ಮಲ್ಪೆ, ಉಡುಪಿ, ಮಣಿಪಾಲದಲ್ಲಿ ಹೆಲಿಟೂರಿಸಂ ಹಾರಾಟ


Team Udayavani, Jan 10, 2019, 8:25 PM IST

helicafter-700.jpg

ಮಲ್ಪೆ: ಹೆಲಿಕಾಪ್ಟರ್‌ನಲ್ಲಿ ಕುಳಿತುಕೊಳ್ಳಬೇಕು, ಬಾನಂಗಳದಲ್ಲಿ ಹಾರಾಡಬೇಕು ಎಂಬ ತುಡಿತ ಇದ್ದವರು ಜ. 11ರಿಂದ ಆದಿವುಡುಪಿ ಹೆಲಿಪ್ಯಾಡ್‌ ಹೋದರೆ ಹೆಲಿಕಾಪ್ಟರ್‌ ಏರಿ ಒಂದು ಸುತ್ತ ಪ್ರಯಾಣ ಬೆಳಸಬಹುದು. ಬಾನಂಗಳದಲ್ಲಿ ಹಕ್ಕಿಯಂತೆ ಹಾರಾಡಿ, ಉಡುಪಿ ಸುತ್ತ ಮತ್ತಲಿನ ಸೌಂದರ್ಯವನ್ನು ಮೇಲಿಂದ ವೀಕ್ಷಿಸಿ ಕಣ್ತುಂಬಿಕೊಳ್ಳಬಹುದು.

ಜ.11, 12 ಮತ್ತು 13ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಆದಿವುಡುಪಿ ಎನ್‌ಸಿಸಿ ಮೈದಾನದಲ್ಲಿ  ಹಾರಾಟ ನಡೆಯಲಿದೆ. ಉಡುಪಿಯನ್ನು ಕೆಳಗಿನಿಂದ ನೋಡುವುದಕ್ಕೂ ಮೇಲಿನಿಂದ ಹಾರಾಡಿಕೊಂಡು ಸವಿಯುದಕ್ಕೂ ವ್ಯತ್ಯಾಸ ಇದೆ. ಪ್ರವಾಸೋದ್ಯಮವನ್ನು ಇನ್ನಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಮಂತ್ರ ಟೂರಿಸಂ ಡವೆಲಪ್‌ಮೆಂಟ್‌ ಕಂಪೆನಿ, ಮತ್ತು ಚಿಪ್ಸನ್‌ ಕಂಪೆನಿ ಕಳೆದ ವರ್ಷವೇ ಹೆಲಿಟೂರಿಸಂನ್ನು ಆರಂಭಿಸಿವೆ.

ಕುಂದಾಪುರದಲ್ಲಿ 3 ದಿನಗಳ ಕಾಲ ಹೆಲಿಟೂರಿಸಂ ನಡೆಸಲಾಗಿದೆ. ಹೆಲಿಕಾಪ್ಟರ್‌ನಲ್ಲಿ ಉಡುಪಿ, ಮಲ್ಪೆ ಮೀನುಗಾರಿಕೆ ಬಂದರು, ಸೈಂಟ್‌ಮೇರಿಸ್‌, ಹೂಡೆ, ಮಣಿಪಾಲ ಸುತ್ತಮುತ್ತಲ ಪರಿಸರವನ್ನು ಬಾನಂಗಳದಲ್ಲಿ ಹಾರಾಟ ನಡೆಸಿ ಪ್ರದರ್ಶನ ಮಾಡುತ್ತಿದೆ.

ಜಾಲಿರೈಡ್‌, ಅಡ್ವೆಂಚರ್‌ ರೈಡ್‌
ಹೆಲಿಕಾಪ್ಟರ್‌ನಲ್ಲಿ ಹಾರಬಯಸುವವ ರಿಗೆ ಜಾಲಿರೈಡ್‌, ಅಡ್ವೆಂಚರ್‌ ರೈಡ್‌ ಎಂದು ಎರಡು ಬಗೆಯ ಪ್ಯಾಕೇಜ್‌ ಇದೆ. ಜಾಲಿರೈಡ್‌ನ‌ಲ್ಲಿ ಉಡುಪಿ ಅಥವಾ ಮಣಿಪಾಲ ಯಾವುದಾದರೂ ಒಂದನ್ನು ಅಯ್ಕೆ ಮಾಡಬೇಕು. ಇದರಲ್ಲಿ 8 ನಿಮಿಷದ ಹಾರಾಟವಿದೆ. ಆಡ್ವೆಂಚರ್‌ ರೈಡ್‌ನ‌ಲ್ಲಿ ಸೈಂಟ್‌ಮೇರಿಸ್‌ ಅಥವಾ ಉಡುಪಿ ಮಣಿಪಾಲದಲ್ಲಿ ಹಾರಾಟ ನಡೆಸುತ್ತದೆ. ಇದರಲ್ಲಿ 10 ನಿಮಿಷ ತಿರುಗಾಟದ ಅವಕಾಶವಿದ್ದು, ಅಲ್ಪ ಸ್ವಲ್ಪ ಸ್ಟಂಟ್‌ ಕೂಡ ಇದೆ. ಒಮ್ಮೆ ಗೆ 6 ಮಂದಿಗೆ ಪ್ರಯಾಣಿಸುವ ಅವಕಾಶವಿದೆ. ಜಾಲಿರೈಡ್‌ಗೆ ರೂ. 2,500, ಅಡ್ವೆಂಚರ್‌ ರೈಡ್‌ಗೆ 3,000 ನಿಗದಿಪಡಿಸಲಾಗಿದ್ದು, ಎರಡು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ.

ಮೆಡಿಕಲ್‌ ಟೂರಿಸಂಗೂ ವಿಸ್ತರಣೆ ಉದ್ದೇಶ
ಹೆಲಿ ಟೂರಿಸಂ ಉಡುಪಿಯಲ್ಲಿ ಶಾಶ್ವತವಾಗಿ ಆರಂಭಿಸುವ ಯೋಜನೆ ಇದ್ದು, ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಸಂದರ್ಶನಕ್ಕಾಗಿ ರಿಲೀಜಿಯಸ್‌ ಟೂರಿಸಂ, ತುರ್ತು ಆರೋಗ್ಯ ಸೇವೆಗಾಗಿ ಮೆಡಿಕಲ್‌ ಟೂರಿಸಂಗೂ ವಿಸ್ತರಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ.
– ಸುದೇಶ್‌ ಶೆಟ್ಟಿ, ಮಂತ್ರ ಟೂರಿಸಂ ಡೆವೆಲಪ್‌ಮೆಂಟ್‌

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.