ಜಾಗತಿಕ ರ್‍ಯಾಂಕಿಂಗ್‌ : ಮಾಹೆ ವಿಶ್ವವಿದ್ಯಾನಿಲಯ ದಾಪುಗಾಲು


Team Udayavani, Jun 21, 2019, 9:25 AM IST

mahe

ಉಡುಪಿ: ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯವು ದೇಶದ ಶ್ರೇಷ್ಠ ಖಾಸಗಿ ವಿ.ವಿ.ಯಾಗಿ ಹೊರಹೊಮ್ಮಿದೆ. ಕ್ವಾಕರಲಿ ಸೈಮಂಡ್ಸ್‌ (ಕ್ಯೂಎಸ್‌) ವರ್ಲ್ಡ್ ಯುನಿವರ್ಸಿಟಿ ರ್‍ಯಾಂಕಿಂಗ್‌ 2020ಯಲ್ಲಿ ಮಾಹೆಯು 701-750 ಶ್ರೇಣಿಯ ಸ್ತರಕ್ಕೇರಿದೆ. ಕಳೆದ ವರ್ಷ ಅದು 750-800ರ ಸ್ತರದಲ್ಲಿತ್ತು. 82 ದೇಶಗಳ 1,620 ವಿವಿಗಳಲ್ಲಿ 1,000 ವಿ.ವಿ.ಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಮಾಹೆಯ ಸಾಧನೆಗಳು ಶ್ರೇಷ್ಠ ಶೇ.66 ಅಂಕದ ರ್‍ಯಾಂಕಿಂಗ್‌ ಪಡೆದಿವೆ.

1,000 ವಿವಿಗಳನ್ನು ಮೌಲ್ಯಮಾಪನ ಮಾಡುವ ಮುನ್ನ ಕ್ಯೂಎಸ್‌ ಸಂಸ್ಥೆಯು 9.3 ಕೋಟಿ ಫ‌ಲಕಗಳು, 1.3 ಕೋಟಿ ಪ್ರಬಂಧಗಳು, ಮುಖ್ಯಸ್ಥರ 45,000 ಸಮೀಕ್ಷಾ ಪ್ರತಿಕ್ರಿಯೆಗಳು, 94,000 ಶೈಕ್ಷಣಿಕ ಪ್ರತಿಕ್ರಿಯೆಗಳನ್ನು ಪಡೆದಿತ್ತು.
ವಿವಿಗಳನ್ನು 6 ಮಾನದಂಡದಲ್ಲಿ ಮೌಲ್ಯಮಾಪನ ಗೊಳಿಸಲಾಗಿತ್ತು. ಮೊದಲ ನಾಲ್ಕು ಮಾನದಂಡಗಳು ಅಂಕಿ-ಅಂಶಗಳ ಆಧಾರದಲ್ಲಿ, ಉಳಿದೆರಡು ಜಾಗತಿಕ ಸಮೀಕ್ಷೆ ಆಧಾರದಲ್ಲಿ ಮೌಲ್ಯ ಮಾಪನಕ್ಕೆ ಒಳಪಟ್ಟಿವೆ.

ವಿಷಯವಾರು ಕ್ಯೂಎಸ್‌ ರ್‍ಯಾಂಕಿಂಗ್‌ ಅನ್ನು ವರ್ಷದ ಆರಂಭದಲ್ಲಿ ಘೋಷಿಸ ಲಾಗಿತ್ತು. ಇದರ ಪ್ರಕಾರ ಮಣಿಪಾಲ ಫಾರ್ಮಸ್ಯೂಟಿಕಲ್‌ ಸೈನ್ಸಸ್‌ ಕಾಲೇಜು ಫಾರ್ಮಸಿ ಮತ್ತು ಫಾರ್ಮಕೋಲಜಿ ವಿಭಾಗದಲ್ಲಿ 201-250 ಶ್ರೇಣಿಯ ರ್‍ಯಾಂಕ್‌ ಪಡೆದುಕೊಂಡಿತ್ತು. ಮಣಿಪಾಲ ಕೆಎಂಸಿ ಮೆಡಿಸಿನ್‌ ವಿಭಾಗದಲ್ಲಿ 351-400 ಶ್ರೇಣಿಯ ರ್‍ಯಾಂಕ್‌ ಪಡೆದುಕೊಂಡಿತ್ತು. ಹಿಂದಿನ ವರ್ಷಕ್ಕಿಂತ 50 ರ್‍ಯಾಂಕ್‌ ಸ್ಥಾನ ಸುಧಾರಣೆಯಾಗಿದೆ.

ನಾವು ಎಲ್ಲ ಮಾನದಂಡಗಳಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ ಮತ್ತು ಇದರ ಪರಿಣಾಮ ಕಾಣಿಸುತ್ತಿದೆ. ಮುಂದಿನ ವರ್ಷಗಳಲ್ಲಿ ಜಾಗತಿಕ ರ್‍ಯಾಂಕಿಂಗ್‌ನಲ್ಲಿ ಮತ್ತಷ್ಟು ದಾಪುಗಾಲು ಇರಿಸುತ್ತೇವೆ. ಭಾರತದ ಸಮೀಕ್ಷೆಯಲ್ಲಿಯೂ ಉತ್ತಮ ಸಾಧನೆ ಮಾಡುತ್ತೇವೆ ಎಂದು ಮಾಹೆ ಕುಲಪತಿ ಡಾ| ಎಚ್‌. ವಿನೋದ ಭಟ್‌ ಪ್ರತಿಕ್ರಿಯೆ ನೀಡಿದ್ದಾರೆ.

ಎನ್‌ಐಆರ್‌ಎಫ್ ರಾಷ್ಟ್ರೀಯ ರ್‍ಯಾಂಕಿಂಗ್‌ನಲ್ಲಿ ಮಾಹೆ 9ನೇ ಸ್ಥಾನದಲ್ಲಿದೆ ಮತ್ತು ದೇಶದ ಶ್ರೇಷ್ಠ 10 ವಿವಿಗಳಲ್ಲಿ ಒಂದಾಗಿ ಮೂಡಿಬಂದಿದೆ. ಹಲವು ರ್‍ಯಾಂಕಿಂಗ್‌ ಏಜೆನ್ಸಿಗಳ 2019ರ ಸಮೀಕ್ಷೆಯ ಪ್ರಕಾರ ಮಾಹೆ ದೇಶದ ಶ್ರೇಷ್ಠ ಖಾಸಗಿ ವಿ.ವಿ.ಯಾಗಿದೆ.

“ದಿ ವೀಕ್‌’ ಸಮೀಕ್ಷೆಯಲ್ಲಿ ಅದು ಸತತ  ಐದನೆಯ ವರ್ಷ ಮತ್ತು ಎಜುಕೇಶನ್‌ ವರ್ಲ್ಡ್ ಪ್ರಕಾರ ಸತತ ನಾಲ್ಕನೆಯ ವರ್ಷ ದೇಶದ ಶ್ರೇಷ್ಠ ವಿ.ವಿ. ಸ್ಥಾನ ಪಡೆದಿದೆ.

ಟಾಪ್ ನ್ಯೂಸ್

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.