“ಎತ್ತಣ ವಿಜ್ಞಾನ ಎತ್ತಣ ಹವನ| ಇತ್ತಣಿಂದತ್ತ ಸಂಬಂಧವಯ್ಯ||’


Team Udayavani, Aug 31, 2019, 5:35 AM IST

GANESH-2019

ಉಡುಪಿ: ಬೆಳಗ್ಗೆ ಸೂರ್ಯೋದಯ ಮತ್ತು ಸೂರ್ಯಾಸ್ತಮಾನದಲ್ಲಿ ಅಗ್ನಿಹೋತ್ರವೆಂಬ ಕೆಲವೇ ನಿಮಿಷಗಳ ಸರಳ ಹೋಮ ಪ್ರಕ್ರಿಯೆಯನ್ನು ನಡೆಸಿದರೆ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚುತ್ತದೆ ಎಂಬ ಪ್ರಾಚೀನರ ಉಲ್ಲೇಖಗಳನ್ನು ಆಧರಿಸಿ ಪುಣೆಯ ಫ‌ರ್ಗ್ಯುಸನ್‌ ಕಾಲೇಜಿನಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿ ಇದನ್ನು ದೃಢಪಡಿಸಲಾಗಿದೆ. ವಾತಾವರಣ ಶುದ್ಧಿಯಾಗುವುದಲ್ಲದೆ ಇದರ ಬೂದಿ ಉತ್ತಮ ಕೀಟನಾಶಕ, ಸಸಿಗಳಿಗೆ ಉತ್ತಮ ಗೊಬ್ಬರವೆನ್ನುವುದೂ ಸಾಬೀತಾಗಿದೆ. ಇದನ್ನು ಜಾತಿಮತ ಭೇದವಿಲ್ಲದೆ ಜನಸಾಮಾನ್ಯರೂ ಮಾಡಿ ಅನುಭವ ಪಡೆದುಕೊಂಡ ಉದಾಹರಣೆ ಇದೆ. ಕೆಲವು ವರ್ಷಗಳ ಹಿಂದೆ ಭಾರತೀಯ ಕಿಸಾನ್‌ ಸಂಘದಂತಹ ಸಂಘಟನೆಗಳೂ ಇದನ್ನು ಪ್ರಚುರಪಡಿಸಿದ್ದವು.

ಕೆಲವು ಹೋಮಗಳಿಗೆ ತುಪ್ಪ, ಎಳ್ಳು, ಪಾಯಸ, ಪಂಚಗಜ್ಜಾಯ ಹೀಗೆ ದ್ರವ್ಯಗಳನ್ನು ನಿವೇದಿಸುತ್ತಾರೆ. ತುಪ್ಪ, ಎಳ್ಳು ಇತ್ಯಾದಿ ದ್ರವ್ಯಗಳನ್ನು ಹಾಕಿದಾಗ ಬೆಂಕಿ ಸಹಜವಾಗಿ ಜ್ವಲಿಸುತ್ತದೆ. ಪಾಯಸ, ಪಂಚಗಜ್ಜಾಯ ಎನ್ನುವಾಗ ಅದನ್ನು ಬೆಂಕಿಯಾಗಿ ಕರಗಿಸುವಷ್ಟು ಕಟ್ಟಿಗೆಗಳು ಇಲ್ಲದಾಗ ಹೊಗೆ ಉತ್ಪತ್ತಿಯಾಗುತ್ತದೆ. ಹೊಗೆಯಲ್ಲಿ ಇಂಗಾಲದ ಡೈಯಾಕ್ಸೆ„ಡ್‌ ಮತ್ತು ಮೊನಾಕ್ಸೆ„ಡ್‌ ಇರುತ್ತದೆ. ಡಯಾಕ್ಸೆ„ಡ್‌ನ್ನು ಸಸ್ಯಗಳು ಹೀರಿಕೊಂಡು ಆಮ್ಲಜನಕವಾಗಿ ಕೊಡುತ್ತವೆ. ಇದು ಜೀವಿಗಳಿಗೆ ಅಗತ್ಯ. ಆದರೆ ಮೊನಾಕ್ಸೆ„ಡ್‌ ಅತೀ ಕೆಟ್ಟ ಅನಿಲ. ಕಣ್ಣು ತೆರೆಯಲಾಗದ ಸ್ಥಿತಿ ಇದ್ದರೆ ಅಲ್ಲಿ ಮೊನಾಕ್ಸೆ„ಡ್‌ ಇದೆ ಎಂದರ್ಥ ಎನ್ನುವುದನ್ನು ಭೌತ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಉಡುಪಿಯ ಡಾ| ಎ.ಪಿ.ಭಟ್‌ ಬೆಟ್ಟು ಮಾಡುತ್ತಾರೆ.

ಕಟ್ಟಿಗೆಯಲ್ಲೂ ಅಶ್ವತ್ಥ, ಆಲ, ಹಲಸು, ಹೆಬ್ಬಲಸು ಇತ್ಯಾದಿ ವೃಕ್ಷಗಳ ಕಟ್ಟಿಗೆ ಶ್ರೇಷ್ಠ. ಪ್ರಾಚೀನ ಕ್ರಮದಲ್ಲಿ ಅಗ್ನಿಹೋತ್ರವನ್ನು ಅಶ್ವತ್ಥ, ಆಲದ ಕಟ್ಟಿಗೆಯಿಂದ ಮಾಡಬೇಕೆಂದಿದೆ. ಕಟ್ಟಿಗೆ ಎಂದರೆ ಕಡಿದು ಮಾಡಿದ ಕಟ್ಟಿಗೆಯಲ್ಲ. ಒಬ್ಬ ಅಗ್ನಿಹೋತ್ರ ಮಾಡುವಷ್ಟು ಕಟ್ಟಿಗೆಯನ್ನು ಅಶ್ವತ್ಥ, ಆಲದ ಮರಗಳು ನಿತ್ಯವೂ ಒಣಗಿಸಿ ಬೀಳಿಸುತ್ತವೆ ಎಂಬ ಮಾತನ್ನು ಹಿರಿಯ ವಿದ್ವಾಂಸ ಪ್ರೊ| ಕೆ.ಎಸ್‌.ನಾರಾಯಣಾಚಾರ್ಯ ಉಪನ್ಯಾಸದಲ್ಲಿ ಉಲ್ಲೇಖೀಸುವುದುಂಟು. ಹೀಗೆ ಬಿದ್ದ ಕಟ್ಟಿಗೆಯನ್ನು ಸಂಗ್ರಹಿಸಿಟ್ಟರೆ ಸಾಕಷ್ಟು ಹೋಮ ಹವನಗಳನ್ನು ಮಾಡಲು ಸಾಧ್ಯ. ಆದರೆ ನಾವಿದನ್ನು ಮಾಡುವುದಿಲ್ಲ.

ಈಗ ಗಣೇಶ ಚತುರ್ಥಿ ಬಂದಿದೆ. ಬಹುತೇಕ ಕಡೆ 1008 ಕಾಯಿ ಗಣಪತಿಹೋಮ, 108 ಕಾಯಿ ಗಣಪತಿಹೋಮ, 12 ಕಾಯಿ ಗಣಪತಿಹೋಮಗಳು ನಡೆಯುತ್ತವೆ. ಆದರೆ ಈ ಹೋಮಗಳು ಹುಟ್ಟಿದ್ದು ಪರಿಸರವನ್ನು ಶುದ್ಧಗೊಳಿಸಲು. ಆದರೆ ಕಾಲ ಕ್ರಮೇಣ ಹೋಮ ಮಾಡುವವರಿಗೆ ವಿಜ್ಞಾನದ ಅರಿವು ಇಲ್ಲ, ವಿಜ್ಞಾನದ ಅರಿವು ಇರುವವರಿಗೆ ಹೋಮದ ಅರಿವು ಇಲ್ಲ. ಇವೆರಡೂ ಪೂರಕವಾಗಿ ಇರಬೇಕಾದ ಕ್ಷೇತ್ರಗಳು ಕ್ರಮೇಣ ವೈರಿಗಳಂತೆ ಕಂಡುಬರುವುದೂ ಇದೆ. ಇದಕ್ಕೆ ಇನ್ನೂ ಅನೇಕ ಕಾರಣಗಳಿವೆ. ಅದನ್ನು ಬಿಡಿ…
ಆಧುನಿಕ ಕಾಲದಲ್ಲಿ ನಾವು ಎಲ್ಲವನ್ನೂ ಹೈಬ್ರಿಡ್‌ ದೃಷ್ಟಿಯಲ್ಲಿಯೇ ನೋಡುತ್ತಿದ್ದೇವೆ. ಇದನ್ನು ನಿಯಂತ್ರಿಸದಿದ್ದಲ್ಲಿ ನಾವು ಯಾವ ಉದ್ದೇಶವನ್ನು ಇಟ್ಟುಕೊಂಡು ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದೇವೆಯೋ ಅದರ ಮೌಲ್ಯವೇ ಇಲ್ಲದಾಗುತ್ತದೆ.
ವಚನಕಾರ ಅಲ್ಲಮಪ್ರಭು ಅವರು “ಎತ್ತಣ ಮಾಮರ ಎತ್ತಣ ಕೋಗಿಲೆ| ಎತ್ತಣಿಂದೆತ್ತ ಸಂಬಂಧವಯ್ಯ?’ ಎಂದು ಹೇಳಿದರು. ನಾವೀಗ “ಎತ್ತಣ ವಿಜ್ಞಾನ ಎತ್ತಣ ಹವನ| ಇತ್ತಣಿಂದತ್ತ ಸಂಬಂಧವಯ್ಯ||’ ಎಂದು ಹೇಳಬಹುದು.

- ಸ್ವಾಮಿ

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.