“ಬೌದ್ಧಿಕ ಕೌಶಲದೊಂದಿಗೆ ಹೃದಯ ವೈಶಾಲ್ಯವೂ ಯುವಜನತೆಗೆ ಅವಶ್ಯ’
Team Udayavani, Jul 3, 2017, 3:45 AM IST
ಕಾರ್ಕಳ: ವರ್ತಮಾನದ ಯುವ ಜನತೆ ವಿವಿಧ ಮೂಲಗಳಿಂದ ಬೌದ್ಧಿಕ ಕೌಶಲವನ್ನು
ಹೊಂದಿಸಿಕೊಳ್ಳುತ್ತಿದೆ. ಅದರಷ್ಟೇ ಮುಖ್ಯವಾಗಿ ಹೃದಯ ವೈಶಾಲ್ಯದ ಆವಶ್ಯಕತೆಯನ್ನೂ ಯುವಜನಾಂಗಕ್ಕೆ ಮನಗಾಣಿಸಬೇಕಾಗಿದೆ. ಈ ಮಹತ್ಕಾರ್ಯ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಬೇಕಾಗಿದೆ ಎಂದು ಪ್ರಾಧ್ಯಾಪಕ, ಲೇಖಕ ಡಾ| ವರದರಾಜ ಚಂದ್ರಗಿರಿ ಹೇಳಿದ್ದಾರೆ.
ಅವರು ಶುಕ್ರವಾರ ಹೊಟೇಲ್ ಪ್ರಕಾಶದ ಸಂಭ್ರಮ ಸಭಾಮಂದಿರದಲ್ಲಿ ಜರಗಿದ ಕಾರ್ಕಳ ಸಾಹಿತ್ಯ ಸಂಘದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಂಡಿತ ಪರಂಪರೆಯೊಂದು ಗಳಿಸಿದ್ದ ಮತ್ತು ತಿಳಿಸಿದ್ದ ಭಾಷಾ ಶುದ್ಧಿಯ ಬಗೆಗಿನ ಅರಿವಾಗಲೀ,ಪರಂಪರೆ ಹೇಗೆ ಹಲವು ಬಗೆಯ ಹೊಸತನಗಳಿಗೆ ನಾಂದಿ ಹಾಡಿದೆ ಎನ್ನುವುದರ ಅರಿವಾಗಲೀ ಹೊಸ ಪೀಳಿಗೆಗೆ ಇಲ್ಲವಾಗಿರುವುದು ವಿಷಾದನೀಯ. ಈ ತಲೆಮಾರಿಗೆ ಸಾಹಿತ್ಯ ಸಂವೇದನೆಯನ್ನು ತಿಳಿಸಿ ಹೇಳುವ ಕಾರ್ಯವನ್ನು ನಮ್ಮ ಸಾಹಿತ್ಯ ಸಂಘಗಳೂ ಕನ್ನಡಪರ ಸಂಘಟನೆಗಳೂ ಮಾಡಬೇಕಾಗಿದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯ ಕೆ. ಭಾಸ್ಕರ ಕಾರಂತ ಸ್ವಾಗತಿಸಿದರು. ಕಾರ್ಯಕರ್ತ ವೈ. ಜಗದೀಶ ಪರಿಚಯಿಸಿದರು. ಸಹ ಕಾರ್ಯದರ್ಶಿ ಕೆ. ಪಿ. ಶೆಣೈ ಅತಿಥಿಯನ್ನು ಸತ್ಕರಿಸಿದರು. ಗೌರವಾಧ್ಯಕ್ಷ ಆರ್. ತುಕಾರಾಮ ನಾಯಕ್ ಉಪಸ್ಥಿತರಿದ್ದರು. ರುಕ್ಮಿಣೀದೇವಿ ಕಾರ್ಯಕ್ರಮ ನಿರೂಪಿಸಿ, ಸಾಹಿತ್ಯ ಸಂಘದ ಕಾರ್ಯದರ್ಶಿ ಪ್ರೊ| ಬಿ. ಪದ್ಮನಾಭ ಗೌಡ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
MUST WATCH
ಹೊಸ ಸೇರ್ಪಡೆ
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ
Vote ಮಾಡದಿದ್ದರೆ ಬ್ಯಾಂಕ್ ಖಾತೆಯಿಂದ 350 ರೂ. ಕಡಿತ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ