ಇಲ್ಲೊಂದು ಗೋ ದೇಗುಲ!ಮಮತೆಯ ಗೋಮಾತೆಗೆ ಗುಡಿ ಕಟ್ಟಿದ ದಂಪತಿ
Team Udayavani, Sep 2, 2019, 5:29 AM IST
ಕೊಲ್ಲೂರು:ಗೋಮಾತೆಗೆ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ. ಗೋಮಾತೆಯ ದೇಹದಲ್ಲಿ 33 ಕೋಟಿ ದೇವತೆ ಗಳು ನೆಲೆಯಾಗಿದ್ದಾರೆ ಎಂಬ ನಂಬಿಕೆ ಹಿಂದೂಗಳದು. ಇವೆಲ್ಲಕ್ಕೂ ದ್ಯೋತಕ ಎಂಬಂತೆ ಇಲ್ಲೊಂದು ಮನೆಯವರು ತಾವು ಸಾಕಿ ಸಲಹಿದ ಗೋವು ಮೃತಪಟ್ಟಾಗ ಗುಡಿ ಕಟ್ಟಿ ಪೂಜಿಸುತ್ತಿದ್ದಾರೆ.
ಕೆಳ ಹೊಸೂರಿನ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಲಲಿತಾಚಂದ್ರ ಪಟಗಾರ ಮತ್ತು ಐಟಿಐ ಶಿಕ್ಷಕ ಶಿವಾನಂದಯ್ಯ ಹಿರೇಮಠ ದಂಪತಿ ತಾವು ಸಾಕಿ ಸಲಹಿದ ಗೋವು ವಯೋಸಹಜವಾಗಿ ಮೊನ್ನೆ ಗೋಕುಲಾಷ್ಟಮಿಯಂದೇ ಮೃತಪಟ್ಟಿತು. ಪುರೋಹಿತರನ್ನು ಕರೆಸಿ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ಪೂರೈಸಿದ ದಂಪತಿ ಅಷ್ಟಕ್ಕೇ ತಮ್ಮ ಹಸುವನ್ನು ಮರೆತುಬಿಡಲಿಲ್ಲ; ಬದಲಿಗೆ ಮನೆಯಂಗಳದಲ್ಲಿ ಅದಕ್ಕೊಂದು ಪುಟ್ಟ ಗುಡಿ ಕಟ್ಟಿಸಿ ಅದರ ಕರು ಸಹಿತವಾದ ಪಂಚಲೋಹದ ಮೂರ್ತಿಯನ್ನಿಟ್ಟು ಪೂಜಿಸಲಾರಂಭಿಸಿದ್ದಾರೆ. ಪ್ರತಿದಿನ ಬೆಳಗ್ಗೆ – ಸಂಜೆ ಪೂಜೆ ನಡೆಯುತ್ತದೆ. ಈ ಮೂಲಕ ಅಮೃತ ಸದೃಶ ಹಾಲನ್ನು ನೀಡಿ ನಮ್ಮನ್ನು ಸಲಹುವ ಗೋಮಾತೆ ಸಾವಿನ ಬಳಿಕವೂ ಪೂಜನೀಯ ಎಂಬುದನ್ನು ಈ ದಂಪತಿ ಸಾರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ