ಹೆಮ್ಮಾಡಿ: ಒಂಟಿ ಮಹಿಳೆ ಶಂಕಾಸ್ಪದ ಸಾವು; ಕೊಲೆ ಶಂಕೆ
Team Udayavani, Mar 2, 2019, 12:55 AM IST
ಕುಂದಾಪುರ: ಕೊಲ್ಲೂರು – ಕುಂದಾಪುರ ರಾಜ್ಯ ಹೆದ್ದಾರಿಯ ಹೆಮ್ಮಾಡಿ ಸಮೀಪದ ಹರೇಗೋಡು ಬಳಿ ತನ್ನ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ಮಹಿಳೆಯೊಬ್ಬರು ಶುಕ್ರವಾರ ಅನುಮಾನಾಸ್ಪದವಾಗಿ ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಹೆಮ್ಮಾಡಿ ಸಮೀಪದ ಕಟ್ ಬೆಲೂ¤ರು ಗ್ರಾಮದ ಹರೇಗೋಡು ಸುಳೆÕ ನಾವುಡರ ಅಂಗಡಿಯ ಹತ್ತಿರದ ಕ್ರಾಸ್ ಬಳಿಯ ನಿವಾಸಿ ಗುಲಾಬಿ ಮೊಗವೀರ (55) ಮೃತಪಟ್ಟವರು.ಅವರು ಹೆಮ್ಮಾಡಿ ಪೇಟೆಯಲ್ಲಿ ಎರಡು ದಶಕಗಳಿಗೂ ಹೆಚ್ಚಿನ ಕಾಲದಿಂದ ಮೀನು ಮಾರಾಟ ಮಾಡಿಕೊಂಡಿದ್ದು, ಪತಿ ನಾಗೇಶ್ ಮೊಗವೀರ ನಿಧನದ ಬಳಿಕ ಮನೆಯಲ್ಲಿ ಒಬ್ಬರೇ ಇದ್ದರು.ಅವರಿಗೆ ಇಬ್ಬರು ಪುತ್ರರಿದ್ದು, ಉದ್ಯೋಗ ನಿಮಿತ್ತ ದೂರದ ಊರಿಗಳಲ್ಲಿದ್ದಾರೆ.
ಗುರುವಾರ ಸಂಜೆಯವರೆಗೂ ಮೀನು ಮಾರಾಟ ಮಾಡಿದ್ದು, ಶುಕ್ರವಾರ ಬೆಳಗ್ಗೆ ಅವರ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತ ದೇಹ ಕೆಎಂಸಿಗೆ
ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಆ ಬಳಿಕವಷ್ಟೇ ಸಾವಿನ ಕುರಿತ ಗೊಂದಲ ನಿವಾರಣೆಯಾಗಬಹುದು.
ಸ್ಥಳಕ್ಕೆ ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ವೃತ್ತ ನಿರೀಕ್ಷಕ ಮಂಜಪ್ಪ, ಕುಂದಾಪುರ ಎಸ್ಐ ಹರೀಶ್ ಆರ್. ಹಾಗೂ ಸಿಬಂದಿ ಪರಿಶೀಲನೆ ನಡೆಸಿದ್ದಾರೆ. ಸಹೋದರ ಉದಯ ಛಾತ್ರಬೆಟ್ಟು ನೀಡಿರುವ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.
ಚಿನ್ನಕ್ಕಾಗಿ ಕೊಲೆ ?
ಗುಲಾಬಿಯವರು ಹೆಚ್ಚಾಗಿ ಚಿನ್ನದ ಚೈನ್, ಬೆಂಡೋಲೆ ಹಾಗೂ ಬಳೆಗಳನ್ನು ಧರಿಸು ತ್ತಿದ್ದರೆಂದು ಅವರನ್ನು ಬಲ್ಲವರು ತಿಳಿಸಿದ್ದು, ಆದರೆ ಅವೆಲ್ಲವೂ ಮೃತದೇಹದಲ್ಲಿ ಕಾಣಿಸುತ್ತಿಲ್ಲ. ಇದ ರಿಂದಾಗಿ ಚಿನ್ನ ಕ್ಕಾ ಗಿಯೇ ಯಾರಾದರೂ ಇವರನ್ನು ಕೊಲೆ ಮಾಡಿ ದರೋ ಎಂಬ ಸಂಶ ಯ ಮೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ