ಆಟೋ ರಿಕ್ಷಾ ನಿಲ್ದಾಣದಲ್ಲಿ ಆರೋಗ್ಯ ಪಾಠ !

ಹಕ್ಕಿಗಳ ಚಿಲಿಪಿಲಿ; ಚಾಲಕರ ಸಾಮಾಜಿಕ ಕಳಕಳಿ

Team Udayavani, Sep 21, 2019, 5:45 AM IST

AUTO-A

ಮಣೋಳಿಗುಜ್ಜಿ ಆಟೋರಿಕ್ಷಾ ನಿಲ್ದಾಣದಲ್ಲಿರುವ ಹಕ್ಕಿಗಳ ಗೂಡು.

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯ ದೊಡ್ಡಣಗುಡ್ಡೆ ಮಣ್ಣೋಳಿಗುಜ್ಜಿ ಆಟೋರಿಕ್ಷಾ ನಿಲ್ದಾಣವು ಸಾರ್ವಜನಿಕರಿಗೆ ಆರೋಗ್ಯ ಪಾಠ, ಹಕ್ಕಿಗಳ ಕಲರವದಿಂದ ವಿಶಿಷ್ಟ ರೀತಿಯಲ್ಲಿ ಗಮನ ಸೆಳೆಯುತ್ತಿದೆ.

“ನಮ್ಮ ಆರೋಗ್ಯ ನಮ್ಮ ಕೈಯಲ್ಲಿ’ ಎಂಬ ಶೀರ್ಷಿಕೆಯ, 42 ಅಡಿ ಉದ್ದದ ಫ‌ಲಕವು 100ಕ್ಕೂ ಅಧಿಕ ಹಣ್ಣು ಹಂಪಲು, ತರಕಾರಿಗಳ ಕುರಿತಾದ ಚಿತ್ರ ಸಹಿತ ಮಾಹಿತಿ ನೀಡುತ್ತಿದೆ. ಇದನ್ನು ತಿಳಿದುಕೊಳ್ಳಲೆಂದು ಅನೇಕ ಮಂದಿ ಸಾರ್ವಜನಿಕರು ಇಲ್ಲಿಗೆ ಆಗಮಿಸುತ್ತಾರೆ. ಮೊದಲು ಮನೆ ಮದ್ದು ಕುರಿತಾದ ಮಾಹಿತಿಯ ಬೃಹತ್‌ ಫ‌ಲಕ. ಇದೀಗ ತರಕಾರಿ, ಹಣ್ಣುಹಂಪಲುಗಳ ಸಮಗ್ರ ಮಾಹಿತಿ ನೀಡಲಾಗುತ್ತಿದೆ.

ಹಕ್ಕಿಗಳ ಆಕರ್ಷಣೆ
ಹಕ್ಕಿಗಳ ಮೇಲಿನ ಪ್ರೀತಿ ಇಲ್ಲಿನ ಆಟೋ ಚಾಲಕರ ಇನ್ನೊಂದು ವಿಶೇಷ. ಹಿಂದೆ ಇಲ್ಲಿ ಸಣ್ಣ ಗೂಡಿತ್ತು. ಅದರಲ್ಲಿ 10 ಲವ್‌ ಬರ್ಡ್ಸ್‌ಗಳಿದ್ದವು. ಅನಂತರ 7 ಉಳಿದವು. ಅವುಗಳು ಮೊಟ್ಟೆ ಇಟ್ಟು ಒಟ್ಟು ಹಕ್ಕಿಗಳ ಸಂಖ್ಯೆ 21ಕ್ಕೇರಿತು. ಈಗ ದೊಡ್ಡ ಗೂಡು ನಿರ್ಮಿಸಲಾಗಿದೆ. ಇದು ಈಗ ಮಕ್ಕಳು, ಸಾರ್ವಜನಿಕರ ಆಕರ್ಷಣೆಯ ಕೇಂದ್ರ. ಇಲ್ಲಿನ ರಸ್ತೆಗಳಲ್ಲಿ ವಾಕಿಂಗ್‌ ಬರುವವರು, ಪ್ರಯಾಣಿಕರು ಕೂಡ ನಿಲ್ದಾಣದ ಬೆಂಚ್‌ನಲ್ಲಿ ವಿಶ್ರಾಂತಿ ಪಡೆದು ಆರೋಗ್ಯ ಕುರಿತಾದ ಫ‌ಲಕದತ್ತ ದೃಷ್ಟಿ ಹಾಯಿಸುತ್ತಾರೆ, ಹಕ್ಕಿಗಳೊಂದಿಗೆ ಸಮಯ ಕಳೆಯುತ್ತಾರೆ.

ಸಮಾಜಕ್ಕಾಗಿ…
ಇಲ್ಲಿನ ಚಾಲಕರು ಶಾಲೆಗಳಿಗೆ ನಿರಂತರವಾಗಿ ಸಹಾಯಹಸ್ತ ಚಾಚುತ್ತಾ ಬಂದಿದ್ದಾರೆ. ಕರಂಬಳ್ಳಿ ಸರಕಾರಿ ಪ್ರಾಥಮಿಕ ಶಾಲೆ, ದೊಡ್ಡಣಗುಡ್ಡೆ, ಗುಂಡಿಬೈಲು ಶಾಲೆಗಳಿಗೆ ರೈನ್‌ಕೋಟ್‌, ಕಪಾಟು, ಬ್ಯಾಗ್‌ ಇತ್ಯಾದಿ ಪರಿಕರಗಳನ್ನು ನೀಡುತ್ತಿದ್ದಾರೆ. ಪಕ್ಕದ ಕರಂಬಳ್ಳಿ ಸರಕಾರಿ ಶಾಲೆಯವರು ಬೇಡಿಕೆ ಇಡುವ ಪರಿಕರಗಳನ್ನು ಒದಗಿಸುತ್ತಿದ್ದಾರೆ. ನಿಲ್ದಾಣದೊಳಗೆ ಸೋಲಾರ್‌ ಬೆಳಕು ಅಳವಡಿಸಲಾಗಿದೆ.

ಬಡ ವಿದ್ಯಾರ್ಥಿನಿಗೆ
ಪದವಿ ಶಿಕ್ಷಣ
ರಥಬೀದಿಯ ರಿಕ್ಷಾ ನಿಲ್ದಾಣದ ಚಾಲಕನೋರ್ವರು ಅಪಘಾತದಿಂದ ಗಾಯಗೊಂಡು ದುಡಿಯಲಾಗದ ಸ್ಥಿತಿಯಲ್ಲಿದ್ದಾಗ ಅವರಿಗೆ ಆರ್ಥಿಕ ನೆರವು ಒದಗಿಸಲಾಗಿದೆ. ದೊಡ್ಡಣಗುಡ್ಡೆ ಆಸ್ಪತ್ರೆ ಸಮೀಪದಲ್ಲಿ ತಾಯಿ ಮತ್ತು ಮಗಳು ಮಾತ್ರ ವಾಸವಿದ್ದು ಆರ್ಥಿಕವಾಗಿ ತೀರಾ ಸಮಸ್ಯೆಯಲ್ಲಿದ್ದರು. ಮಗಳ ವಿದ್ಯಾಭ್ಯಾಸಕ್ಕಾಗಿ 5 ವರ್ಷ ಇಲ್ಲಿನ ಚಾಲಕರು ಆರ್ಥಿಕ ಸಹಾಯ ಮಾಡಿದ್ದರು. ಆಕೆ ಈಗ ಪದವಿ ಮುಗಿಸಿದ್ದಾಳೆ. ಕರಂಬಳ್ಳಿ ರಾಮ್‌ ಬೆಟ್ಟುವಿನಲ್ಲಿ ಅಂಗವಿಕಲ ತಾಯಿ ಮಗಳ ಕುಟುಂಬಕ್ಕೆ ವೀಲ್‌ಚೇರ್‌, ಇನ್ನು ಕೆಲವು ಕುಟುಂಬಗಳಿಗೆ ಅಕ್ಕಿ ಇತ್ಯಾದಿ ಸೇವಾ ಕಾರ್ಯಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ.

ಪ್ರತಿ ತಿಂಗಳು 200 ರೂ. ಪ್ರತ್ಯೇಕ ಖಾತೆಯಲ್ಲಿ ಜಮೆ
ಸಾಮಾಜಿಕ ಸೇವಾ ಕಾರ್ಯವೂ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಆಯೋಜನೆ, ಹಕ್ಕಿಗಳ ಸಾಕಣೆ, ನಿಲ್ದಾಣದ ಒಟ್ಟಾರೆ ನಿರ್ವಹಣೆಗಾಗಿ ಚಾಲಕರು ತಮ್ಮ ದುಡಿಮೆಯಲ್ಲಿ ಪ್ರತೀ ತಿಂಗಳು 200 ರೂ.ಗಳನ್ನು ಪ್ರತ್ಯೇಕ ಖಾತೆಯಲ್ಲಿ ಜಮೆ ಮಾಡುತ್ತಾರೆ. ಇದಕ್ಕೆ ಕೆಲವು ದಾನಿಗಳೂ ಕೈ ಜೋಡಿಸುತ್ತಾರೆ. ಈ ಆಟೋ ನಿಲ್ದಾಣಕ್ಕೆ ರಥಬೀದಿಯ ಗಣೇಶೋತ್ಸವ ಸಮಿತಿಯಿಂದ ಉತ್ತಮ ಆಟೋ ನಿಲ್ದಾಣ ಎಂಬ ಬಹುಮಾನವೂ ದೊರೆತಿದೆ. ಆಟೋ ರಿಕ್ಷಾ ನಿಲ್ದಾಣದಿಂದ ಕೇವಲ ಆಟೋ ಬಾಡಿಗೆ ಮಾತ್ರ ದೊರೆಯದೆ ಸಾರ್ವಜನಿಕರಿಗೆ ಇತರ ಉಪಯೋಗಗಳು ದೊರೆಯಬೇಕು ಎಂಬುದು ನಮ್ಮ ಇಚ್ಛೆ. ನಮ್ಮ ನಿಲ್ದಾಣವನ್ನು ಕೂಡ ಜನ ನೋಡಬೇಕು. ಇಲ್ಲಿಗೆ ಆಗಮಿಸಬೇಕು ಎಂಬ ಉದ್ದೇಶದಿಂದ ಆರೋಗ್ಯ ಮಾಹಿತಿ, ಹಕ್ಕಿಗೂಡು ಇತ್ಯಾದಿಗಳನ್ನು ಕೂಡ ಮಾಡಿದ್ದೇವೆ
– ಉದಯ್‌, ಮಣೋಳಿಗುಜ್ಜಿ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ

-ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.