80 ಬಡಗಬೆಟ್ಟು ಗ್ರಾ.ಪಂ.ಗೆ 3ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ


Team Udayavani, Sep 23, 2021, 4:30 AM IST

80 ಬಡಗಬೆಟ್ಟು ಗ್ರಾ.ಪಂ.ಗೆ 3ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ

ಉಡುಪಿ:  ಉತ್ತಮ ಸಾಧನೆ ಮಾಡಿದ ಗ್ರಾ.ಪಂ.ಗಳಿಗೆ ಕೊಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾ.ಪಂ. 3ನೇ ಬಾರಿಗೆ ಆಯ್ಕೆಯಾಗಿದೆ.

ಮಣಿಪಾಲ ನಗರಕ್ಕೆ ತಾಗಿರುವ ಈ ಗ್ರಾ.ಪಂ. ತಾಂತ್ರಿಕವಾಗಿ ಗ್ರಾಮೀಣ ಪ್ರದೇಶವಾದರೂ ನಗರದ ಅಭಿವೃದ್ಧಿ ಮಾನದಂಡಕ್ಕೆ ಅನುಗುಣವಾಗಿ ಬೆಳೆದಿದೆ. 2,345.69 ಹೆಕ್ಟೇರ್‌ ವಿಸ್ತೀರ್ಣ ಹೊಂದಿದ್ದು, 4,895 ಪುರುಷರು, 4,414 ಮಹಿಳೆಯರು ಸೇರಿದಂತೆ ಒಟ್ಟು 9,309 ಜನಸಂಖ್ಯೆ ಇದೆ. ಪ್ರತಿಷ್ಠಿತ ಮ್ಯಾನೇಜೆ¾ಂಟ್‌ ಸಂಸ್ಥೆ ಟ್ಯಾಪ್ಮಿ, ಸಾಲುಮರದ‌ ತಿಮ್ಮಕ್ಕ ಪಾರ್ಕ್‌ ಗ್ರಾ.ಪಂ. ವ್ಯಾಪ್ತಿಯೊಳಗೆ ಇದೆ. ಉತ್ತಮ ತೆರಿಗೆ ಸಂಗ್ರಹ, ಸರಕಾರದ ವಿಶೇಷ ಅನುದಾನದ ಪೂರ್ಣ ಪ್ರಮಾಣದ ಬಳಕೆ, ಸ್ವಾವಲಂಬಿ ಎಸ್‌ಎಲ್‌ಆರ್‌ಎಂ ಘಟಕ, ಡಿಜಿಟಲ್‌ ಗ್ರಂಥಾಲಯ, ಸ್ವಜಲಧಾರ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ವ್ಯವಸ್ಥಿತವಾಗಿ ಅಳವಡಿಸಿರುವುದು ಗ್ರಾ.ಪಂ. ಸಾಧನೆ.

ಸ್ವಾವಲಂಬಿ ಗ್ರಾ.ಪಂ. ಹೆಗ್ಗಳಿಕೆ:

ಎಸ್‌ಎಲ್‌ಆರ್‌ಎಂ ಘಟಕಕ್ಕೆ ತಿಂಗಳಿಗೆ 1.80 ಲ.ರೂ.ನಂತೆ, ವಾರ್ಷಿಕ 21.6 ಲ.ರೂ. ಆದಾಯ ಬರುತ್ತಿದೆ. ಇದು ಜಿಲ್ಲೆಯಲ್ಲಿ ಅತ್ಯಧಿಕ ಆದಾಯ ಗಳಿಸುವ ಘಟಕ. ಜತೆಗೆ ಗ್ರಾ.ಪಂ.ನಿಂದ ಅನುದಾನ ಪಡೆಯದೆ ಎಸ್‌ಎಲ್‌ಆರ್‌ಎಂ ಘಟಕ ಮುನ್ನಡೆಸಲಾಗುತ್ತಿದೆ.

ಮನೆಗೆ –ಮನೆಗೂ ನೀರಿನ ಸಂಪರ್ಕ :

ಗ್ರಾ.ಪಂ. ವ್ಯಾಪ್ತಿಯಲ್ಲಿ 3,499 ಮನೆಗಳಿದ್ದು, ಬಾವಿ ವ್ಯವಸ್ಥೆ ಇಲ್ಲದ ಸುಮಾರು 3,200ಕ್ಕೂ ಅಧಿಕ ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಒದಗಿಸಿ ಮೀಟರ್‌ ಅಳವಡಿಸಿದೆ. ನಗರಸಭೆಯ ಸ್ವರ್ಣಾ ನದಿ ನೀರು, ಬೋರ್‌ವೆಲ್‌, ತೆರೆದ ಬಾವಿಗಳು ನೀರಿನ ಮೂಲವಾಗಿದೆ. ಸ್ವಜಲಧಾರಾ ಯೋಜನೆಯಡಿ 2 ಕೋ.ರೂ.ವೆಚ್ಚದ ನೀರಿನ ಯೋಜನೆ ಅನುಷ್ಠಾನ ಮಾಡಿದ್ದು, ಅದರ ಫ‌ಲವಾಗಿ ವರ್ಷದ 365 ದಿನವೂ ಇಲ್ಲಿ ನೀರಿಗೆ ಬರವಿಲ್ಲ. ಕುಡಿಯುವ ನೀರಿನಿಂದ ಬರುವ ಆದಾಯವನ್ನು ನೀರಿಗಾಗಿ ಖರ್ಚು ಮಾಡಲಾಗುತ್ತಿದೆ.

ಕಚೇರಿಗೆ ಸೋಲಾರ್‌ :

ಗ್ರಾ.ಪಂ. ಕಚೇರಿಗೆ ದಾನಿಗಳ ನೆರವಿ ನಿಂದ ಸಂಪೂರ್ಣವಾಗಿ ಸೋಲಾರ್‌ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಸುಮಾರು 1,150 ಬೀದಿ ದೀಪ, ಮೂರು ರಿಂಗ್‌ ರೋಡ್‌, ಉತ್ತಮ ರಸ್ತೆಗಳು, ನಿಗದಿತ ಸಮಯದಲ್ಲಿ ಸಭೆ, ದಾಖಲೆಗಳ ಡಿಜಿಟಲೀಕರಣ, ಎಸ್ಸಿ ಮತ್ತು ಎಸ್‌ಟಿ ಶೇ.25 ಅನುದಾನದ ನಿಧಿ ಬಳಸಿಕೊಂಡು ಸುಮಾರು 20 ಪರಿಶಿಷ್ಟರಿಗೆ 4.50 ಲ.ರೂ. ವೆಚ್ಚದಲ್ಲಿ ಆರೋಗ್ಯ ಕಾರ್ಡ್‌ ವಿತರಿಸಿದ್ದಾರೆ.

ಸಂಪೂರ್ಣ ಅನುದಾನ ಬಳಕೆ :

ಗ್ರಾ.ಪಂ. ಪ.ಜಾತಿ ಹಾಗೂ ಪಂಗಡದ, 15ನೇ ಹಣಕಾಸು ಆಯೋಗದ, ಅಂಗ ವಿಕಲರ ಅನುದಾನಗಳನ್ನು ಸಂಪೂರ್ಣ ವಾಗಿ ಬಳಸಿಕೊಂಡಿದೆ. ಜತೆಗೆ ನಗರಸಭೆ ನೀರಿನ ಬಿಲ್‌ ಹಾಗೂ ದಾರಿ ದೀಪದ ವಿದ್ಯುತ್‌ ಬಿಲ್‌ ವಾರ್ಷಿಕ ಸುಮಾರು 18 ಲ.ರೂ. ಮೊತ್ತವನ್ನು ಕ್ಲಪ್ತ ಸಮಯಕ್ಕೆ ಪಾವತಿಸುತ್ತಿದೆ. ಈ ಬಾರಿ ವಿಶೇಷವಾಗಿ ಕೋವಿಡ್‌ ಸಂದರ್ಭ ಪಂ. ವಿಶೇಷವಾಗಿ ದಾನಿಗಳ ನೆರವಿನಿಂದ ಆಸ್ಪತ್ರೆಗಳಿಗೆ ಆಕ್ಸಿಜನ್‌ ಕೊಡುಗೆಯ ಜತೆಗೆ ಔಷಧಗಳನ್ನು, ವಿಟಮಿನ್‌ ಮಾತ್ರೆ ವಿತರಿಸಿರುವುದು ಸತತ 2ನೇ ಬಾರಿ ಗಾಂಧಿ ಪುರಸ್ಕಾರ ಪಡೆಯಲು ಸಹಕಾರಿಯಾಗಿದೆ.

ಗ್ರಾ.ಪಂ. ಸಾಧನೆ :

  • ಜ ಡಿಜಿಟಲ್‌ ಲೈಬ್ರೆರಿ
  • ಅಗತ್ಯವಿರುವ ಎಲ್ಲ ಮನೆಗಳಿಗೆ ನಳ್ಳಿ ಸಂಪರ್ಕ
  • ವ್ಯವಸ್ಥಿತ ಹಸಿ -ಒಣ ಕಸ ವಿಲೇವಾರಿ
  • ಗ್ರಾ.ಪಂ. ಕಟ್ಟಡಕ್ಕೆ ಸೋಲಾರ್‌ ಅಳವಡಿಕೆ
  • ಶೇ. 100 ಸಾಕ್ಷರತೆ
  • ತೆರಿಗೆ ಸಂಗ್ರಹ: ಉತ್ತಮ ಸಾಧನೆ
  • ಉತ್ತಮ ರಸ್ತೆಗಳು
  • ಪ.ಜಾತಿ ಹಾಗೂ ಪ.ಪಂ. ದವರಿಗೆ ಆರೋಗ್ಯ ಕಾರ್ಡ್‌

ಗ್ರಾ.ಪಂ.ನ ಪ್ರಗತಿಯನ್ನು ಆಧರಿಸಿ, ಉಡುಪಿ ತಾಲೂಕಿನ ಗ್ರಾ.ಪಂ.ಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 80 ಬಡಗಬೆಟ್ಟು ಗ್ರಾ.ಪಂ. ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಸಂಘಟನಾತ್ಮಕ ಕಾರ್ಯದಿಂದಾಗಿ ಪುರಸ್ಕಾರ ದೊರೆತಿದೆ.ಅಶೋಕ್‌ ಕುಮಾರ್‌, ಪಿಡಿ ಒ, 80 ಬಡಗಬೆಟ್ಟು ಗ್ರಾ.ಪಂ.

ಟಾಪ್ ನ್ಯೂಸ್

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.