ಅರ್ಧಕ್ಕೆ ನಿಂತ ಕಾಮಗಾರಿ,ಅಪಾಯದ ಅಂಚಿನಲ್ಲಿ ಸಂಚಾರ
Team Udayavani, Feb 2, 2019, 12:30 AM IST
ಹೆಬ್ರಿ : ಹೆಬ್ರಿ ಲಯನ್ಸ್ ಸರ್ಕಲ್ನಿಂದ ಮೂರು ರಸ್ತೆ ಮಾರ್ಗವಾಗಿ ಹೆಬ್ರಿಗೆ ಸಂಪರ್ಕಿಸುವ ರಸ್ತೆಯ ಆಗಲಿಕರಣದ ಕೆಲಸ ಕಳೆದ ಹಲಾವರು ತಿಂಗಳುಗಳಿಂದ ನಡೆಯುತ್ತಿದ್ದು ಇದೀಗ ಗ್ಯಾರೇಜ್ ಎದುರಿನ ರಸ್ತೆಯ ಅಗಲೀಕರಣಕ್ಕೆ ಇಕ್ಕೆಲೆಗಳನ್ನು ಅಗೆತಗೊಳಿಸಿದ್ದು ಖಾಸಗಿ ಜಾಗದ ತಕರಾರಿನಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ.
ಪರಿಣಾಮ ಮಾರ್ಗದ ಸಂಚಾರ ಆಪಾಯದ ಅಂಚಿನಲ್ಲಿದ್ದು ಪಾದಚಾರಿಗಳು ನಡೆಯಲು ಪುಟ್ಪಾತ್ಇಲ್ಲದೆ ರಸ್ತೆಯಲ್ಲಿಯೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಮಾರ್ಗದ ಲ್ಲಿ ಈಗಾಗಲೇ ದಿನನಿತ್ಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಕಾರ್ಮಿಕರು ಈ ಮಾರ್ಗದಲ್ಲಿ ನಡೆದುಕೊಂಡು ಹೋಗುತಿದ್ದು ಹಿಂಬದಿಯಿಂದ ವಾಹನ ಸವಾರರು ಒಮ್ಮೆಲೆ ಬಂದು ಡಿಕ್ಕಿ ಹೊಡೆದ ಹಲವಾರು ಪ್ರಕರಣಗಳು ನಡೆದಿದೆ.ರಾತ್ರಿಯ ಹೊತ್ತು ವಾಹನ ಸವಾರರು ರಸ್ತೆಯ ಚರಂಡಿ ಕಾಣದೆ ಕಂದಕಕ್ಕೆ ಉರುಳುವ ಭೀತಿಯಲ್ಲಿದೆ.ಇನ್ನಾದರು ಸಂಬಂಧಪಟ್ಟ ಇಲಾಖೆ ಸಮಸ್ಯೆಯನ್ನು ಪರಿಹರಿಸಿ ಮುಂದಾಗುವ ಅನಾಹುತವನ್ನು ತಪ್ಪಿಸುವಂತೆ ಸಾರ್ವಜನಿಕರು ವಿನಂತಿಸುತ್ತಾರೆ.
ರಸ್ತೆಯ ಬದಿಯಲ್ಲಿರುವ ಜಾಗ ಖಾಸಗಿ ಅವರ ಒಡೆತನಕ್ಕೆ ಒಳಪಟ್ಟಿದ್ದು ಈ ಕಾರಣದಿಂದ ಕಾಮಗಾರಿ ನಿಂತಿದೆ. ಅವರೊಂದಿಗೆ ಪಂಚಾಯತ್ನಲ್ಲಿ ಒಮ್ಮೆ ಮಾತುಕತೆ ನಡೆಸಿದ್ದು ಒಪ್ಪಿಗೆ ನೀಡಿದ್ದಾರೆ.ಆದರೆ ಈಗ ಆಗುವುದಿಲ್ಲ ಎನ್ನುತ್ತಾರೆ.ಈ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದು ಅವರೂ ಕೂಡ ಮಾತುಕತೆ ನಡೆಸಿದ್ದು ಮುಂದಿನ ನಿರ್ಧಾರ ತಿಳಿಯಬೇಕಾಗಿದೆ.
– ಹೆಚ್.ಕೆ.ಸುಧಾಕರ
ಅಧ್ಯಕ್ಷರು, ಗ್ರಾಮ ಪಂಚಾಯತ್ ಹೆಬ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್