ಹಾರೆ ಹಿಡಿದು ಗಿಡ ನೆಟ್ಟ ಪೊಲೀಸರು
Team Udayavani, Jun 6, 2019, 6:10 AM IST
ಉಡುಪಿ: ಸಾಮಾನ್ಯವಾಗಿ ಸಾರ್ವಜನಿಕರ ರಕ್ಷಣೆ, ಕಾನೂನು ಸುವ್ಯವಸ್ಥೆಗಾಗಿ ಲಾಠಿ, ಬಂದೂಕು ಹಿಡಿಯುವ ಪೊಲೀಸರು ಬುಧವಾರ ಮಾತ್ರ ಕೈಯಲ್ಲಿ ಹಾರೆ, ಪಿಕಾಸು ಮತ್ತು ನೀರು ತುಂಬಿದ ಬಕೆಟ್ಗಳನ್ನು ಹಿಡಿದು ಹಸಿರು ಬೆಳೆಸುವ ಕೆಲಸದಲ್ಲಿ ತೊಡಗಿದ್ದರು.
ಎಸ್ಪಿ ನಿಶಾ ಜೇಮ್ಸ್ ಅವರ ಆದೇಶದಂತೆ ಉಡುಪಿ ಜಿಲ್ಲೆಯ ಬಹುತೇಕ ಎಲ್ಲ ಪೊಲೀಸ್ ಠಾಣೆ ಗಳಲ್ಲಿಯೂ ವಿಶ್ವಪರಿಸರ ದಿನ ಆಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ಜರಗಿತು.
ಬೆಳಗ್ಗೆ ಸುಮಾರು ಒಂದು ತಾಸು ಸಮಯವನ್ನು ಪೊಲೀಸ್ ಸಿಬಂದಿ, ಅಧಿಕಾರಿಗಳು ತಮ್ಮ ಕಚೇರಿ ಆವರಣದಲ್ಲಿ ಹಸಿರು ಬೆಳೆಸುವುದಕ್ಕಾಗಿ ಮೀಸಲಿಟ್ಟರು.
ಎಷ್ಟು ಜಾಗ ಲಭ್ಯವಿದೆಯೋ ಅಷ್ಟು ಜಾಗದಲ್ಲಿ ಗಿಡ ನೆಡಬೇಕು. ತೀರಾ ಕಡಿಮೆ ಜಾಗವಿದ್ದರೆ ಹೂವಿನ ಗಿಡವನ್ನಾದರೂ ನೆಡಬೇಕು ಎಂದು ಎಸ್ಪಿಯವರು ಸೂಚನೆ ನೀಡಿದ್ದರು. ಹಾಗಾಗಿ ಮೊದಲ ಬಾರಿಗೆ ಎಂಬಂತೆ ಜಿಲ್ಲೆಯ ಪೊಲೀಸ್ ಠಾಣೆಯ ಆವರಣಗಳಲ್ಲಿ ಏಕಕಾಲಕ್ಕೆ ಹಸಿರು ಬೆಳೆಸುವ ಕೆಲಸ ನಡೆಯಿತು.
ಪೊಲೀಸ್ ಠಾಣೆಗಳಲ್ಲಿ 500 ಗಿಡ
ಪೊಲೀಸ್ ಠಾಣೆಗಳಲ್ಲಿ ನೆಡುವುದಕ್ಕಾಗಿ ಅರಣ್ಯ ಇಲಾಖೆಯಿಂದ 500 ಗಿಡಗಳನ್ನು ಕೇಳಿದ್ದೇವೆ. ಉತ್ತಮ ಸ್ಪಂದನೆ ದೊರೆತಿದೆ. ಬಹುತೇಕ ಎಲ್ಲ ಠಾಣೆಗಳಲ್ಲಿಯೂ ಬುಧವಾರ ಗಿಡ ನೆಡಲಾಗಿದೆ. ಠಾಣೆಗಳಲ್ಲಿಯೂ ಹಸಿರು ಪರಿಸರವಿದ್ದರೆ ಅಲ್ಲಿನ ಸಿಬಂದಿ, ಅಲ್ಲಿಗೆ ಆಗಮಿಸುವ ಸಾರ್ವಜನಿಕರಿಗೆ ಉತ್ತಮ ಅನುಭವ ದೊರೆಯುತ್ತದೆ.
-ನಿಶಾ ಜೇಮ್ಸ್ , ಎಸ್ಪಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ