“ಗ್ರಾಮೀಣ ಭಾಗದ ಧಾರ್ಮಿಕ ಪರಂಪರೆಯ ಹಣಬಿನ ಹಬ್ಬ’


Team Udayavani, Feb 24, 2017, 1:02 PM IST

2302tke1.jpg

ತೆಕ್ಕಟ್ಟೆ:  ನಮ್ಮ  ಭಾರತೀಯ  ಹಿಂದೂ ಸಂಸ್ಕೃತಿಯಲ್ಲಿ  ಧಾರ್ಮಿಕ  ಆಚರಣೆಗಳು   ಜಾನಪದ ಶೈಲಿಯಲ್ಲಿ ಯೇ ತಲೆಮಾರಿನಿಂದಲೂ ಪರಂಪರಾನುಗತವಾಗಿ ಸಂಸ್ಕಾರಯುತವಾಗಿ ನಡೆದುಕೊಂಡು ಬಂದಿದ್ದು  ಪ್ರಸ್ತುತ  ವಿದ್ಯಮಾನದಲ್ಲಿ ಗ್ರಾಮೀಣ  ಜನಪದ ವಿಶಿಷ್ಟ ಸಂಸ್ಕೃತಿಗಳು ಆಧುನಿಕ ತಂತ್ರಜ್ಞಾನಕ್ಕೆ ಸಿಲುಕಿ ನಲುಗುತ್ತಿರುವುದು ವಿಪರ್ಯಾಸ.

ಧಾರ್ಮಿಕ ಪರಂಪರೆ
ಕರಾವಳಿ ಕರ್ನಾಟಕದಲ್ಲಿ  ಮಹಾಶಿವರಾತ್ರಿಯಂದು ವಿಶಿಷ್ಟವಾಗಿ ಆಚರಿಸುವ ಗ್ರಾಮೀಣ ಧಾರ್ಮಿಕ ಪರಂಪರೆಯಿಂದ ಆಚರಿಸಲ್ಪಡುವ ಸಂಪ್ರದಾಯವೇ ಹಣಬಿನ ಹಬ್ಬ (ದಿಂ ಸಾಲ್‌ ಹಬ್ಬ)  ಹಿಂದೂ ಪುರಾಣ ತಿಳಿಸುವಂತೆ ಶಿವನು ಉರಿಗಣ್ಣಿನಿಂದ ಮನ್ಮಥನನ್ನು ಸುಡುವ ಅದರ  ಪ್ರತಿಬಿಂಬಿತವಾಗಿ ಹಣಬು ಸುಡುವುದು ಎಂಬುವುದು ಪಾರಂಪರಿಕೆಯ ನಂಬಿಕೆ.

ಶಿವನಿಗೆ  ವಿಶೇಷ ಪೂಜೆ
ಮಹಾಶಿರಾತ್ರಿಯಂದು  ಶಿವನ ಆಲಯದಲ್ಲಿ  ಶಿವನಿಗೆ   ವಿಶೇಷವಾದ ಪೂಜೆಯನ್ನು ಅರ್ಪಿಸುವ ಮೂಲಕ  ಗ್ರಾಮೀಣ ಕೃಷಿ ಸಮುದಾಯದ ಹಿರಿಯರು ಸಂಪ್ರದಾಯದಂತೆ ಮೊದಲ ದಿನ ಅಡಿಕೆ  ಹಣಬು ಸುಡುವ ಮೂಲಕ ಹಣಬಿನ ಹಬ್ಬಕ್ಕೆ ಚಾಲನೆ ನೀಡುತ್ತಾರೆ. ಅನಂತರ  ಮರುದಿನ ಊರಿನ ಗ್ರಾಮಸ್ಥರು ಒಗ್ಗೂಡಿಕೊಂಡು ಶಿವನ ಆಲಯದಲ್ಲಿ  ವಿಶಿಷ್ಟವಾಗಿ ಹಣಬಿಗೆ ಬೆಂಕಿ ಸ್ಪರ್ಶಿಸುವ  ಮೊದಲು  ಕುಂದಗನ್ನಡದಲ್ಲಿಯೇ ಶಿವನನ್ನು ಕೊಂಡಾಡುತ್ತ ಅತ್ಯಂತ ಭಕ್ತಿ ಭಾವದಿಂದ ತನ್ಮಯರಾಗುತ್ತಾರೆ.

ಗ್ರಾಮ್ಯ ಸೊಗಡಿನ  ಹಣಬಿನ  ಹಬ್ಬದ  ಕುಂದಗನ್ನಡದ ಪದ್ಯ ಸಾಲು 
ದಿಂ ಸಾಲ್‌ ಎನಿರೋ … ದಿಂಸಾಲ್‌||
( ಒಂದೇ ದನಿಯಲ್ಲಿ ಎಲ್ಲರೂ ಒಗ್ಗೂಡಿಕೊಂಡು ಹೇಳುವರು )

ನಮ್ಮ ಕಾಮನಿಗೆ ಮಹಾದೊಡ್ಡ ಹಬ್ಬವೋ…  ದಿಂ ಸಾಲ್‌ |

ಇಂದಿವಿràತ್ತೂತ್ತಿಗೆ  ಮಹಾ ದೊಡ್ಡ ಹಬ್ಬವೋ…ದಿಂ ಸಾಲ್‌  |

ನಾಳಿ ಇಷ್ಟೋತ್ತಿಗೆ ಎನ್‌ತಿಂತ್ರಿ  ಮಕ್ಕಳೇ…ದಿಂ ಸಾಲ್‌ |

ನಮ್ಮ ಕಾಮನಿಗೆ ಹೆಣ್ಣು ಕೇಳ್ಳೋಕೋದರೋ …ದಿಂ ಸಾಲ್‌ |

ಹೆಣ್ಣು ಕೇಳುಕ್‌ ಹೋದರೋ  ಎಲ್ಲಿಗಾಗಿ ಹೋದರೋ…ದಿಂ ಸಾಲ್‌ |

ಎಲ್ಲಿಗಾಗಿ ಹೋದರೂ ಕೊಡ್‌ಸಿಗಾಗಿ  ( ಕೊಡಚಾದ್ರಿ) ಹೋದರೋ…ದಿಂ ಸಾಲ್‌ |

ಕೊಡಸಿಗಾಗಿ ಹೋದರೋ ಕೊಡಸುವು ತಂದರೋ…ದಿಂ ಸಾಲ್‌ |

ಈ ಸಾಲು  ಕುಂದ ಗನ್ನಡದಲ್ಲಿ ಪದ್ಯಗಳನ್ನು ಹೇಳುತ್ತ ನೂರಾರು ಭಾವುಕ ಭಕ್ತರು ಒಂದೆಡೆ ಸೇರಿಕೊಂಡು  ವಿಶಿಷ್ಟವಾಗಿ ಆಚರಿಸುವ  ಹಬ್ಬವೇ ಹಣಬಿನ ಹಬ್ಬ (ದಿಂ ಸಾಲ್‌ ಹಬ್ಬ)

ಶಿವನನ್ನು ಕೊಂಡಾಡುವಿಕೆ
ಅನಂತರ ನಂಬಿಕೆಯಂತೆ ಪರಂಪರೆಯಿಂದ ನಡೆಸಿಕೊಂಡು ಬಂದ ಗ್ರಾಮೀಣ ಸಮುದಾಯ ಮನೆತನದವರು ಶಿವನನ್ನು ಕೊಂಡಾಡುತ್ತ ಇಡೀ ಗ್ರಾಮದ ಅದೆಷ್ಟೋ ಸಹಸ್ರಾರು ಮನೆಗಳಿಗೆ ತೆರಳುವ ಸಂಪ್ರದಾಯ ಇಂದಿಗೂ ಉಳಿದಿದ್ದು ಇದರಿಂದ ಗ್ರಾಮದಲ್ಲಿ ಮಳೆ, ಬೆಳೆ, ಶಾಂತಿ, ಸಮೃದ್ಧಿಗಳು ನೆಲೆಸಲಿ ಎನ್ನುವುದೇ ನಂಬಿಕೆ  ಇಂದಿಗೂ  ಈ ಸಂಪ್ರದಾಯ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ  ದೇವಸ್ಥಾನ, ಉಳೂ¤ರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ, ತೆಕ್ಕಟ್ಟೆ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಹಾಗೂ  ಕುಂಭಾಶಿ ಮಹಾಲಿಂಗೇಶ್ವರ (ಹರಿಹರ) ದೇವಸ್ಥಾನ, ಬೇಳೂರು ಶ್ರೀಮಹಾಲಿಂಗೇಶ್ವರ, ದೇಲಟ್ಟು ಶ್ರೀ ಮಹಾಲಿಂಗೇಶ್ವರ  ಸೇರಿದಂತೆ  ಇಂದಿಗೂ  ವಿಶಿಷ್ಟವಾಗಿ  ಆಚರಿಸಿಕೊಂಡು ಬರುತ್ತಿದ್ದಾರೆ.

ಇಂತಹ ಕುಂದಗನ್ನಡದ ಗ್ರಾಮೀಣ ಜನಪದ ಸಂಸ್ಕೃತಿ ಉಳಿವಿಗೆ ಸಂಬಂಧಪಟ್ಟ ಸಂಸ್ಕೃತಿ ಇಲಾಖೆ  ಪ್ರೋತ್ಸಾಹ ನೀಡುವ ಮೂಲಕ ಅದೆಷ್ಟೋ ನಶಿಸುತ್ತಿರುವ ಕುಂದಗನ್ನಡದ  ಅತ್ಯಮೂಲ್ಯ ಜನಪದ  ಈ ಮೂಲ ಸೊಗಡಿನ ಉಳಿವಿಗೆ ಅಧ್ಯಯನಶೀಲರಾಗಿ ಪ್ರೋತ್ಸಾಹಿಸ ಬೇಕಾದ ಅನಿವಾರ್ಯತೆ ಇದೆ.
– ತೆಂಕಮನೆ ಗೋವಿಂದ ದೇವಾಡಿಗ ತೆಕ್ಕಟ್ಟೆ, ಹಿರಿಯ ಕೃಷಿಕ

– ಟಿ. ಲೋಕೇಶ್‌ ಆಚಾರ್ಯ

ಟಾಪ್ ನ್ಯೂಸ್

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.