ತಾಯಿಗೆ ಬೈದದ್ದೇ ಕೊಲೆಗೆ ಕಾರಣವಾಯ್ತೇ?
Team Udayavani, Jul 31, 2018, 10:09 AM IST
ಉಡುಪಿ: ಮಣಿಪಾಲದಲ್ಲಿ ರವಿವಾರ ನಡೆದ ಗುರುಪ್ರಸಾದ್ ಭಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯೊಳಗೆ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯ ಸದ್ಯ ಮೂರು ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದ್ದು, ವಿಚಾರಣೆ ನಡೆಯುತ್ತಿದೆ. ರವಿವಾರ ಸಂಜೆ ಮೂವರು ಆರೋಪಿಗಳಾದ ಸುಜೀತ್ ಪಿಂಟೋ, ರಾಜೇಶ್ ಮತ್ತು ಪ್ರದೀಪ್ ಅವರನ್ನು ಕುಂದಾಪುರ ಸಮೀಪದ ಕಂಡೂರು ಸೇತುವೆ ಮೇಲೆ ಸಿನಿಮೀಯ ರೀತಿಯಲ್ಲಿ ಕಂಡೂರು ಪಿಎಸ್ಐ ಶ್ರೀಧರ್ ನಾಯಕ್ ನೇತೃತ್ವದಲ್ಲಿ ಬಂಧಿಸಿದ ಪೊಲೀಸರು ಮಣಿಪಾಲ ಠಾಣೆಗೆ ಹಸ್ತಾಂತರಿಸಿದ್ದರು. ಮತ್ತೂಬ್ಬ ಆರೋಪಿ ರಂಜಿತ್ ಪಿಂಟೋ ತಲೆಮರೆಸಿಕೊಂಡಿದ್ದ. ಆತನನ್ನೂ ಖಚಿತ ಮಾಹಿತಿ ಮೇರೆಗೆ ರವಿವಾರ ಮಧ್ಯರಾತ್ರಿ ಕೊಳಲಗಿರಿಯಲ್ಲಿ ಬಂಧಿಸಿದ್ದಾರೆ.
ಶನಿವಾರ ರಾತ್ರಿ ಗುರುರಾಜ್ ಭಟ್ ಮತ್ತು ಆರೋಪಿಗಳಲ್ಲೊಬ್ಬನಾದ ರಂಜಿತ್ ಪಿಂಟೋ ನಡುವೆ ಹಣಕಾಸಿನ ವಿಚಾರವಾಗಿ ತೀವ್ರ ಮಾತುಕತೆ ನಡೆದಿತ್ತೆನ್ನಲಾಗಿದ್ದು. ಈ ಸಂದರ್ಭ ಮೃತ ಗುರುರಾಜ್ ಭಟ್, ರಂಜಿತ್ ತಾಯಿ ಕುರಿತು ಅವಾಚ್ಯವಾಗಿ ನಿಂದಿಸಿದ ಎನ್ನಲಾಗಿದೆ. ಇದು ಗುರುರಾಜ್ ಭಟ್ ಕೊಲೆಗೆ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳು ವಿಚಾರಣೆಯಿಂದ ತಿಳಿಯಬೇಕಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ