್ತಮ ಧಾರಣೆ ದೊರೆಯದೇ ಇರುವುದರಿಂದ ಮೀನುಗಾರರು ಆರ್ಥಿಕವಾಗಿ ಸಾಕಷ್ಟು ಹೊಡೆತವನ್ನು ಅನುಭವಿಸಿದ್ದರು. ಪರ್ಸಿನ್‌ ಬೋಟುಗಳಿಗೆ ಲೈಟ್‌ ಫಿಶಿಂಗ್‌ಗಳಿಂದಾಗಿ ಸಾಧಾರಣ ಮಟ್ಟದ ಮೀನುಗಾರಿಕೆಯಾಗಿದ್ದರೂ ಟ್ರಾಲ್‌ ಬೋಟುಗಳಿಗೆ ಮೀನಿನ ಬರ ಕಂಡು ಬಂದಿತ್ತು. ಈ ಬಾರಿ ಬಹಳಷ್ಟು ನಿರೀಕ್ಷೆಯ ಮೂಲಕ ಈಗ ಮತ್ತೆ ಮೀನುಗಾರಿಕೆಗಾಗಿ ಕಡಲಿಗಿಳಿಯಲಿದ್ದಾರೆ..

ಗಂಗೊಳ್ಳಿ ಬಂದರಿನಲ್ಲಿ ಸುಮಾರು 230 ಟ್ರಾಲ್‌ ಬೋಟುಗಳು,48 ಪರ್ಸಿನ್‌ ಬೋಟುಗಳು,100 ತ್ರಿ ಸೆವೆಂಟಿ ಬೋಟುಗಳು ಕಾರ್ಯಾಚರಿಸುತ್ತಿವೆ. ಯಾಂತ್ರಿಕ ಬೋಟುಗಳನ್ನು ನೀರಿಗಿಳಿಸುವ ಕಾರ್ಯ ಭರದಿಂದ ಸಾಗಿದೆ. ಮೀನುಗಾರರು ಕೊನೆಯ ಹಂತದ ತಮ್ಮ ಬೋಟುಗಳ ದುರಸ್ತಿ, ಸಂಬಂಧಿಸಿದ ಬಲೆ ಹಾಗೂ ಇನ್ನಿತರ ಉಪಕರಣಗಳ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.

ಮೀನುಗಾರರಲ್ಲಿ ಆಶಾಭಾವನೆ:  ಕಳೆದ  4-5 ವರ್ಷಗಳಿಗೆ ಹೋಲಿಸಿದ್ದಲ್ಲಿ  ಕಳೆದ ಬಾರಿ ಮತ್ಸéಕ್ಷಾಮ ಹೆಚ್ಚಾಗಿ ತಲೆದೋರಿತ್ತು. ಈ ಬಾರಿ ಯಾಂತ್ರಿಕ ಮೀನುಗಾರಿಕೆಗೆ ಪೂರಕವಾದ ವಾತಾವರಣ ಕಂಡು ಬರುವ ಹಾಗೂ  ಉತ್ತಮ ಆದಾಯ ದೊರಕುವ ನಿರೀಕ್ಷೆಯಲ್ಲಿ  ಮೀನುಗಾರರಿದ್ದಾರೆ. ಈ ಬಾರಿ ಅನೇಕ  ನಿರೀಕ್ಷೆ-ಆಕಾಂಕ್ಷೆಗಳನ್ನು ಹೊತ್ತು ಮತ್ತೆ ಮೀನುಗಾರರು ನೀರಿಗಿಳಿಯುತ್ತಿದ್ದರೆ. ಇನ್ನೊಂದು ಕಡೆಯಲ್ಲಿ ಆತಂಕವೂ ಎದುರಾಗಿದೆ.

– ಉದಯ ಆಚಾರ್‌ ಸಾಸ್ತಾನ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.