ಹರಾಜು ಪ್ರಾಂಗಣದ ಮೇಲ್ಛಾವಣಿ ತೆರವು ಕಾರ್ಯ ಆರಂಭ

 ಮೀನುಗಾರಿಕಾ ಬಂದರು: ಕಟ್ಟಡ ಕುಸಿಯುವ ಭೀತಿ

Team Udayavani, Feb 18, 2020, 5:54 AM IST

1702KDPP5A

ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿಯ ಸ್ಲ್ಯಾಬ್  ಕುಸಿದು ಒಂದೂವರೆ ವರ್ಷಗಳೇ ಕಳೆದಿದೆ. ಅನುದಾನ ಬಿಡುಗಡೆಯಾಗದ ಕಾರಣ ಇನ್ನೂ ದುರಸ್ತಿಗೆ ಕಾಲ ಕೂಡಿ ಬಂದಿಲ್ಲ. ಆದರೆ ಕುಸಿದ ಸ್ಲ್ಯಾಬ್ ನಿಂದಾಗಿ ಹರಾಜು ಪ್ರಾಂಗಣವಿರುವ ಸಂಪೂರ್ಣ ಕಟ್ಟಡವೇ ಕುಸಿಯುವ ಭೀತಿ ಎದುರಾಗಿದ್ದು, ಈಗ ಪ್ರಾಂಗಣದ ಮೇಲ್ಛಾವಣಿ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ.

ಮೀನುಗಾರರ ಆಕ್ಷೇಪ
ಇದರಿಂದ ಈ ಬಗ್ಗೆ ಮೀನು ಗಾರರೊಂದಿಗೆ ನಡೆದ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಈ ಎರಡನೇ ಹರಾಜು ಪ್ರಾಂಗಣದ ಸಂಪೂರ್ಣ ಕಟ್ಟಡವನ್ನೇ ಕೆಡವಿ, ದುರಸ್ತಿ ಆಗುವವರೆಗೆ ಈ ಪ್ರದೇಶವನ್ನು ಇಲ್ಲಿ ನಿರ್ಬಂಧಿತ ವಲಯವಾಗಿ ಮಾಡುವ ಬಗ್ಗೆ ಪ್ರಸ್ತಾವವಾಗಿತ್ತು. ಆದರೆ ಇದರಿಂದ ಅಲ್ಲಿ ಈಗಿರುವ 12 ಕೊಠಡಿಗಳನ್ನು ಆಶ್ರಯಿಸಿರುವ ಮೀನುಗಾರರು, ಹಸಿ ಮೀನು ವ್ಯಾಪಾರಸ್ಥರಿಗೆ ಸಮಸ್ಯೆಯಾಗುತ್ತದೆ ಎನ್ನುವ ಆಕ್ಷೇಪ ಮೀನುಗಾರರಿಂದ ವ್ಯಕ್ತವಾಯಿತು.

ಆ ಬಳಿಕ ನಡೆದ ಸಭೆಗಳಲ್ಲಿ ಹರಾಜು ಪ್ರಾಂಗಣದ ಮೇಲ್ಛಾವಣಿ ತೆಗೆದು, ಪ್ರಾಂಗಣದಿಂದ ಈಗಿರುವ 12 ಕೊಠಡಿಗಳನ್ನು ಪ್ರತ್ಯೇಕಿಸಿ ಬಿಡುವ ಕಾಮಗಾರಿ ಮಾಡುವ ತೀರ್ಮಾನಕ್ಕೆ ಅಧಿಕಾರಿಗಳು ಬಂದಿದ್ದಾರೆ. ಈಗ ಮೇಲ್ಛಾವಣಿ ತೆರವು ಕಾಮಗಾರಿ ಆರಂಭವಾಗಿದೆ.

ದುರಸ್ತಿ ಯಾವಾಗ?
ಇಲ್ಲಿನ ಜೆಟ್ಟಿಯ ಸ್ಲ್ಯಾಬ್ ಕುಸಿದು ಸರಿ ಸುಮಾರು ಒಂದೂವರೆ ವರ್ಷಗಳಿಗೂ ಹೆಚ್ಚು ಸಮಯ ಕಳೆಯಿತು. ಆದರೆ ಇನ್ನೂ ಕುಸಿದ ಬಂದರಿನ ದುರಸ್ತಿಯಾಗಲಿ ಅಥವಾ ಹೊಸದಾಗಿ ಮರು ನಿರ್ಮಾಣ ಕಾಮಗಾರಿಗೆ ಅನುದಾನ ಮಾತ್ರ ಬಿಡುಗಡೆಯಾಗಿಲ್ಲ. ಈಗಾಗಲೇ ಪ್ರಸ್ತಾವನೆ ಕಳುಹಿಸಿದರೂ, ಇನ್ನೂ ಯಾವುದೇ ಪ್ರಗತಿ ಮಾತ್ರ ಕಂಡು ಬಂದಿಲ್ಲ.

ಮೇಲ್ಛಾವಣಿ ಮಾತ್ರ ತೆರವು
2ನೇ ಹರಾಜು ಪ್ರಾಂಗಣದ ಜೆಟ್ಟಿಯ ಅಡಿಪಾಯದೊಳಗೆ ನೀರು ನುಗ್ಗುತ್ತಿರುವುದರಿಂದ ಕಟ್ಟಡ ಕುಸಿಯುವ ಭೀತಿಯಿಂದ ಪ್ರಾಂಗಣದ ಮೇಲ್ಛಾವಣಿ ತೆರವು ಮಾಡಲಾಗುವುದು. ಈ 2 ಪ್ರಾಂಗಣಗಳ ಮಧ್ಯೆ ಮತ್ತೂಂದು ತೆರೆದ ಪ್ರಾಂಗಣ ನಿರ್ಮಾಣವಾಗಲಿದೆ.
– ಅಂಜನಾದೇವಿ, ಸ.ನಿ.,
ಮೀನುಗಾರಿಕಾ ಇಲಾಖೆ

100 ಮೀ.ಗೆ ವಿಸ್ತರಿಸಲಿ
ಕಟ್ಟಡಕ್ಕೆ ಆತಂಕ ಎದುರಾಗಿದ್ದರಿಂದ ಹಸಿ ಅನೇಕ ಬಾರಿ ಈ ಮೇಲ್ಛಾವಣಿ ತೆಗೆಯಲು ಮನವಿ ಕೊಟ್ಟಿದ್ದೆವು. ಈಗ ತೆರವು ಕಾರ್ಯ ನಡೆಯುತ್ತಿದೆ. ಆದರೆ ದುರಸ್ತಿಗೆ ಮುಂದಾಗಿಲ್ಲ. ಇನ್ನು ಈ ಎರಡು ಪ್ರಾಂಗಣಗಳ ಮಧ್ಯೆ ಮತ್ತೂಂದು ಕಿರು ಪ್ರಾಂಗಣ ನಿರ್ಮಾಣವಾಗಲಿದೆ. ಮೊದಲ ಪ್ರಾಂಗಣದಿಂದ 2ನೇ ಪ್ರಾಂಗಣದ ಮಧ್ಯೆ 106 ಮೀ. ಜಾಗವಿದೆ. ಅಷ್ಟು ಉದ್ದದ ಪ್ರಾಂಗಣ ನಿರ್ಮಿಸಿದರೆ ಮಳೆಗಾಲದ ಸಮಯದಲ್ಲಿ ಸಾಕಷ್ಟು ಅನುಕೂಲವಾಗಲಿದೆ.
– ವಾಸುದೇವ ಖಾರ್ವಿ, ಹಸಿ ಮೀನು ವ್ಯಾಪಾರಸ್ಥರ ಸಂಘ ಗಂಗೊಳ್ಳಿ

ಕಿರು ಪ್ರಾಂಗಣ
ಗಂಗೊಳ್ಳಿಯ ಮೀನುಗಾರಿಕಾ ಬಂದರಿನಲ್ಲಿ ಈಗಿರುವ 1 ಹಾಗೂ 2ನೇ ಹರಾಜು ಪ್ರಾಂಗಣಗಳ ಮಧ್ಯೆ ಅಂದಾಜು 1.3 ಕೋ.ರೂ. ವೆಚ್ಚದಲ್ಲಿ 35 ಮೀ. ಉದ್ದ ಹಾಗೂ 15 ಮೀ. ಅಗಲದ 4 ಸುತ್ತಲು ತೆರೆದ ಕಿರು ಪ್ರಾಂಗಣ ನಿರ್ಮಾಣವಾಗಲಿದೆ ಎಂದು ತಿಳಿದು ಬಂದಿದೆ. ಎರಡನೇ ಹರಾಜು ಪ್ರಾಂಗಣದ ಮೇಲ್ಛಾವಣಿ ತೆರವಾದ ಕೂಡಲೇ ಈ ಕಿರು ಪ್ರಾಂಗಣ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆಯಿದೆ.

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.