ಉದ್ಯಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ವ್ಯಾಪಕ ಹಾನಿ
Team Udayavani, May 30, 2018, 6:00 AM IST
ಕಟಪಾಡಿ: ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ಹಾಗೂ ಭೀಕರ ಗಾಳಿಯ ಪರಿಣಾಮ ಉಂಟಾದ ಅನಾಹುತಗಳ ಪ್ರದೇಶಗಳಿಗೆ ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್ ಅವರು ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ನೀಡಿ¨ªಾರಲ್ಲದೆ ತನ್ನ ಕೈಲಾದ ಆರ್ಥಿಕ ಸಹಾಯವನ್ನು ಮಾಡಿ ಮಾನವೀಯತೆಯನ್ನು ಮೆರೆದಿರುತ್ತಾರೆ.
ಉದಯವಾಣಿಯೊಂದಿಗೆ ಪ್ರತಿ ಕ್ರಿಯಿಸಿದ ಕಾಪು ಶಾಸಕರು ಈ ಘಟನೆಯ ಬಗ್ಗೆ ಸಂಬಂಧಿಸಿದ ಇಲಾಖೆಗೆ, ಮಾನ್ಯ ಜಿಲ್ಲಾಧಿಕಾರಿಯವರಿಗೆ ಕರೆ ಮಾಡಿ ಮಾತನಾಡಿದ್ದು ಹೆಚ್ಚಿನ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿರುವುದಾಗಿ ತಿಳಿಸಿದರು ಅದೇ ರೀತಿ ಮೆಸ್ಕಾಂ ಇಲಾಖೆ ಪಿಡಬ್ಲೂಡಿ ಇಲಾಖೆಗಳ ಜತೆಯೂ ಮಾತುಕತೆ ನಡೆಸಿದ್ದು
ಎರಡು ಮೂರು ದಿನಗಳೊಳಗೆ ವಿದ್ಯುತ್ ಸಂಪರ್ಕವನ್ನು ಸಮರ್ಪಕಗೊಳಿಸುವುದಾಗಿ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭ ವಿಜಯ ಕುಮಾರ್ ಉದ್ಯಾವರ, ಸತೀಶ್ ಪೂಜಾರಿ, ಜೀತೇಂದ್ರ ಶೆಟ್ಟಿ ಉದ್ಯಾವರ, ರಾಧಾಕೃಷ್ಣ ಶ್ರೀಯಾನ್, ವಿನೋದ್ ಕುಮಾರ್ ಪಿತ್ರೋಡಿ, ರಾಜೇಶ್ ಕುಂದರ್ ಪಿತ್ರೋಡಿ, ರಜನಿ ಅಂಚನ್, ಉಮೇಶ್ ಕರ್ಕೇರ ಪಿತ್ರೋಡಿ, ಸಚಿನ್ ಬೊಳಜೆ, ಚೇತನ್ ಪಿತ್ರೋಡಿ, ನಿಶಾಂತ್ ಕರ್ಕಡ, ಗಣೇಶ್ ಕುಮಾರ್ ಸಂಪಿಗೆ ನಗರ, ವಿಲ್ಸನ್ ರಾಜ್ ಕುಮಾರ್ ಮೊದಲಾದವರು ಜತೆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ