ಪೊಡವಿಗೊಡೆಯನ ನಾಡಿನಲ್ಲಿ ಹಿಂದೂ ದಿಗ್ದರ್ಶನ…!


Team Udayavani, Nov 25, 2017, 8:13 AM IST

25-15.jpg

ಉಡುಪಿ: ಮೂಡಣದಲ್ಲಿ ಸೂರ್ಯನ ಬಾಲಕಿರಣಗಳು ಭುವಿಯನ್ನು ಸ್ಪರ್ಶಿಸುವ ಶುಭ ಘಳಿಗೆಯಲ್ಲಿ  ಪೊಡವಿಗೊಡೆಯ ಶ್ರೀಕೃಷ್ಣನ ನಾಡಿನಲ್ಲಿ ಹಿಂದೂ ಧರ್ಮ ದಿಗ್ದರ್ಶನದ ಭವ್ಯ ಕಲಾಪ “ಧರ್ಮ ಸಂಸದ್‌’ ಐತಿಹಾಸಿಕ ಅಧಿವೇಶನ ಪ್ರಾರಂಭವಾಗಿ ಹಿಂದೂ ಧರ್ಮ ಜಾಗೃತಿಯ ಮಹಾನ್‌ ಸಂಕಲ್ಪಕ್ಕೆ ಮುನ್ನುಡಿ ಬರೆಯಿತು. ಉಡುಪಿ ನಗರ ಸಾಧು ಸಂತರ ತಪೋವನವಾಗಿ ಪರಿವರ್ತಿತವಾಯಿತು.

ಕಾರ್ಯಕರ್ತರ ತ್ರಿಸ್ತರ ಪರಿಶ್ರಮ: ಮೂರು ದಿನಗಳ ಪರ್ಯಂತ ಆಯೋಜಿತವಾಗಿರುವ ಐತಿಹಾಸಿಕ ಅಧಿವೇಶನದ ಯಶಸ್ಸಿಗಾಗಿ ವಿಶ್ವಹಿಂದೂ ಪರಿಷತ್‌ ಹಾಗೂ ಬಜರಂಗದಳ ಕಳೆದ ಆರು ತಿಂಗಳುಗಳಿಂದ ನಿರಂತರವಾಗಿ ಶ್ರಮಿಸಿವೆ. ಸಾಧು ಸಂತರ ಸಂಪರ್ಕಕ್ಕಾಗಿ ಸುಮಾರು ಒಂದು ನೂರು ಮಂದಿ ಪ್ರಮುಖ ಕಾರ್ಯಕರ್ತರು ಎಡೆಬಿಡದೆ ಓಡಾಡಿದ್ದಾರೆ. ಅಯೋಧ್ಯೆ, ಹರಿದ್ವಾರ, ಪೀಠಕಾಳಿ, ಕುರುಕ್ಷೇತ್ರ, ಹೃಷಿಕೇಶ, ಬೃಂದಾವನ, ದಿಲ್ಲಿ ಸಹಿತ ದೇಶದ ಮೂಲೆ ಮೂಲೆಗಳಿಗೆ ತೆರಳಿ, ಸಾಧು ಸಂತರನ್ನು ಸಂಪರ್ಕಿಸಿ ಧರ್ಮ ಸಂಸದ್‌ನಲ್ಲಿ ಭಾಗವಹಿಸಲು ಕೋರಲಾಗಿದೆ. ರವಿವಾರ ನಡೆಯಲಿರುವ ಹಿಂದೂ ಸಮಾವೇಶದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ವಿವಿಧ ಸಮಾಜಗಳ ಮುಖಂಡರು ಭಾಗವಹಿಸುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಕಳೆದ ಒಂದು ತಿಂಗಳಿನಿಂದ ಶ್ರಮಿಸಿದ್ದಾರೆ. ರವಿವಾರದ ಹಿಂದೂ ಸಮಾಜೋತ್ಸವ ಸಂಪೂರ್ಣ ಯಶಸ್ವಿಯಾಗಬೇಕು ಎಂಬ ಆಶಯದಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಮನೆ ಮನೆ ಸಂಪರ್ಕ ಮಾಡಲಾಗಿದೆ. 

ಸಾವಿರ ಕಾರ್ಯಕರ್ತರು
ಹಿಂದೂ ಸಂಘಟನೆಯ 1,000ಕ್ಕೂ ಅಧಿಕ ಕಾರ್ಯಕರ್ತರು ಕಳೆದ ಹಲವು ದಿನಗಳಿಂದ ರಾತ್ರಿ-ಹಗಲು ಬೇರೆ ಬೇರೆ ರೀತಿಯಲ್ಲಿ ಶ್ರಮಿಸಿದ್ದಾರೆ. ಭೋಜನ- ಸ್ವತ್ಛತೆ ಸಹಿತ ಎಲ್ಲ ವಿಭಾಗಗಳಲ್ಲೂ ಊನವಿಲ್ಲದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಲು ತಂಡಗಳು ಶ್ರಮವಹಿಸಿವೆ. ದೇಶದ ಬೇರೆ ಬೇರೆ ಕಡೆಗಳಿಂದ ಆಗಮಿಸಿದ ಸ್ವಾಮೀಜಿಗಳಿಗೆ ಅತ್ಯಂತ ಅಗತ್ಯವಿರುವ ಪೂಜಾ ಸಾಮಗ್ರಿಗಳು, ನಿತ್ಯಾನುಷ್ಠಾನ ಕೈಗೊಳ್ಳುವ ಸಂದರ್ಭದಲ್ಲಿ ಬೇಕಾಗುವ ಎಲ್ಲ ಅಗತ್ಯ ವಸ್ತುಗಳನ್ನು ಸಂಘಟಕರ ನೆಲೆಯಲ್ಲಿಯೇ ಒದಗಿಸಲಾಯಿತು.

60 ಕೇಂದ್ರಗಳಲ್ಲಿ ವಸತಿ ವ್ಯವಸ್ಥೆ
ಸಾಧು ಸಂತರಿಗೆ 60 ಕೇಂದ್ರಗಳನ್ನು ವಸತಿ ವ್ಯವಸ್ಥೆಗೆಂದು ಮೀಸಲಿಡಲಾಗಿದೆ. ಪ್ರತೀ ಕೇಂದ್ರಕ್ಕೆ ತಲಾ ಐವರಂತೆ ಪ್ರಮುಖ ಕಾರ್ಯಕರ್ತರನ್ನು ಸಿದ್ಧಗೊಳಿಸ ಲಾಗಿದೆ. ಸಂತರನ್ನು ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಕರೆತರುವ ವ್ಯವಸ್ಥೆ ಕಾರ್ಯಕರ್ತರು ಮಾಡಿದ್ದಾರೆ. ಇದಕ್ಕಾಗಿಯೇ ಪ್ರತ್ಯೇಕ ಸಮಿತಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡುತ್ತಾರೆ ಬಜರಂಗದಳ ಪ್ರಮುಖ ಶರಣ್‌ ಪಂಪ್‌ವೆಲ್‌, ಸುನಿಲ್‌ ಕೆ.ಆರ್‌.

ಧರ್ಮ ಕಾರ್ಯದ ಜತೆಗೆ “ಸ್ವಚ್ಛ ಸಂಕಲ್ಪ’
ಮೂರು ವಿಶೇಷ ತಂಡಗಳು ಸ್ವತ್ಛತೆಗೆ ಪ್ರಾಧಾನ್ಯ ನೀಡಿವೆ. ಶುಕ್ರವಾರ ಮೆರವಣಿಗೆ ಸಾಗಿ ಬಂದ ಅರೆ ಘಳಿಗೆಯಲ್ಲಿ ರಸ್ತೆ ಸ್ವತ್ಛಗೊಳಿಸಿದ್ದು ವಿಶೇಷ. ಸಭಾಂಗಣ ಮತ್ತು ಸುತ್ತಮುತ್ತ, ಭೋಜನಶಾಲೆ ಯಲ್ಲೂ  ಸ್ವತ್ಛತೆ ಕಾಪಿಡುವ ನೆಲೆ ಯಲ್ಲಿ ಪ್ರತ್ಯೇಕ ತಂಡ ಕೆಲಸ ಮಾಡಿದೆ. ಸರ್ವತ್ರ ನೈರ್ಮಲ್ಯ ಕಾಯ್ದುಕೊಳ್ಳುವ ಬಗ್ಗೆ ಕಾರ್ಯಕರ್ತರ ತಂಡ ಶ್ರಮಿಸಿದೆ. ಶೌಚಾಲಯಗಳನ್ನೂ ವ್ಯವಸ್ಥೆ ಮಾಡಲಾಗಿತ್ತು.

ಪರಿಸರಸ್ನೇಹಿ ಸಂದೇಶ
ನಗರವಿಡೀ ಭಗವಾಧ್ವಜಗಳು ಪಟಪಟಿಸುತ್ತ  ಶೃಂಗಾರಗೊಂಡಿವೆ. ಸುಮಾರು 20,000ದಷ್ಟು ಕೇಸರಿ ಧ್ವಜಗಳನ್ನು ಅಳಡವಡಿಸಲಾಗಿದೆ. ಸುಮಾರು 3,000 ಕೆ.ಜಿ. ತೂಕದಷ್ಟು ಬಂಟಿಂಗ್ಸ್‌ಗಳನ್ನು ಹಾಕಲಾಗಿದೆ. 4,000ಕ್ಕೂ ಅಧಿಕ ಫ್ಲೆಕ್ಸ್‌ಗಳು ಗಮನಸೆಳೆಯು ತ್ತಿವೆ. ಪ್ಲಾಸ್ಟಿಕ್‌ ಮುಕ್ತವಾಗಿಯೇ ಈ ಎಲ್ಲ  ಪ್ರಚಾರ ಸಾಮಗ್ರಿಗಳನ್ನು ಬಳಸಿಕೊಂಡು ಪರಿಸರಸ್ನೇಹಿ ಸಂದೇಶ ನೀಡಲಾಗಿದೆ.

ಭದ್ರತೆಗೆ 3,400 ಪೊಲೀಸರ ನಿಯೋಜನೆ
ಧರ್ಮಸಂಸದ್‌, ನ.26ರ ಹಿಂದೂ ಸಮಾಜೋತ್ಸವದ ಭದ್ರತೆಗೆ ಒಟ್ಟು 3,400 ಪೊಲೀಸರನ್ನು ನಿಯೋಜಿಸಲಾ ಗಿದೆ. ನಾಲ್ವರು ಎಎಸ್‌ಪಿ, 12 ಡಿವೈಎಸ್‌ಪಿ, 105 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಿದ್ದು, ಹೆಚ್ಚುವರಿಯಾಗಿ ಕೆಎಸ್‌ಆರ್‌ಪಿ ಹಾಗೂ ಡಿಎಆರ್‌ ತುಕಡಿಗಳನ್ನು ಆಯಕಟ್ಟಿನ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಉಡುಪಿ ಎಸ್‌ಪಿ ಡಾ| ಸಂಜೀವ ಎಂ. ಪಾಟೀಲ್‌ ಸ್ವತಃ ಭದ್ರತಾ ವ್ಯವಸ್ಥೆಯಲ್ಲಿ ತೊಡಗಿಕೊಂಡಿದ್ದರು. 

ಪೊಲೀಸ್‌ – ಜಂಟಿ ಶ್ರಮ
ಕಲ್ಸಂಕ ಜಂಕ್ಷನ್‌ ಸಹಿತ ಬೇರೆ ಬೇರೆ ಕಡೆಗಳಲ್ಲಿ ವಾಹನ ದಟ್ಟಣೆ ಆಗದಂತೆ ಎಚ್ಚರಿಕೆ ವಹಿಸುವ ಹಿನ್ನೆಲೆಯಲ್ಲಿ ಪೊಲೀಸರ ಜತೆಗೆ ಸ್ವಯಂಸೇವಕರು ಕೂಡ ಶ್ರಮಿಸಿದರು. ವಿಐಪಿ ವಾಹನ ಗಳಿಗೆ ಮಾತ್ರ ಸಂತ ಸಮಾವೇಶ ನಡೆಯುವ ಸ್ಥಳದ ಮುಂಭಾಗ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿತ್ತು. ಬಸ್ಸಿನಲ್ಲಿ ಬಂದವರು ಕಲ್ಸಂಕ ರೋಯಲ್‌ ಗಾರ್ಡನ್‌ ನಿಲ್ದಾಣದಲ್ಲಿ ಇಳಿದು ಬಂದರೆ, ಉಡುಪಿ ಸಿಟಿ/ಸರ್ವೀಸ್‌ ಬಸ್‌ ನಿಲ್ದಾಣದಿಂದ ಕಾಲ್ನಡಿಗೆಯನ್ನು ಆಶ್ರಯಿಸಿದವರು ಸುಮಾರು 10 ನಿಮಿಷಗಳಲ್ಲಿ ಅಧಿವೇಶನ ಸ್ಥಳಕ್ಕೆ ಬಂದರು.

ದಿನೇಶ್‌ ಇರಾ

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.