ಗಣೇಶ ತಯಾರಿಯ ಏಕಲವ್ಯ ಗಣೇಶ
38 ವರ್ಷಗಳಿಂದ ವಿನಾಯಕನ ವಿಗ್ರಹ ರಚನೆಯ ಪ್ರವೃತ್ತಿ
Team Udayavani, Aug 31, 2019, 5:11 AM IST
ಗಣೇಶನ ಮೂರ್ತಿ ತಯಾರಿಸುತ್ತಿರುವ ಗಣೇಶ್ ನಾಯಕ್ ಮತ್ತು ಸಹಚರರು.
ಅಜೆಕಾರು:ಇವರ ಹೆಸರೇ ಗಣೇಶ.ಸಹಜವಾಗಿಯೇ ಗಣೇಶನ ಕುರಿತಾಗಿನ ಆಸಕ್ತಿ ಬುದ್ದಿ ತಿಳಿದಾಗಿನಿಂದಲೂ ಹೆಚ್ಚುತ್ತಲೇ ಇತ್ತು. ವಿನಾಯಕನ ವಿಗ್ರಹ ತಯಾರಿಕೆಯ ಕುತೂಹಲವೇ ಇವರನ್ನು ಸಮಾಜದಲ್ಲಿ ಗುರುತಿಸುವ ಮಟ್ಟಕ್ಕೆ ಏರಿಸಿದೆ.
ಇವರದ್ದು ಗಣೇಶ ವಿಗ್ರಹ ರಚಿಸುವ ಪರಂಪರೆಯ ಮನೆಯೂ ಅಲ್ಲ. ಗುರುವೂ ಇಲ್ಲ. ಸ್ವತಃ ಸಾಧನೆ ಮಾಡಿದ ಏಕಲವ್ಯ ಇವರು. ಇಂದು ಅವರ ಕಲೆಗೆ ಎಲ್ಲೆಡೆಯಿಂದಲೂ ಮನ್ನಣೆ ಸಿಗುತ್ತಿದೆ. ಅವರು ಅಂಚೆ ಪಾಲಕ ಗಣೇಶ್ ಎನ್ನುವುದಕ್ಕಿಂತಲೂ ಗಣಪತಿ ಮೂರ್ತಿ ರಚಿಸುವ ಗಣೇಶ್ ಎಂದೇ ಪರಿಚಿತರು. ಕಳೆದ 38 ವರ್ಷಗಳಿಂದ ಗಣೇಶನ ಹಬ್ಬಕ್ಕೆ ಗಣಪತಿ ವಿಗ್ರಹ ತಯಾರಿಸುತ್ತಿದ್ದಾರೆ. ಪ್ರಸ್ತುತ ಸುಮಾರು 250 ವಿಗ್ರಹಗಳನ್ನು ತಯಾರಿಸುತ್ತಿದ್ದು, ಎಲ್ಲವೂ ಪರಿಸರ ಗಣೇಶನ ಮೂರ್ತಿಗಳೇ ಆಗಿವೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಜೂನ್ ಮೊದಲ ವಾರದಲ್ಲಿ ಆವೆ ಮಣ್ಣಿನಿಂದ ಮೂರ್ತಿ ತಯಾರಿಸಲು ಆರಂಭಿಸುವ ಇವರು ಸುಮಾರು 3 ತಿಂಗಳ ಕಾಲ ಗಣೇಶನ ವಿಗ್ರಹ ತಯಾರಿಯಲ್ಲಿಯೇ ಮಗ್ನರಾಗಿದ್ದಾರೆ. ಮೂರ್ತಿ ತಯಾರಿಯ ಆರಂಭಿಕ ವರ್ಷಗಳಲ್ಲಿ ಮಂಗಳೂರು ಪರಿಸರದಿಂದ ಆವೆ ಮಣ್ಣು ಸಂಗ್ರಹಿಸಿ ತರುತ್ತಿದ್ದ ಇವರು ಪ್ರಸ್ತುತ ಕಲ್ಲಡ್ಕದಿಂದ ಅಗತ್ಯವಿರುವ ಆವೆ ಮಣ್ಣನ್ನು ತಂದು ಮೂರ್ತಿ ತಯಾರಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್