ಧಾರಾಕಾರ ಮಳೆ: ಭತ್ತದ ಬೀಜ ನಾಶ; ಕಂಗಾಲಾದ ರೈತರು
Team Udayavani, Jun 9, 2018, 6:35 AM IST
ಬಸ್ರೂರು: ಬಳ್ಕೂರು, ಬಸ್ರೂರು, ಆನಗಳ್ಳಿ, ಉಳ್ಳೂರು ಕಂದಾವರ, ಜಪ್ತಿ, ಕೋಣಿ ಮುಂತಾದೆಡೆ ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಯಿಂದ ಗದ್ದೆಗಳಿಗೆ ಬಿತ್ತಿದ ಬೀಜಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಕಳೆದ ಮೂರು ದಿನಗಳ ಹಿಂದೆ ಈ ಪ್ರದೇಶಗಳಲ್ಲಿ ಭತ್ತದ ಸಸಿಗಳಿಗಗೆ ಬೀಜಗಳನ್ನು ಬಿತ್ತಲಾಗಿತ್ತು. ಈಗಾಗಲೇ ಬಿತ್ತಿದ ಎಂ.ಒ.4 ಭತ್ತದ ತಳಿ ಪ್ರಸ್ತುತ ರೈತರಿಗೆ ಸಿಗುತ್ತಿಲ್ಲ. ಕೃಷಿ ಇಲಾಖೆಯಲ್ಲೂ ಎಂ.ಒ.4 ತಳಿ ಪ್ರಸ್ತುತ ಲಭ್ಯವಿಲ್ಲದೆ ರೈತರು ಕಂಗಾಲಾಗಿದ್ದಾರೆ. ಉಳಿದಂತೆ ಮುಕ್ತಿ,ಜಯ ಮುಂತಾದ ತಳಿಯ ಬೀಜಗಳನ್ನು ರೈತರು ಬಳಸುತ್ತಿಲ್ಲ. ಒಟ್ಟಿನಲ್ಲಿ ಅತಿ ವೃಷ್ಟಿಯಿಂದ ಈ ಭಾಗದ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ.
ಸಾಲ ಮಾಡಿ ಬಿತ್ತಿದ ಬೀಜ ನೀರು ಪಾಲಾಯ್ತು
ನಾನು ಸಹಕಾರಿ ಬ್ಯಾಂಕ್ವೊಂದರಲ್ಲಿ ಸಾಲ ಮಾಡಿ ಬೀಜ ಬಿತ್ತನೆ ಕಾರ್ಯ ಆರಂಭಿಸಿದ್ದೆ.ಆದರೆ ಈಗ ಬಂದ ಧಾರಾಕಾರ ಮಳೆಯಿಂದ ಬಿತ್ತಿದ ಬೀಜ ಕೊಚ್ಚಿಕೊಂಡು ಹೋಗಿದೆ.ಮತ್ತೂಮ್ಮೆ ಬೀಜ ಬಿತ್ತಲು ಪುನ: ಸಾಲ ಕೊಡುವುದಿಲ್ಲ.ಈಗಾಗಲೇ ನನಗೆ ರೂ.20,000ದಷ್ಟು ನಷ್ಟ ಸಂಭವಿಸಿದೆ.ಮಾಡಿದ ಸಾಲವನ್ನು ಸರಕಾರ ಮನ್ನಾ ಮಾಡಿದರೆ ನನ್ನಂತಹ ಅನೇಕ ರೈತರಿಗೆ ಉಪಕಾರ ಮಾಡಿದಂತಾಗುತ್ತದೆ.
– ರಾಮ ಪೂಜಾರಿ, ಕೃಷಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ