ಹಂಗಾರಕಟ್ಟೆ ಕಲಾಕೇಂದ್ರ; ಯಕ್ಷಗಾನ ತರಬೇತಿ ಶಿಬಿರ
Team Udayavani, Aug 21, 2017, 7:55 AM IST
ಕೋಟ: ಜಾನಪದ ಕಲೆಗಳಲ್ಲಿ ನಾವು ಗುಣಾತ್ಮಕವಾದ ಅಂಶಗಳನ್ನು ಕಾಣಬಹುದಾಗಿದೆ. ಇಂದು ಪ್ರಾದೇಶಿಕ ಸಾಂಪ್ರದಾಯಿಕ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯ ಇದೆ ಎಂದು ರಂಗಕರ್ಮಿ ಗೋಪಾಲಕೃಷ್ಣ ನಾೖರಿ ಹೇಳಿದರು.
ಅವರು ಸಾಲಿಗ್ರಾಮ ಗುಂಡ್ಮಿಯಲ್ಲಿರುವ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ, ಚಿತ್ರದುರ್ಗ ಹೊಸದುರ್ಗದ ಸಾಣೆಹಳ್ಳಿಯ ಶಿವಕುಮಾರ್ ರಂಗ ಪ್ರಯೋಗ ಶಾಲೆಯ ವಿದ್ಯಾರ್ಥಿಗಳಿಗೆ 20ದಿನಗಳ ಕಾಲ ನಡೆಯುವ ಯಕ್ಷಗಾನ ಶಿಬಿರಕ್ಕೆ ಆ. 20ರಂದು ಚಾಲನೆ ನೀಡಿ ಮಾತನಾಡಿದರು.
ಯಕ್ಷಗುರು ಸದಾನಂದ ಐತಾಳ ಮಾತನಾಡಿ, ಭಾರತೀಯ ಕಲೆಗಳು ಜನರಿಂದಲೇ ಹುಟ್ಟಿರುವಂತಹದ್ದು. ಅಂತರಂಗದ ತುಡಿತವಾಗಿ ಈ ಕಲೆಗಳು ಜನಮಾನಸದಲ್ಲಿ ಇಂದೂ ಉಳಿದಿವೆ ಎಂದರು.
ಶಿವಕುಮಾರ್ ರಂಗ ಪ್ರಯೋಗ ಶಾಲೆಯ ಪ್ರಾಂಶುಪಾಲ ಜಗದೀಶ್, ಯಕ್ಷಗಾನ ಕಲಾಕೇಂದ್ರದ ವೈಕುಂಠ ಹೆಬ್ಟಾರ್ ಉಪಸ್ಥಿತರಿದ್ದರು. ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ್ ಹೆಬ್ಟಾರ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ