ಕೊಂಜಾಡಿಯಲ್ಲಿ 20 ದಿನಗಳಿಂದ ಸರಿಯಾಗಿ ಕರೆಂಟಿಲ್ಲ
Team Udayavani, Jun 8, 2018, 6:25 AM IST
ಕುಂದಾಪುರ: ಶೇಡಿಮನೆ ಸಮೀಪದ ಕೊಂಜಾಡಿ ದೇವಸ್ಥಾನದ ಸಮೀಪದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೇ 16 ರ ಭಾರೀ ಗಾಳಿ, ಸಿಡಿಲು ಸಹಿತ ಮಹಾ ಮಳೆಗೆ ಸುಮಾರು 15 ಕ್ಕೂ ಅಧಿಕ ವಿದ್ಯುತ್ ಕಂಬಗಳು ಉರುಳಿ ಬಿದ್ದ ಪರಿಣಾಮ ಈ ಭಾಗದಲ್ಲಿ ಇನ್ನೂ ಕೂಡ ಸರಿಯಾಗಿ ವಿದ್ಯುತ್ ಪೂರೈಕೆ ಆಗಿಲ್ಲ.
ಮೇ 16ರ ಮಳೆಗೆ ಹಾಲಾಡಿ ಮೆಸ್ಕಾಂ ವ್ಯಾಪ್ತಿಯಲ್ಲಿ ಸಮಾರು 200 ವಿದ್ಯುತ್ ಕಂಬಗಳು ಉರುಳಿ ಬಿದ್ದರೆ, 5 ಟ್ರಾನ್ಸ್ಫರ್ ಕಂಬಗಳಿಗೆ ಹಾನಿಯಾದ್ದು, ಕಳೆದ 20 ದಿನಗಳಿಂದ ಇದನ್ನು ಸರಿಪಡಿಸಲು ಮೆಸ್ಕಾಂ ಹರಸಾಹಸ ಪಡುತ್ತಿದ್ದು, ಸಿಬಂದಿ ಕೊರತೆ, ರಾತ್ರಿ ಪಾಳಿಯ ನೌಕಕರರಿಲ್ಲದ ಕಾರಣ ತ್ವರಿತವಾಗಿ ದುರಸ್ತಿ ಕಾರ್ಯ ನಡೆಯುತ್ತಿಲ್ಲ. ಇದರಿಂದ ಕೊಂಜಾಡಿ ಭಾಗದಲ್ಲಿ ಸರಿಯಾಗಿ ಕರೆಂಟಿಲ್ಲ.
ಅಪಾಯಕಾರಿ ವಯರ್ಗಳು
ಸಿಬಂದಿ ಕೊರತೆಯ ನಡುವೆಯೂ ಹೆಚ್ಚಿನ ವಿದ್ಯುತ್ ಕಂಬಗಳನ್ನು ಸರಿಪಡಿಸಲಾಗಿದ್ದು, ಆದರೆ ಕೊಂಜಾಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪ ಮಾತ್ರ ಇನ್ನೂ ಕೂಡ ರಸ್ತೆ ಬದಿ ಬಿದ್ದ ವಿದ್ಯುತ್ ಕಂಬಗಳು ಹಾಗೆಯೇ ಇದೆ. ಅದರ ತೆರವು ಅಥವಾ ಸರಿಪಡಿಸುವ ಕೆಲಸ ಇನ್ನೂ ಆಗಿಲ್ಲ. ಅದಲ್ಲದೆ ಕಂಬಗಳು ಬಿದ್ದಿದ್ದರಿಂದ ರಸ್ತೆ ಪಕ್ಕದಲ್ಲೇ ವಿದ್ಯುತ್ ವಯರ್ಗಳು ಕೆಳಮಟ್ಟದಲ್ಲಿ ನೇತಾಡುತ್ತಿರುವುದು, ಅನಾಹುತವನ್ನು ಆಹ್ವಾನಿಸುವಂತಿದೆ.
ಕೊಟ್ಟರೂ, ಸರಿಯಾಗಿಲ್ಲ
ಈಗ ಬದಲಿಯಾಗಿ ಬೇರೆಯೊಂದು ಕಡೆಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಿ, ತಾತ್ಕಲಿಕ ವ್ಯವಸ್ಥೆ ಮಾಡಲಾಗಿದೆ. ಆದರೆ ಈಗ ಹಗಲು ಹೊತ್ತು 2 ರಿಂದ 3 ಗಂಟೆ ಕೊಟ್ಟರೆ, ರಾತ್ರಿ 2 ಗಂಟೆಯಷ್ಟೇ ಕರೆಂಟು ಇರುತ್ತದೆ. ಹಗಲು ಹೊತ್ತು ಕೊಡದಿದ್ದರೂ, ಕನಿಷ್ಠ ರಾತ್ರಿ ವೇಳೆಯಾದರೂ ಕರೆಂಟು ಕೊಡಲಿ. ಇಷ್ಟು ದಿನವಾದರೂ, ಇನ್ನೂ ವ್ಯವಸ್ಥೆ ಸರಿಪಡಿಸಿಲ್ಲ ಎಂದರೆ ಏನರ್ಥ ಎಂದು ಸ್ಥಳೀಯರಾದ ಶಿವ ಕೊಂಜಾಡಿ ಅವರು ಮೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಇನ್ನೆರಡು ದಿನಗಳಲ್ಲಿ ಸರಿಪಡಿಸುತ್ತೇವೆ
200ಕ್ಕೂ ಹೆಚ್ಚು ಕಂಬಗಳು ಉರುಳಿ ಬಿದ್ದಿದ್ದರಿಂದ ಒಂದೇ ಸಮಯದಲ್ಲಿ ಎಲ್ಲವೂ ಸರಿಪಡಿಸುವುದು ಅಸಾಧ್ಯ. ಸಮರೋಪಾದಿಯಲ್ಲಿ ವಿದ್ಯುತ್ ಕಂಬ ಅಳವಡಿಕೆ ಕಾರ್ಯವನ್ನು ಮಾಡುತ್ತಿದ್ದೇವೆ. ಇನ್ನೆರಡು ದಿನಗಳಲ್ಲಿ ಎಲ್ಲ ಕಡೆಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಪ್ರಯತ್ನಿಸುತ್ತೇವೆ.
– ಮಂಜುನಾಥ ಶಾನುಭಾಗ್, ಹಾಲಾಡಿ ಜೆಇಇ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
MUST WATCH
ಹೊಸ ಸೇರ್ಪಡೆ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ