ಆಭರಣ ವಿನ್ಯಾಸಕ್ಕೆ ಜಾಗತಿಕ ಬೇಡಿಕೆ
Team Udayavani, Feb 23, 2019, 12:30 AM IST
ಉಡುಪಿ: ಫ್ಯಾಶನ್ ಜಗತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಾವಕಾಶವನ್ನು ಸೃಷ್ಟಿಸುತ್ತಿದೆ ಎಂದು ಕೇಂದ್ರ ವಾಣಿಜ್ಯ, ಕೈಗಾರಿಕೆ ಹಾಗೂ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಒಳಪಟ್ಟ ಜೆಮ್ಸ… ಆ್ಯಂಡ್ ಜುವೆಲರಿ ಎಕ್ಸ್ ಪೋರ್ಟ್ ಪ್ರಮೋಶನ್ ಕೌನ್ಸಿಲ್ (ಜಿಜೆಇಪಿಸಿ)ನ ಅಂಗ ಸಂಸ್ಥೆಯಾದ ಉಡುಪಿ ಕರಾವಳಿ ಬೈಪಾಸ್ ಬಳಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜೆಮ್ಸ… ಆ್ಯಂಡ್ ಜುವೆಲರಿಯನ್ನು (ಐಐಜಿಜೆ) ಶುಕ್ರವಾರ ದಿಲ್ಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ಸಂದರ್ಭ ಕೊಯಮತ್ತೂರಿನಲ್ಲಿ ಸ್ವರ್ಣೋದ್ಯಮಿಗಳಿಗೆ ಉಪ ಯೋಗವಾಗುವ ಆಧುನಿಕ ಯಂತ್ರೋಪಕರಣಗಳಿರುವ ಕಾಮನ್ ಫೆಸಿಲಿಟಿ ಸೆಂಟರ್ಗೆ ಶಂಕುಸ್ಥಾಪನೆ ಮಾಡಿದರು.
ಇಂದು ಜಗತ್ತು ಫ್ಯಾಶನ್ ಮೇಲೆ ನಿಂತಿದೆ. ಆಭರಣ ವಿನ್ಯಾಸ ಅಂತಾ ರಾಷ್ಟ್ರೀಯ ಮಟ್ಟದ ಉದ್ಯೋಗವಾಗಿ ಹೊರಹೊಮ್ಮಿದೆ. ದೇಶದಲ್ಲಿ ವಿನ್ಯಾಸಕ ರಿಗೆ ಬೇಡಿಕೆಯಿದ್ದು, ಯುವ ಸಮುದಾಯ ಅದರ ಪ್ರಯೋಜನ ಪಡೆಯ ಬೇಕು ಎಂದು ಕರೆ ನೀಡಿದರು.
ಉಡುಪಿ ಭಕ್ತನ ಭಕ್ತಿಗೆ ದೇವರು ಒಲಿದ ನಾಡು, ವಿಶ್ವ ಪ್ರಸಿದ್ಧಿ ಹೋಟೆಲ್ಗಳ ನೀಡಿದ ಜಿಲ್ಲೆಯಲ್ಲಿ ಐಐಜಿಜೆಟಿಸಿ ಆರಂಭಿಸಲಾಗಿದೆ. ಮುಂದೆ ಲಕ್ಷಾಂತರ ಮಂದಿ ಶ್ರೇಷ್ಠ ವಿನ್ಯಾಸಕರನ್ನು ಸೃಷ್ಟಿಸುವ ಹೊಣೆ ಹೊತ್ತಿದೆ. ಕೊಯಮತ್ತೂರು ಕೇಂದ್ರದಿಂದ 50,000 ಜನರಿಗೆ ಅನುಕೂಲವಾಗಲಿದೆ ಎಂದರು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯೂ ರಫ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. 50 ಕೋಟಿ ಡಾಲರ್ ಮೌಲ್ಯದ ವಸ್ತುಗಳ ರಫ್ತು ಪ್ರಮಾಣ ವನ್ನು ಮುಂದೆ ದುಪ್ಪಟ್ಟು ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಈ ನಿಟ್ಟಿ ನಲ್ಲಿ ದೇಶದಲ್ಲಿ ಸುಮಾರು 2,500 ಕೋ. ರೂ. ವೆಚ್ಚದಲ್ಲಿ ಪಾದರಕ್ಷೆ ಉದ್ಯಮ ವನ್ನು ಸ್ಥಾಪಿಸಲಾಗುತ್ತಿದೆ. ಒಟ್ಟು 54 ರಾಷ್ಟ್ರಗಳ ಜತೆ ಮಾತುಕತೆ ನಡೆಸಿ ವ್ಯಾಪಾರ ವೃದ್ಧಿಗೆ ಪ್ರಯತ್ನಿಸಲಾಗುತ್ತದೆ ಎಂದರು.
ಉಡುಪಿಯಲ್ಲಿ ಸಾಂಕೇತಿಕ ಉದ್ಘಾಟನೆ
ಉಡುಪಿಯಲ್ಲಿ ಜಿಜೆಇಪಿಸಿ ಪೂರ್ವ ವಲಯದ ಅಧ್ಯಕ್ಷ ಪ್ರಕಾಶ ಪಿಂಚಾ ಅವರು ಕೇಂದ್ರವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಜಿಲ್ಲಾ ಜುವೆಲರಿ ಅಸೋಸಿಯೇಶನ್ ಅಧ್ಯಕ್ಷ ಅಲೆವೂರು ನಾಗರಾಜ್ ಆಚಾರ್ಯ, ಕರ್ನಾಟಕ ಸ್ಟೇಟ್ ಜುವೆಲರಿ ಫೆಡರೇಶನ್ ಅಧ್ಯಕ್ಷ ಜಯ ಆಚಾರ್ಯ ಉಪಸ್ಥಿತರಿದ್ದರು. ಮಧು ಕಾರ್ಯಕ್ರಮ ನಿರ್ವಹಿಸಿದರು. ಉಡುಪಿ ಕೇಂದ್ರದಲ್ಲಿ ಎರಡು ತಿಂಗಳುಗಳ ನಾಲ್ಕು ಕೋರ್ಸುಗಳಿದ್ದು ವಿದ್ಯಾರ್ಥಿಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಸ್ವರ್ಣಾಭರಣ ತರಬೇತಿ ನೀಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ