ಉಡುಪಿ: ಉತ್ತಮ ಮಳೆ
Team Udayavani, Aug 3, 2018, 10:20 AM IST
ಉಡುಪಿ/ಮಂಗಳೂರು: ಉಡುಪಿ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ಬುಧವಾರ ತಡರಾತ್ರಿವರೆಗೂ ಗುಡುಗು ಸಹಿತ ಬಿರುಸಾಗಿದ್ದ ಮಳೆ ಗುರುವಾರ ಹಗಲಿನಲ್ಲಿ ಆಗಾಗ್ಗೆ ಸುರಿದಿದೆ. ಕಾರ್ಕಳ, ಅಜೆಕಾರು, ಹೆಬ್ರಿ, ಬಜಗೋಳಿ, ಬೆಳ್ಮಣ್ ಮತ್ತು ಸುತ್ತಲಿನ ಪ್ರದೇಶಗಳು, ಕುಂದಾಪುರ, ಸಿದ್ದಾಪುರ, ಬೈಂದೂರು, ಕೋಟೇಶ್ವರ ಪರಿಸರ, ಉಡುಪಿ ತಾಲೂಕಿನ ಕಾಪು, ಪಡುಬಿದ್ರಿ ಮೊದಲಾದೆಡೆ ಮಳೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಗುರುವಾರ ಮಳೆ ಕ್ಷೀಣಿಸಿದೆ. ಸೆಕೆಯ ವಾತಾವರಣವಿತ್ತು.
ಉಡುಪಿಯಲ್ಲಿ 11 ಸೆಂ.ಮೀ. ಮಳೆ
ಬೆಂಗಳೂರು: ಗುರುವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ ದಕ್ಷಿಣ ಒಳನಾಡಿನ ಹಲವೆಡೆ ಮತ್ತು ಕರಾವಳಿಯ ಕೆಲವೆಡೆ ಮಳೆಯಾಯಿತು. ಉಡುಪಿಯಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 11 ಸೆಂ.ಮೀ. ಮಳೆ ಸುರಿಯಿತು.
ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಬಿದ್ದ ಮಳೆಯ ಪ್ರಮಾಣ ಹೀಗಿತ್ತು (ಸೆಂ.ಮೀ.ಗಳಲ್ಲಿ):
ಕೊಲ್ಲೂರು 10, ಕಾರ್ಕಳ 9, ಆಗುಂಬೆ 8, ಮೂಡಬಿದಿರೆ 7, ಕೋಟ 6, ಕುಂದಾಪುರ, ಸಿದ್ದಾಪುರ, ಕದ್ರಾ, ನೆಲಮಂಗಲ ತಲಾ 4, ಧರ್ಮಸ್ಥಳ, ಕಮ್ಮರಡಿ ತಲಾ 3, ಮೂಲ್ಕಿ, ಶಿರಾಲಿ, ಗೇರುಸೊಪ್ಪಾ, ಗೋಕರ್ಣ, ಕ್ಯಾಸಲ್ ರಾಕ್, ಔರಾದ್, ಮಡಿಕೇರಿ, ಶೃಂಗೇರಿ, ಕೊಟ್ಟಿಗೆಹಾರ, ಜಿಕೆವಿಕೆ, ಮಾಗಡಿ ತಲಾ 2, ಮಂಗಳೂರು ವಿಮಾನ ನಿಲ್ದಾಣ, ಮಂಗಳೂರು, ಬಂಟ್ವಾಳ, ಮಾಣಿ, ಪುತ್ತೂರು, ಮಂಚಿಕೇರಿ, ಯಲ್ಲಾಪುರ, ಸಿದ್ದಾಪುರ, ಖಾನಾಪುರ, ಭಾಗಮಂಡಲ, ಮಾದಾಪುರ, ತಾಳಗುಪ್ಪ, ಅರಸಾಳು, ಕಳಸ, ಮೂಡಿಗೆರೆ, ಜಯಪುರ, ಕೊಪ್ಪ, ಬೆಂಗಳೂರು ನಗರ, ದಾವಣಗೆರೆ, ತಿಪಟೂರು ತಲಾ 1.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು
Sand Mining; ಉದ್ಯಾವರ: ಚುನಾವಣ ಚೆಕ್ಪೋಸ್ಟ್ ಬಳಿ ಅಕ್ರಮ ಮರಳು ಸಾಗಾಟ ಪತ್ತೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ