ಅಕ್ಕಿ ಗುಣಮಟ್ಟ ಪರಿಶೀಲಿಸಿದ ಆಹಾರ ಸಚಿವರು!
Team Udayavani, Mar 1, 2020, 5:05 AM IST
ಉಡುಪಿ: ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದ ಆಹಾರ, ನಾಗರಿಕ ಸಚಿವ ಕೆ.ಗೋಪಾಲಯ್ಯ ಅವರು ಶನಿವಾರ ಬಿಜೆಪಿ ಕಚೇರಿ ಭೇಟಿಗೆ ಮುಂಚಿತ ಕುಂಜಿಬೆಟ್ಟು ಗ್ರಾಹಕರ ವಿವಿಧೋದ್ದೇಶ ಗ್ರಾಹಕರ ಸಹಕಾರಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು.
ಗ್ರಾಹಕ ಕೇಂದ್ರದ ಮಾಹಿತಿ ಪಡೆದ ಸಚಿವರು ಕಚೇರಿಯೊಳಗೆ ಹೋಗಿ ಆಹಾರ ಸಾಮಗ್ರಿಗಳ ಪರಿಶೀಲನೆಯಲ್ಲಿ ತೊಡಗಿದರು. ಸಚಿವರು ಕೇಂದ್ರದ ಸಿಬಂದಿ ಬಳಿ ಕೇಂದ್ರದಲ್ಲಿ ಏನೆಲ್ಲ ಸಮಸ್ಯೆ ಇದೆ ಎಂದು ಕೇಳಿದರು. ಸಿಬಂದಿಯು ಸರ್ವರ್ ಸಮಸ್ಯೆ, ಕಮಿಷನ್ ವಿಳಂಬ ಇತ್ಯಾದಿ ಸಮಸ್ಯೆಗಳನ್ನು ಸಚಿವರ ಮುಂದಿಟ್ಟರು. ಗ್ರಾಹಕರಿಗೆ ವಿತರಿಸುವ ಚೀಲದಿಂದ ಅಕ್ಕಿ ಹೊರತೆಗೆದ ತೆಗೆದ ಸಚಿವರು ಅಕ್ಕಿಯಲ್ಲಿ ಹುಳ,ಹುಪ್ಪಟೆಗಳಿವೆಯಾ ಎಂದು ಗುಣಮಟ್ಟ ಪರಿಶೀಲಿಸಿದರು.ಅಕ್ಕಿಯ ಗುಣಮಟ್ಟ ಖಚಿತ ಪಡಿಸಿಕೊಂಡ ಬಳಿಕ ಸಿಬಂದಿಯಿಂದ ಸಮಸ್ಯೆ ಕೇಳಿ, ಆಲಿಸಿ ಸಮಸ್ಯೆ ಅರಿತುಕೊಂಡರು. ಬಳಿಕ ಎಲ್ಲವನ್ನು ಶೀಘ್ರವೇ ಬಗೆಹರಿಸುವ ಭರವಸೆ ನೀಡಿದರು. ಸಹಕಾರಿ ಸಂಘದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಕಾರ್ಯನಿರ್ವಹಣಾಧಿಕಾರಿ ಅನಂತಕೃಷ್ಣ, ಸಿಬಂದಿ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ