ಬೃಹತ್‌ ವೃಕ್ಷ ನಾಶಕ್ಕೆ ದಶಕ: ಬದಲಿ ಸಸ್ಯಾರೋಪಣವಿನ್ನೂ ಅಪೂರ್ಣ


Team Udayavani, Jun 24, 2019, 9:56 AM IST

HIGHWAY-TREES

ಉಡುಪಿ: ತಲಪಾಡಿಯಿಂದ ನಂತೂರು, ಸುರತ್ಕಲ್‌ನಿಂದ ಕುಂದಾಪುರದವರೆಗೆ ರಾಷ್ಟ್ರೀಯ ಹೆದ್ದಾರಿ 66 ಅಗಲಗೊಳ್ಳುವ ಪ್ರಕ್ರಿಯೆ ಆರಂಭವಾಗಿ ಹತ್ತು ವರ್ಷಗಳಾಗಿವೆ. ಭೂಸ್ವಾಧೀನದ ಬಳಿಕ ನಡೆದ ಮೊದಲ ಕೆಲಸವೇ ನೂರಾರು ವರ್ಷ ವಯಸ್ಸಿನ ಸಾವಿರಾರು ಬೃಹತ್‌ ಮರಗಳನ್ನು ಕಡಿದುರುಳಿಸಿದ್ದು. ಈ ವೃಕ್ಷ ಸಂಹಾರಕ್ಕೆ ಈಗ ದಶಮಾನೋತ್ಸವ. ಆದರೆ ಬದಲಿ ಗಿಡ ನೆಟ್ಟು ಬೆಳೆಸುವ ಷರತ್ತು ಇನ್ನೂ ಕಾರ್ಯಗತಗೊಂಡಿಲ್ಲ.

ರಾಷ್ಟ್ರೀಯ ಹೆದ್ದಾರಿಯನ್ನು ಗುತ್ತಿಗೆ ವಹಿಸಿ ಕೊಡುವಾಗ ನವಯುಗ ಕನ್‌ಸ್ಟ್ರಕ್ಷನ್‌ ಕಂಪೆನಿಗೆ ಹಾಕಿದ ಷರತ್ತುಗಳಲ್ಲಿ ಒಂದು ಕಡಿದ ಮರಗಳಿಗೆ ಮೂರು ಪಟ್ಟು ಸಸಿಗಳನ್ನು ನೆಡಬೇಕು ಎನ್ನುವುದು. ವಾಸ್ತವದಲ್ಲಿ ಕಡಿದ ಮರಗಳ ಪ್ರಮಾಣಕ್ಕೆ ಹಾಕಿದ ಮೂರು ಪಟ್ಟು ಗಿಡಗಳ ನೆಡುವಿಕೆಯ ಷರತ್ತೇ ಅವೈಜ್ಞಾನಿಕ. ಅಷ್ಟಾದರೂ ಆಗಿಲ್ಲ.

ಒಟ್ಟು 90 ಕಿ.ಮೀ. ಉದ್ದದ ಈ ರಸ್ತೆಯ ಪಕ್ಕ ಬೆಳೆದಿದ್ದ 18,400 ಮರಗಳನ್ನು ಕಡಿಯಲಾಗಿದೆ. ಷರತ್ತಿನ ಪ್ರಕಾರ 54,000 ಸಸಿಗಳನ್ನು ನೆಡಬೇಕಾ
ಗಿತ್ತು. ಒಂದು ಮೂಲದ ಪ್ರಕಾರ 42,700 ಸಸಿಗಳನ್ನು ನೆಡಲಾಗಿದೆ; ಅವುಗಳಲ್ಲಿ ಅರ್ಧಾಂಶ ಮಾತ್ರ ಬದುಕುಳಿದಿವೆ. ಉಳಿದುದನ್ನು ನೆಟ್ಟೇ ಇಲ್ಲ. ಈಗ ಈ ರಸ್ತೆಯಲ್ಲಿ ವಿಭಾಜಕದ ನಡುವೆ ಇರುವ ಹೂವಿನ ಗಿಡಗಳು ಬೃಹತ್‌ ಮರಗಳಿಗೆ ಪರ್ಯಾಯವಾಗಿ ನೆಡಬೇಕಾದ ಸಸಿಗಳ ಲೆಕ್ಕದಲ್ಲಿ ಬರುವುದಿಲ್ಲ. ಅವು ಕೇವಲ “ಲೈಟ್‌ ಬ್ಯಾರಿಯರ್‌’. ಅವೂ ಸರಿಯಾದ ಉಪಚಾರವಿಲ್ಲದೆ ಸಾಯುತ್ತಿವೆ. ಇವನ್ನೂ ಎಲ್ಲ ಕಡೆ ನೆಟ್ಟಿಲ್ಲ ಎಂಬ ಆರೋಪವಿದೆ.

ಬೃಹತ್‌ ಮರಗಳ ಬದಲಿಗೆ ಸಸಿಗಳನ್ನು ನೆಡಬೇಕಾದದ್ದು ರಸ್ತೆಯ ಇಕ್ಕೆಲಗಳಲ್ಲಿ. ಈ ಗಿಡಗಳನ್ನು ನೆಡದಿರುವುದಕ್ಕೆ ಸ್ಥಳಾಭಾವ ಕಾರಣವಲ್ಲ; ಪ್ರಬಲ ಇಚ್ಛಾಶಕ್ತಿಯ ಕೊರತೆ.  ವೃಕ್ಷ ಸಂಹಾರದ ಹತ್ತನೆಯ ವರ್ಷದಲ್ಲೀಗ ನೆಡಲು 11,000 ಗಿಡಗಳನ್ನು ರಸ್ತೆ ನಿರ್ಮಾಣ ಕಂಪೆನಿಯವರು ತರಿಸಿಕೊಂಡಿದ್ದಾರೆ. ಎಲ್ಲೆಲ್ಲಿ ಸತ್ತು ಹೋಗಿದೆಯೋ ಅಲ್ಲಿ ಮತ್ತು ಹೊಸದಾಗಿ ನೆಡಲು ತಯಾರಿ ನಡೆಸಲಾಗಿದೆ. ಜೂ. 23ರಂದು ಸಸಿ ನೆಡುವ ಕೆಲಸ ಆರಂಭ ಎಂದು ರಾ.ಹೆ. ಪ್ರಾಧಿಕಾರದ ಸಲಹೆಗಾರ ಎಂಜಿನಿಯರ್‌ ಬಾಲಚಂದರ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ನೆಟ್ಟು ಸತ್ತು ಹೋದ ಸ್ಥಳಗಳಲ್ಲಿ ಮತ್ತು ಹೊಸ ಜಾಗದಲ್ಲಿ ನೆಡಲು ಸಸಿಗಳನ್ನು ಖರೀದಿಸಲಾಗಿದೆ. ಈಗ ಮಳೆಗಾಲ ಆರಂಭವಾಗಿರುವುದರಿಂದ ಆದಷ್ಟು ಶೀಘ್ರ ಒಪ್ಪಂದದ ಪ್ರಕಾರ ಪೂರ್ಣಪ್ರಮಾಣದಲ್ಲಿ ಗಿಡಗಳನ್ನು ನೆಡಲು ರಸ್ತೆ ನಿರ್ಮಾಣ ಕಂಪೆನಿಗೆ ತಿಳಿಸಿದ್ದೇವೆ.
ಬಾಲಚಂದರ್‌, ಸಲಹೆಗಾರ ಎಂಜಿನಿಯರ್‌, ರಾ.ಹೆ. ಪ್ರಾಧಿಕಾರ, ಮಂಗಳೂರು

ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.