ಸರ್ವಧರ್ಮ ಸಮನ್ವಯತೆ ಸಾರಿದ ಶತಮಾನದ ಹಿರಿಮೆಯ ಶಾಲೆ

ಶಿರೂರು ಸ.ಹಿ. ಪ್ರಾ. ಶಾಲೆ ಹಡವಿನಕೋಣೆ

Team Udayavani, Nov 9, 2019, 5:31 AM IST

0811BDRE1A

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಬೈಂದೂರು: ಜಿಲ್ಲೆಯ ಅತ್ಯಂತ ವಿಶಾಲ ವ್ಯಾಪ್ತಿ ಹೊಂದಿರುವ ಶಿರೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಡವಿನಕೋಣೆ ಸ.ಹಿ. ಪ್ರಾ. ಶಾಲೆ ಸರ್ವಧರ್ಮ ಸಮನ್ವತೆಯ ಹಿನ್ನೆಲೆ ಹೊಂದಿದ 106 ವರ್ಷದ ಹಿರಿಯ ಶಾಲೆಯಾಗಿದೆ. ಶಿರೂರು ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರಿಗೆ ಈ ಶಾಲೆ ಕೇಂದ್ರ ಭಾಗದಲ್ಲಿದೆ. 1913ರಲ್ಲಿ ಆರಂಭವಾದ ಈ ಶಾಲೆ ಮೊದಲು ಉರ್ದು ಶಾಲೆಯಾಗಿತ್ತು. ಜಮಾಯಿತ್‌ ಸುಪರ್ಧಿಯಲ್ಲಿದ್ದು ಮದ್ರಸಾದ ಖಾಸಗಿ ಕಟ್ಟಡದಲ್ಲಿರುವ ಶಾಲೆಯನ್ನು ಅಂಜುಮಾನ್‌ ಸಂಸ್ಥೆ ನಿರ್ವಹಣೆ ಜವಾಬ್ದಾರಿ ಹೊಂದಿತ್ತು. ಆರಂಭದಲ್ಲಿ 1100 ವಿದ್ಯಾರ್ಥಿಗಳಿದ್ದರು. ಈ ಶಾಲೆಯ ಹಳೆಯ ದಾಖಲೆಗಳು ಇಲ್ಲದಿದ್ದರು ಸಹ 1929 ರಿಂದ ಉರ್ದು ಭಾಷೆಯ ಕಡತಗಳು ಲಭ್ಯವಿವೆ. ಹಿರಿಯ ಶಿಕ್ಷಕರ ಅಭಿಪ್ರಾಯದ ಪ್ರಕಾರ ಶಿರೂರಿನ ಸುತ್ತಮುತ್ತಲಿನ ಆಲಂದೂರು, ತೂದಳ್ಳಿ, ಕಡೆR, ಅರಮನೆಹಕ್ಲು ಮುಂತಾದ ಭಾಗದ ವಿದ್ಯಾರ್ಥಿಗಳು ಬರುವ ಕೇಂದ್ರ ಸ್ಥಾನದ ಶಾಲೆ ಇದಾಗಿದೆ.

ಪ್ರಸ್ತುತ 221 ವಿದ್ಯಾರ್ಥಿಗಳು
ಪ್ರಸ್ತುತ 221 ವಿದ್ಯಾರ್ಥಿಗಳಿದ್ದು 1 ರಿಂದ 7ನೇ ತರಗತಿಯಿದೆ.12 ಕೊಠಡಿಗಳಿದ್ದು, 10 ಅಧ್ಯಾಪಕರಿದ್ದಾರೆ. ಶಾಲಾ ಪೀಠೊಪಕರಣ, ಆವರಣಗೋಡೆ, ಪೈಂಟಿಂಗ್‌ ಮುಂತಾದ ಅವಶ್ಯಕತೆಗಳಿದ್ದು ಶತಮಾನೋತ್ಸವವನ್ನು ಸರಳವಾಗಿ ಆಚರಿಸಲಾಗಿದೆ ಹಾಗೂ ವಿದ್ಯಾಭಿಮಾನಿಗಳ ಪ್ರೋತ್ಸಾಹದಿಂದ ಇನ್ನಷ್ಟು ಅಭಿವೃದ್ಧಿ ಮಾಡಬೇಕಾದ ನಿರೀಕ್ಷೆಗಳಿವೆ. ಪ್ರಸ್ತುತ ಶಾಲಾಭಿವೃದ್ಧಿ ಪ್ರತ್ಯೇಕ ಸಮಿತಿ ಮೂಲಕ ಎಲ್‌.ಕೆ.ಜಿ ಹಾಗೂ ಯು.ಕೆ.ಜಿ ಶಿಕ್ಷಣ ನೀಡಲಾಗುತ್ತಿದೆ.ಆದರೆ ಇದು ಶಾಲಾ ನಿರ್ವಹಣೆಗೊಳಪಟ್ಟಿಲ್ಲ. ಎಸ್‌.ಡಿ.ಸಿ.ಮುತುವರ್ಜಿಯಲ್ಲಿ ನಡೆಯುತ್ತಿದೆ.

ಕ್ರೀಡೆಯಲ್ಲಿ ಉತ್ತಮ ಸಾಧನೆ:
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಮೀನುಗಾರಿಕೆ ನಡೆಸುವ ಸ್ಥಳೀಯ ಮುಸ್ಲಿಂ ಸಮುದಾಯದ ಜನರು ಅಧಿಕವಿರುವ ಈ ಶಾಲೆಯಲ್ಲಿ ಹಿಂದಿನಿಂದಲೂ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹಿನ್ನೆಲೆ ಹೊಂದಿದೆ.

ಜಿಲ್ಲಾ ಮಟ್ಟದಲ್ಲೂ ಸ್ಪರ್ಧೆ
ಶಾಲಾ ಶೈಕ್ಷಣಿಕ ಪ್ರಗತಿ ಉತ್ತಮವಾಗಿದ್ದು ತಾಲೂಕು ಹಾಗೂ ಜಿಲ್ಲಾ ಮಟ್ಟದ ಹಲವು ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿರುವ ಜತೆಗೆ ಬೈಂದೂರು ಶಿಕ್ಷಣಾಧಿಕಾರಿಗಳ ಕ್ಷೇತ್ರ ವಲಯದಲ್ಲಿ ಉತ್ತಮ ಸಾಧನೆಗೈದಿದೆ.ಬಿಸಿಯೂಟ, ಸೈಕಲ್‌ ವಿದ್ಯಾರ್ಥಿಗಳಿಗೆ ಶೂ ಸೇರಿದಂತೆ ಸಮವಸ್ತ್ರ ಇನ್ನಿತರ ಸೌಲಭ್ಯ ನೀಡಿದೆ.ಶೈಕ್ಷಣಿಕವಾಗಿ ಇನ್ನಷ್ಟು ಸುಧಾರಣೆ ಕಾಣಬೇಕಾಗಿದೆ. ಕಂಪ್ಯೂಟರ್‌ ಶಿಕ್ಷಣದ ಬಗ್ಗೆ ಬೆಳವಣಿಗೆ ಕಾಣಬೇಕು ಮತ್ತು ಭಾಷೆ ಸಮಸ್ಯೆಗಳಿರುವ ಕಾರಣ ಉರ್ದು ಹಾಗೂ ಕನ್ನಡ ಭಾಷೆಯ ನಡುವೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕಾಗಿರುವುದು ಇಲ್ಲಿನ ಶಿಕ್ಷಕರ ಸವಾಲಾಗಿದೆ.1990ರಲ್ಲಿ ಈ ಶಾಲೆಯ ಶಿಕ್ಷಕರಾದ ನಾರಾಯಣ ಶೆಟ್ಟಿಯವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ದೊರೆತಿದೆ. ಸರಕಾರದ ಅನುದಾನದ ಬಳಿಕ ಸ್ಥಳೀಯ ದಾನಿಗಳು ನೆರವು ನೀಡಿ 3.30 ಎಕ್ರೆ ಜಾಗದಲ್ಲಿ ಕಟ್ಟಡ ನಿರ್ಮಿಸಿ ಹಡವಿನ ಕೋಣೆ ಶಾಲೆಯಾಗಿ ಮಾರ್ಪಾಡಾಗಿದೆ.

ಅತ್ಯಂತ ಹಳೆಯ ಇತಿಹಾಸ ಇರುವ ಈ ಶಾಲೆ ಉತ್ತಮ ಶೈಕ್ಷಣಿಕ ವಾತಾವರಣ ಹೊಂದಿದೆ.ದಾನಿಗಳು ಹಾಗೂ ಪಾಲಕರ ಸಹಕಾರದಿಂದ ಎಲ್‌.ಕೆ.ಜಿ ಹಾಗೂ ಯು.ಕೆ.ಜಿ ಆರಂಭಿಸಿದ್ದು ನೂರು ವಿದ್ಯಾರ್ಥಿಗಳಿದ್ದಾರೆ.ಆಂಗ್ಲ ಮಾಧ್ಯಮ ಶಾಲೆ ಸಮಸ್ಯೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಬಾರದು ಎನ್ನುವುದು ಇದರ ಉದ್ದೇಶವಾಗಿದೆ.ಉತ್ತಮ ಶೈಕ್ಷಣಿಕ ವಾತಾವರಣ ಹೊಂದಿದ ಹೆಗ್ಗಳಿಕೆ ಇದೆ..
-ಫಾರೂಕ್‌,
ಹಳೆ ವಿದ್ಯಾರ್ಥಿ

ಗ್ರಾಮೀಣ ಭಾಗದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣದೊಂದಿಗೆ ಶಾಲೆ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ.ಗುಣಮಟ್ಟದ ಹೆಚ್ಚಳಕ್ಕೆ ಇನ್ನಷ್ಟು ಆವಶ್ಯಕತೆಗಳನ್ನು ಶೈಕ್ಷಣಿಕ ಪ್ರಗತಿ ಸಾಧಿಸಲು ಶಿಕ್ಷಕರ ತಂಡ ಉತ್ತಮ ಪ್ರಯತ್ನ ನಡೆಸುತ್ತಿದೆ..
-ಎಸ್‌.ಆನಂದ ಮೊಗೇರ್‌,
ಮುಖ್ಯೋಪಾಧ್ಯಾಯರು

-  ಅರುಣ ಕುಮಾರ್‌,ಶಿರೂರು

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NEW-SCHOOL

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್‌ ಪ್ರೌಢಶಾಲೆಗೆ 121ರ ಸಂಭ್ರಮ

430514561342IMG-20191203-WA0023

ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ

sx-22

ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ

ds-24

112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

ds-35

ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.