ಗಂಗೊಳ್ಳಿ: ಜೆಟ್ಟಿ ದುರಸ್ತಿಗೆ 1.98 ಕೋ.ರೂ.
Team Udayavani, Jun 13, 2019, 5:00 AM IST
ಕುಂದಾಪುರ: ಕಳೆದ ಅಕ್ಟೋಬರ್ನಲ್ಲಿ ಕುಸಿದುಬಿದ್ದ ಗಂಗೊಳ್ಳಿ ಬಂದರಿನ ಜೆಟ್ಟಿ ದುರಸ್ತಿಗೆ ಬುಧವಾರ ರಾಜ್ಯ ಸರಕಾರ 1.98 ಕೋ.ರೂ. ಮಂಜೂರು ಮಾಡಿದೆ.
ಗಂಗೊಳ್ಳಿ ಮೀನುಗಾರಿಕೆ ಬಂದರಿನಲ್ಲಿ ಡಯಾಫಾರ್ಮ್ ಗೋಡೆ, ಜೆಟ್ಟಿ ಸ್ಲಾಬ್ ಕುಸಿದಿದ್ದು ಇದರಿಂದ ದಿನನಿತ್ಯ ಅಲ್ಲಿ ಕೆಲಸ ಮಾಡುವ ಮೀನುಗಾರರ ಜೀವಕ್ಕೆ ಅಪಾಯ ಇದೆ. 2001ರಲ್ಲಿ ಕೊಚ್ಚಿಯ ಮೆ. ಜಿಯೋ ಟೆಕ್ ಕನ್ಸ್ಟ್ರಕ್ಷನ್ ಕಂಪೆನಿ 403 ಮೀ. ದಕ್ಕೆ ಹಾಗೂ 2 ಹರಾಜು ಮಳಿಗೆಗಳನ್ನು ನಿರ್ಮಿಸಲು ಗುತ್ತಿಗೆ ಪಡೆದು 2007ರಲ್ಲಿ ಕಾಮಗಾರಿ ಪೂರೈಸಿತ್ತು. ಆದರೆ 2010ರಲ್ಲಿ ಇಲಾಖೆಯ ಮುಖ್ಯ ಎಂಜಿನಿಯರ್ ಭೇಟಿ ನೀಡಿದಾಗ ಕಾಮಗಾರಿಯಲ್ಲಿ ಲೋಪವಾಗಿ ಗೋಡೆಗೆ ಹಾನಿಯಾಗಿರು ವುದು ಕಂಡು ಬಂದಿತ್ತು. ಮೂಲ ಗುತ್ತಿಗೆದಾರರೇ ಇದನ್ನು ಅವರದ್ದೇ ಖರ್ಚಿನಲ್ಲಿ ಸರಿಪಡಿಸ ಬೇಕೆಂದೂ ಪತ್ರ ಬರೆಯಲಾಗಿತ್ತು. ಆದರೆ ಕಳೆದ ವರ್ಷ ಅಕ್ಟೋಬರ್ನಲ್ಲಿ ಜೆಟ್ಟಿ ಕುಸಿದೇ ಹೋಗಿತ್ತು. ಇದರ ದುರಸ್ತಿಗೆ 1.98 ಕೋ.ರೂ.ಗಳ ಅಂದಾಜುಪಟ್ಟಿ ತಯಾರಿಸಿ ಕಳುಹಿಸಿದ್ದು ಬುಧವಾರ ಮೀನುಗಾರಿಕೆ ನಿರ್ದೇಶನಾಲಯ ಆಡಳಿತಾತ್ಮಕ ಅನುಮೋದನೆ ನೀಡಿದೆ. ಜತೆಗೆ ಮೀನುಗಾರಿಕೆ ಬಂದರು, ಇಳಿದಾಣ ಸೌಕರ್ಯ, ಮೀನುಗಾರಿಕೆ ಬಂದರುಗಳ, ಇಳಿದಾಣ ಕೇಂದ್ರಗಳ ನವೀ ಕರಣಕ್ಕೆ 2019-20ನೇ ಸಾಲಿನ ಅನುದಾನದಲ್ಲಿ ನಿರ್ಮಿಸುವಂತೆ ಅನುಮತಿ ನೀಡಲಾಗಿದೆ.
ಜೆಟ್ಟಿಯ ಸ್ಲಾಬ್ ಕುಸಿತದಿಂದಾಗಿ ಮೀನುಗಾರಿಕೆ ಮುಗಿಸಿ ಬರುವ ಬೋಟು, ದೋಣಿಗಳಿಂದ ಮೀನು ಇಳಿಸಲು ಜಾಗದ ಅಭಾವವಾ ಗುತ್ತದೆ. ಅದರೊಂದಿಗೆ ಅಲ್ಲಿ ಚಟುವಟಿಕೆ ನಡೆಸಿದರೆ ಮತ್ತಷ್ಟು ಕುಸಿಯುವ ಸಂಭವವೂ ಇತ್ತು. ನೀತಿ ಸಂಹಿತೆಕಾರಣದಿಂದ ಅನುದಾನ ಮಂಜೂರಾತಿ ವಿಳಂಬವಾಗಿತ್ತು. ಈ ಕುರಿತು ಉದಯವಾಣಿ ಸತತ ವರದಿ ಮಾಡಿತ್ತು.
ಸರಕಾರಕ್ಕೆ ದುರಸ್ತಿಗೆ 1.98 ಕೋ.ರೂ. ಮಂಜೂರಾತಿಗೆ ಅಂದಾಜುಪಟ್ಟಿ ಕಳುಹಿಸಲಾಗಿತ್ತು. ಬೆಂಗಳೂರಿನಲ್ಲಿರುವ ಮೀನು ಗಾರಿಕೆ ನಿರ್ದೇಶನಾಲಯ ಈ ಪ್ರಸ್ತಾವನೆಗೆ ಬುಧವಾರ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಬೆಂಗಳೂರಿನ ಸಿಐಸಿಇಎಫ್ ಸಂಸ್ಥೆಯ ತಾಂತ್ರಿಕ ಸಲಹೆಯಂತೆ ಕಾಮಗಾರಿ ನಿರ್ವಹಿಸಲು ಸೂಚಿಸಿದೆ.
– ಎಂ.ಎಲ್. ದೊಡ್ಮಣಿ, ಜಂಟಿ ನಿರ್ದೇಶಕ (ಪ್ರಭಾರ) ಮೀನುಗಾರಿಕಾ ಇಲಾಖೆ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ