ಮೀನು ಮಾರಾಟ ಫೆಡರೇಶನ್ಗೆ ವಂಚನೆ: ದೂರು ದಾಖಲು
Team Udayavani, Feb 23, 2018, 9:00 AM IST
ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ಗೆ ಲಕ್ಷಾಂತರ ರೂ. ವಂಚಿಸಿರುವ ಕುರಿತು ಮಂಜುನಾಥ ಖಾರ್ವಿ ಮತ್ತು ವಿಟuಲ ಖಾರ್ವಿ ವಿರುದ್ಧ ಮಂಗಳೂರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
2014-15ನೇ ಸಾಲಿನಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ನ ಹಂಗಾರಕಟ್ಟೆ ಶಾಖೆ ಮೂಲಕ ಉಪ್ಪುಂದದ ವಿಟuಲ ಖಾರ್ವಿ ಅವರು ಸಿಗಡಿ ಖರೀದಿಸಿ 52,33,087.50 ರೂ. ಮತ್ತು ಮಂಜುನಾಥ್ ಖಾರ್ವಿ ಅವರು 2015-16ನೇ ಸಾಲಿನಲ್ಲಿ ಹಂಗಾರಕಟ್ಟೆ ಶಾಖೆ ಮೂಲಕ ಸಿಗಡಿ ಖರೀದಿಸಿ 29,01,606.50 ರೂ. ಮತ್ತು ಸಿಗಡಿ ಖರೀದಿ ಬಗ್ಗೆ ಕಮಿಷನ್ 4,73,155.00 ರೂ. ಬಾಕಿ ಇಟ್ಟಿದ್ದರು.
ಬಾಕಿ ಮೊತ್ತಕ್ಕೆ ಸಂಬಂಧಿಸಿ ಸಂಸ್ಥೆಗೆ ಒಟ್ಟು 3 ಚೆಕ್ಗಳನ್ನು ನೀಡಿದ್ದು, ಅವುಗಳು ಬ್ಯಾಂಕ್ನಿಂದ ಅಮಾನ್ಯಗೊಂಡಿದ್ದವು. ಈ ಬಗ್ಗೆ 5ನೇ ಹೆಚ್ಚುವರಿ ಜೆಎಂಎಫ್ಸಿ ಮಂಗಳೂರು ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.