ರಾಜಕೀಯ ಪ್ರವೇಶದಿಂದ ಮಠಾಧೀಶರ ಘನತೆಗೆ ಧಕ್ಕೆ : ಪೇಜಾವರ ಶ್ರೀ
Team Udayavani, Apr 10, 2018, 7:00 AM IST
ಕುಂದಾಪುರ: ಮಠಾಧೀಶರು ರಾಜಕೀಯ ರಂಗ ಪ್ರವೇಶಿಸಿ, ಸದನಕ್ಕೆ ಹೋದರೆ ಆ ಮಠಾಧೀಶರ ಘನತೆಗೆ ಧಕ್ಕೆ ಉಂಟಾಗುತ್ತದೆ. ಚುನಾವಣೆಯಲ್ಲಿ ಗೆದ್ದರೆ ಸ್ವಾಮೀಜಿಗಳು ಯಾವುದೋ ಪಕ್ಷವೊಂದರ ಅಡಿಯಾಳುಗಳಾಗಿ ಕೆಲಸ ಮಾಡಬೇಕು. ಪಕ್ಷದ ಸಚೇತಕಾಜ್ಞೆಯನ್ನು ಮೀರುವಂತಿಲ್ಲ. ಇದರಿಂದ ಸ್ವಾಮೀಜಿಗಳ ಗೌರವ ಕಡಿಮೆಯಾಗುತ್ತದೆ ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
“ಶೀರೂರು ಸ್ವಾಮೀಜಿಯವರು ಚುನಾವಣೆಗೆ ನಿಂತರೆ ನೀವು ಬೆಂಬಲಿಸುತ್ತೀರಾ’ ಎಂಬುದಾಗಿ ಕುಂದಾಪುರದಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದುತ್ವದ ಪರವಾಗಿರುವ ಯಾರಿಗಾದರೂ ನನ್ನ ಬೆಂಬಲವಿದೆ ಎಂದು ಹಿಂದೆ ಹೇಳಿದ್ದೆ. ಆದರೆ ಗಣತಂತ್ರ ವ್ಯವಸ್ಥೆಯಲ್ಲಿ ಈಗ ಯಾವನೇ ಒಬ್ಬ ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದೆ. ಚುನಾವಣೆಗೆ ನಿಂತು ಗೆದ್ದರೂ ಏಕಾಂಗಿಯಾಗಿ ಏನೂ ಮಾಡಲು ಸಾಧ್ಯವಿಲ್ಲ. ಹಿಂದುತ್ವದ ರಕ್ಷಣೆಗೆ ಪಕ್ಷಗಳ ಬೆಂಬಲ ಅಗತ್ಯ. ಶೀರೂರು ಸ್ವಾಮೀಜಿ ಚುನಾವಣೆಗೆ ನಿಲ್ಲುವುದು ಅವರ ವೈಯಕ್ತಿಕ ನಿರ್ಧಾರ. ಈ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ