ಮುಂದುವರಿದ ಮಳೆ: ಶಿವಮೊಗ್ಗ – ಉಡುಪಿ ರಸ್ತೆ ಸಂಪರ್ಕ ಮತ್ತೆ ಕಡಿತ
Team Udayavani, Aug 8, 2019, 9:07 AM IST
ಹೆಬ್ರಿ: ಕರಾವಳಿ, ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಸೀತಾನದಿ ನೀರು ರಸ್ತೆಯ ಮೇಲೆ ಹರಿದ ಹಿನ್ನಲೆಯಲ್ಲಿ ಶಿವಮೊಗ್ಗ- ಉಡುಪಿ ರಸ್ತೆ ಸಂಪರ್ಕ ಕಡಿತವಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಉಡುಪಿ ಮತ್ತು ದಕ್ಷಿಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕೆಲವೊಂದು ತುತು೯ ವಾಹನಗಳು ಆತಂಕದಲ್ಲಿ ನೀರಿನ ಮೇಲಿಂದ ಪ್ರಯಾಣ ಮುಂದುವರಿಸಿದರೆ, ಹೆಚ್ಚಿನ ಆಗುಂಬೆಗೆ ಹೋಗುವ ವಾಹನಗಳು ಹೆಬ್ರಿ- ಕುಚ್ಚುೂರು – ಮಡಾಮಕ್ಕಿ – ಸೋಮೇಶ್ವರ ಮಾಗ೯ವಾಗಿ ಸಂಚಾರ ಮುಂದುವರಿಸಿದವು.
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಇಡೀ ರಾತ್ರಿ ನಿರಂತರವಾಗಿ ಮಳೆ ಸುರಿದಿದೆ.
ಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದಾಗಿ ಕಳಸ-ಹೊರನಾಡು ಸಂಚಾರ ಸ್ಥಗಿತವಾಗಿದೆ.
ಭಾರೀ ಮಳೆಗಾಳಿಗೆ ಜಾವಳಿ ಎಸ್ಟೇಟ್ ಬಳಿ ಗುಡ್ಡ ಕುಸಿತವಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸ್ನಾನ ಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಭಾರಿ ಮಳೆಯಿಂದಾಗಿ ಸುಬ್ರಹ್ಮಣ್ಯ- ಮಂಜೇಶ್ವರ ಸಂಪರ್ಕ ರಸ್ತೆಯ ಇನ್ನೊಂದು ಭಾಗದ ಕುಮಾರಧಾರ ಸೇತುವೆಯು ಮುಳುಗಡೆಯಾಗಿದ್ದು, ಸುಬ್ರಹ್ಮಣ್ಯ- ಕಾಣಿಯೂರು ಸಂಪರ್ಕ ಕಡಿತವಾಗಿದೆ. ಕುಮಾರಧಾರ ನದಿ ತಟದ ಹಲವು ಜನವಸತಿ ಪ್ರದೇಶಗಳು ಜಲಾವ್ರತವಾಗಿದೆ. ಕುಮಾರಧಾರ ದ್ವಾರದತ್ತ ನೆರೆ ನೀರು ಹರಿದು ಬರುತ್ತಿದೆ.
ಸುಬ್ರಹ್ಮಣ್ಯ ಕುಮಾರಧಾರ ನದಿ ಪಾತ್ರದ ಕುಲ್ಕುಂದ ಕಾಲನಿಯ ಹಲವು ಮನೆಗಳು ಜಲಾವ್ರತವಾಗಿವೆ. ಕುಟುಂಬಗಳನ್ನು ಪಕ್ಕದ ಸುರಕ್ಷಿತ ಸ್ಥಳಗಳಿಗೆ ಗ್ರಾ.ಪಂ ಅಧಿಕಾರಿ, ಸದಸ್ಯರು ಸ್ಥಳಾಂತರಿಸುತಿದ್ದಾರೆ.ಇನ್ನು ಈ ಭಾಗದಲ್ಲಿ ಗಂಜಿ ಕೇಂದ್ರ ತೆರೆದಿಲ್ಲ ಸಂತ್ರಸ್ಥರನ್ನು ಸಂಬಂಧಿಕರ ನೆರೆಯ ಸುರಕ್ಷಿತ ಮನೆಗಳಿಗೆ ಕಳುಹಿಸಿಕೊಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!