ರೈತರ ಮನೆಗೆ ತೆರಳಿ ಕೃಷಿಗೆ ಪ್ರೇರೇಪಿಸಿ: ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು
Team Udayavani, Jun 27, 2019, 10:18 AM IST
ಉಡುಪಿ: ಪ್ರತಿ ಹಳ್ಳಿಯ ಯುವಕರು ರೈತರ ಮನೆ ಮನೆಗೆ ತೆರಳಿ ಕೃಷಿ ಮಾಡುವಂತೆ ವಿನಂತಿಸಬೇಕಾಗಿದೆ ಎಂದು ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮನವಿ ಮಾಡಿದ್ದಾರೆ.
ಉಡುಪಿ ಜಿಲ್ಲೆಯೊಂದರಲ್ಲೆ ಸುಮಾರು 5-6 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಭೂಮಿ ಹಡೀಲು ಬಿದ್ದಿದೆ ಎಂಬ ವರದಿ ಅತ್ಯಂತ ಕಳವಳಕಾರಿಯಾಗಿದೆ. ಈ ರೀತಿ ಮಾಡುತ್ತ ಹೋದರೆ “ಭೂಮಿ ಸಸ್ಯ ಶಾಮಲೆಯಾಗಲಿ, ದೇಶಕ್ಕೆ ಸಮೃದ್ಧಿಯಾಗಲಿ’ ಎಂದು ಪ್ರಾರ್ಥಿಸುವುದಕ್ಕೆ ಅರ್ಥವೇ ಇರುವುದಿಲ್ಲ. ಆದ್ದರಿಂದ ರೈತ ಬಂಧುಗಳು ಉಳುವ ಫಲವತ್ತಾದ ಭೂಮಿಯನ್ನು ಹಡೀಲು ಬಿಡಬಾರದು. ಕನಿಷ್ಠ ಒಂದು ಬೆಳೆಯನ್ನಾದರೂ ತೆಗೆಯಲು ಮುಂದಾಗಬೇಕು. ಸಾವಿರ ಸಮಸ್ಯೆಗಳನ್ನು (ಹವಾಮಾನ) ಸಹಿಸಿಕೊಂಡು ಸೈನಿಕರು ದೇಶದ ಸುರಕ್ಷತೆಗಾಗಿ ಬದುಕು ಸವೆಸುತ್ತಿದ್ದಾರೆ. ಅದೇರೀತಿ ಕೃಷಿಗೆ ಸಮಸ್ಯೆ ಸಾವಿರವಿದ್ದರೂ ಕೃಷಿಯಿಂದ ದೂರವಾದರೆ ಇಡೀ ದೇಶಕ್ಕೆ ಗಂಡಾಂತರ ನಿಶ್ಚಿತ. ಆದ್ದರಿಂದ ಪ್ರತೀ ಹಳ್ಳಿ, ಊರಿನ ಯುವಕರು ಗ¨ªೆ ಹಡೀಲು ಬಿಟ್ಟ ರೈತರ ಮನೆ ಮನೆಗೆ ತೆರಳಿ ಕೃಷಿ ಮಾಡುವಂತೆ ವಿನಂತಿಸಬೇಕು. ಈ ಕಾರ್ಯ ಅತ್ಯಂತ ತುರ್ತಾಗಿ ನಡೆಯಲಿ’ ಎಂದು ಶ್ರೀಗಳು ತಮ್ಮ ವಿಶೇಷ ಸಂದೇಶದಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!