ನಾಲ್ಕೂರು: ಜಂಗಮರಜಡ್ಡು ಮದಗದಲ್ಲಿ ಜಲಸಮೃದ್ಧಿ


Team Udayavani, Jul 22, 2019, 5:15 AM IST

1907BVRE4

ನಾಲ್ಕೂರು ಜಂಗಮರಜಡ್ಡು ಪರಿಸರದ ಮದಗ.

ಬ್ರಹ್ಮಾವರ: ನಾಲ್ಕೂರು ಗ್ರಾಮದ ಜಂಗಮರಜಡ್ಡು ಮದಗ ಪ್ರಸ್ತುತ ಜೀವ ಜಲದಿಂದ ತುಂಬಿ ತುಳುಕುತ್ತಿದೆ. ಇದು ನೇತಾಜಿ ಸೇವಾ ವೇದಿಕೆಯ ಪ್ರಯತ್ನದ ಫಲ.

ಕಳೆದ ಬೇಸಗೆಯಲ್ಲಿ ಸುಮಾರು ಒಂದು ಎಕ್ರೆ ವಿಸ್ತೀರ್ಣದ ಜಂಗಮರಜಡ್ಡು ಮದಗದ ಹೂಳೆತ್ತುವ ಕಾರ್ಯ ಕೈಗೊಳ್ಳ ಲಾಗಿತ್ತು. ವೇದಿಕೆಯಿಂದ ಅಂದಾಜು 60 ಸಾವಿರ ರೂ. ಕೆಲಸ ಮಾಡಲಾಗಿತ್ತು. ಜೆಸಿಬಿ ಜತೆಗೆ ವೇದಿಕೆಯ ಸದಸ್ಯರು ಶ್ರಮದಾನ ಮಾಡಿದ್ದರು.

ಇವೆಲ್ಲದರ ಪರಿಣಾಮ ಈಗ ಮದಗ ದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಶೇಖರಣೆಯಾಗಿದೆ. ಪರಿಸರದ ಎಕ್ರೆಗಟ್ಟಲೆ ಸ್ಥಳದಲ್ಲಿ ಬಿದ್ದ ನೀರು ಮದಗದಲ್ಲಿ ಸಂಗ್ರಹಗೊಳ್ಳುತ್ತಿದೆ. ಒಂದು ಕಡೆಯ ಬಂಡೆ ಮೇಲಿನ ನೀರು ಸಹ ಇಲ್ಲಿ ಸೇರುತ್ತಿದೆ.

ಪ್ರಯೋಜನಗಳು
ಹೂಳಿನಿಂದ ತುಂಬಿ ಹೋಗಿದ್ದ ಜಂಗಮರಜೆಡ್ಡು ಮದಗದ ಅಭಿವೃದ್ದಿ ಹಲವು ಪ್ರಯೋಜನಗಳಿಗೆ ದಾರಿಯಾಗಿದೆ. ಭಾರೀ ಪ್ರಮಾಣದಲ್ಲಿ ನೀರು ಇಂಗಿ ಅಂತರ್ಜಲ ಸೇರುತ್ತಿದೆ. ಆಸುಪಾಸಿನ ಭತ್ತದ ಕೃಷಿಗೆ ಪೂರಕ ಮಾತ್ರವಲ್ಲದೆ ಬೇಸಗೆಯಲ್ಲಿ ಬಾವಿಯ ಕುಡಿಯುವ ನೀರಿನ ಮಟ್ಟವೂ ಹೆಚ್ಚಲಿದೆ.

ವರ್ಷಕ್ಕೆ ಒಂದು ಯೋಜನೆ
ವೇದಿಕೆಯಿಂದ 2018ರಲ್ಲಿ ಮುದ್ದೂರಿನ ಗೋವಿನ ಕೆರೆ ಅಭಿವೃದ್ಧಿ ಪಡಿಸಲಾಗಿತ್ತು. ಇದರಿಂದ ನೀರಿನ ಸಂಗ್ರಹ ಹೆಚ್ಚಿ ಬಹಳಷ್ಟು ಪ್ರಯೋಜನವಾಗಿದೆ. ಈ ನಡುವೆ ಮುದ್ದೂರು ಪೇಟೆಯಲ್ಲಿ ಇಂಗುಗುಂಡಿ ರಚಿಸಿ ತಡೆ ಬೇಲಿ ಸೇರಿದಂತೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ವರ್ಷ ಗ್ರಾಮದ ಒಂದೊಂದು ಕೆರೆಯನ್ನು ಜೀರ್ಣೋದ್ಧಾರಗೊಳಿಸುವ ಯೋಜನೆಯನ್ನು 9 ವರ್ಷ ಹಳೆಯ ಈ ವೇದಿಕೆ ಹಾಕಿಕೊಂಡಿದೆ. ಈ ಮೂಲಕ ಜೀವ ಜಲ ರಕ್ಷಿಸುವ ನಿಟ್ಟಿನಲ್ಲಿ ನೇತಾಜಿ ಸೇವಾ ವೇದಿಕೆ ಇತರರಿಗೆ ಮಾದರಿಯಾಗಿದೆ.

ಶಾಶ್ವತ ದಂಡೆ ರಚಿಸಿ
ಪ್ರಸ್ತುತ ಜಂಗಮರಜಡ್ಡು ಮದಗದ ಸುತ್ತಲು ಹಳೆಯ ಮಣ್ಣಿನ ದಂಡೆ ಇದೆ. ಮದಗದಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಕಡಿದು ಹೋಗುವ ಭೀತಿ ಇದೆ. ಆದ್ದರಿಂದ ಇಲಾಖೆಯು ತಕ್ಷಣ ಸ್ಪಂದಿಸಿ ಶಾಶ್ವತ ದಂಡೆ ನಿರ್ಮಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಸರಕಾರದ ಯೋಜನೆ ಅಗತ್ಯ
ನೀರಿನ ಅಭಾವ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದರೆ ನೀರು ಇಂಗಿಸುವ ನಿಟ್ಟಿನಲ್ಲಿ ಸರಕಾರದ ಪ್ರಯತ್ನ ಸಾಲುತ್ತಿಲ್ಲ. ಕೆರೆ, ಮದಗ ಹೂಳೆತ್ತುವ ಕಾರ್ಯ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ಜಲಸಂರಕ್ಷಣೆ ದೃಷ್ಟಿಯಿಂದ ವೇದಿಕೆ ತನ್ನಿಂದಾದ ಕಾರ್ಯ ಮಾಡುತ್ತಿದೆ.
-ಪ್ರಸಾದ್‌ ಹೆಗ್ಡೆ ಮುದ್ದೂರು,
ಸ್ಥಾಪಕಾಧ್ಯಕ್ಷ, ನೇತಾಜಿ ಸೇವಾ ವೇದಿಕೆ.

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.