‘ಗೋ’ಪುರದಲ್ಲಿ ಗೋಪಾಲಕೃಷ್ಣೋತ್ಸವ
ಉಡುಪಿಯಲ್ಲಿ ದೇಸೀ ಗೋ ಸಮ್ಮೇಳನ
Team Udayavani, Jun 3, 2019, 6:10 AM IST
ಉಡುಪಿ: ಶ್ರೀಕೃಷ್ಣ ಮಠದ ಸುವರ್ಣ ಗೋಪುರ ಸಮರ್ಪಣೋತ್ಸ ವದ ದಂಗವಾಗಿ ರಥಬೀದಿಯಲ್ಲಿ ರವಿವಾರ ನಡೆದ ದೇಸೀ ಗೋತಳಿಗಳ ಸಮ್ಮೇಳನದಲ್ಲಿ ಗೋಧೂಳಿ ಮುಹೂರ್ತದಲ್ಲಿ ಚಿನ್ನದ ರಥದಲ್ಲಿ ಗೋಪಾಲಕೃಷ್ಣೋತ್ಸವ ನಡೆಯಿತು. ಸಂಜೆ 6 ಗಂಟೆಗೆ ಭಜನ ಮಂಡಳಿಗಳ ಸುಮಾರು 100 ಸದಸ್ಯೆಯರ ಕೊಳಲು ವಾದನ ದೊಂದಿಗೆ ಉತ್ಸವ ಆರಂಭಗೊಂಡಿತು.
ಕಾಣಿಯೂರು ಮಠದಿಂದ ಪಲಿಮಾರು ಮಠದ ವರೆಗೆ ಸುಮಾರು ಮುಕ್ಕಾಲಂಶ ರಥಬೀದಿಯ ಇಕ್ಕೆಲ ಗಳಲ್ಲಿ ನಿರ್ಮಿಸಿದ ತಾತ್ಕಾಲಿಕ ಹಟ್ಟಿಯಲ್ಲಿ (ಶಾಮಿಯಾನ) ಕಟ್ಟಿದ ಸುಮಾರು 200 ಗೋವುಗಳ ನಡುವೆ ಉತ್ಸವದ ಮೆರವಣಿಗೆ ಸಾಗಿ ಬಂತು. ಮೆರವಣಿಗೆ ಮುಂದಿದ್ದ ಆನೆ ‘ಸುಭದ್ರೆ’ಯ ಹಿಂಭಾಗದಲ್ಲಿದ್ದ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಸುಗಳಿಗೆ ಗೋಗ್ರಾಸ ನೀಡಿದರು. ಪೇಜಾವರ ಕಿರಿಯ, ಕೃಷ್ಣಾಪುರ, ಸೋದೆ, ಕಾಣಿಯೂರು ಅದಮಾರು, ಅದಮಾರು ಕಿರಿಯ, ಪಲಿಮಾರು ಕಿರಿಯ, ಬಾಳೆಗಾರು ಶ್ರೀಗಳು ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ