ಕೋಟೆ: ಜಲಮರುಪೂರಣ ಅಳವಡಿಸಿದ ಗಣೇಶ್‌ ಸಾಲ್ಯಾನ್‌

ಮನೆ ಮನೆಗೆ ಮಳೆಕೊಯ್ಲು ಉದಯವಾಣಿ ಅಭಿಯಾನ

Team Udayavani, Aug 5, 2019, 5:54 AM IST

3107KPT1E-1

ಮನೆಯಲ್ಲಿ ಅಳವಡಿಸಲಾದ ಘಟಕದೊಂದಿಗೆ ಮನೆ ಮಂದಿ

ಕಟಪಾಡಿ: ಮಳೆ ಕೊಯ್ಲು ಜಲಸಾಕ್ಷರತೆಯ ಬಗ್ಗೆ ಉದಯವಾಣಿಯು ಹೆಚ್ಚಿನ ಮಾಹಿತಿ ನೀಡಿದ್ದರಿಂದ ನಾನೂ ಕೂಡಾ ಜಲಸಾಕ್ಷರನಾಗಲು ಬಯಸಿ ಸ್ವತಃ ನನ್ನ ಮನೆಯಲ್ಲಿ ಮಳೆಕೊಯ್ಲು ಅಳವಡಿಸುವಂತಾಗಿದೆ ಎಂದು ಕೋಟೆ ಗ್ರಾಮದ ಸೆಲೂನ್‌ ಮಾಲಕ ಗಣೇಶ್‌ ಸಾಲ್ಯಾನ್‌ ಕುಚ್ಚಿಕಾಡು ಕಟಪಾಡಿ ಮಳೆಕೊಯ್ಲು ಘಟಕ ಅಳವಡಿಸಿದ ಬಗ್ಗೆ ತಿಳಿಸಿದರು.

ಉದಯವಾಣಿ ನೀರಿನ ಸುರಕ್ಷತೆಯ ಬಗ್ಗೆ ನಿರಂತರ ಪಾಠವನ್ನು ನೀಡಿದ್ದರಿಂದ ಪ್ರೇರೇಪಿತನಾಗಿ ಈಗ ಥಾರಸಿಯ ಮೇಲೆ ಬೀಳುವ ಮಳೆಯ ನೀರು ಹರಿದು ಪೋಲಾಗದಂತೆ ಎಲ್ಲ ನೀರು ಹರಿದು ಶುದ್ಧಗೊಂಡು ಬಾವಿಗೆ ಜಲ ಮರುಪೂರಣವನ್ನು ಮಾಡಲಾಗುತ್ತಿದೆ.

ಪ್ಲಂಬಿಂಗ್‌ ಬಗ್ಗೆ ಅನುಭವ ಇತ್ತು. ಉದಯ ವಾಣಿಯ ಸವಿವರವಾದ ಮಾಹಿತಿ ಆಧಾರದ ಮೇಲೆ ಸ್ವತಃ ಪೈಪುಗಳನ್ನು ಸುಲಭವಾಗಿ ಅಳವಡಿಸಿದ್ದೇನೆ. ಪ್ಲಾಸ್ಟಿಕ್‌ ಡ್ರಮ್‌ ಮಾದರಿಯೂ ಅಗ್ಗವಾಗಿದೆ. ಸುಮಾರು 1,300 ರೂ. ಗಳ ವೆಚ್ಚದಲ್ಲಿ ಘಟಕ ಸಿದ್ಧಪಡಿಸಿರುತ್ತೇನೆ.ಇದನ್ನು ಕಂಡ ಸಹೋದರಿ ಗೀತಾ ಡಿ.ಸುವರ್ಣ ಕುಚ್ಚಿಕಾಡು ಕಟಪಾಡಿ ಕೂಡಾ ಈಗ ಜಲದ ವಿಷಯದಲ್ಲಿ ಸಾಕ್ಷರಳಾಗಿದ್ದಾಳೆ. ಕಡಿಮೆ ವೆಚ್ಚದಲ್ಲಿ ಅಲ್ಲಿಯೂ ಅಳವಡಿಸಿದೆನು ಎಂದು ಮಳೆನೀರನ್ನು ಉಳಿಸಿದ ಹೆಮ್ಮೆ ವ್ಯಕ್ತಪಡಿಸುತ್ತಾರೆ ಗಣೇಶ್‌ ಸಾಲ್ಯಾನ್‌ ಅವರು.

ತನ್ನ ಸೆಲೂನ್‌ಗೆ ಬರುವ ಎಲ್ಲ ಗ್ರಾಹಕರಿಗೂ ಈ ಜಲಸಾಕ್ಷರತೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನೂ ನೀಡುತ್ತಾ, ಅವರೂ ಅಳವಡಿಸುವಂತೆ ಪ್ರೇರೇಪಿಸುತ್ತಿದ್ದಾರೆ. ಪತ್ನಿ ಸಂಧ್ಯಾಗಣೇಶ್‌ ಸಾಲ್ಯಾನ್‌ ಮಣಿಪಾಲ ಕೆಎಂಸಿಯಲ್ಲಿ ಟೆಕ್ನೀಷಿಯನ್‌ ಆಗಿದ್ದು ಆಕೆ ಈ ಘಟಕ ನಿರ್ಮಿಸಲು ಹೆಚ್ಚು ಪ್ರೋತ್ಸಾಹ ನೀಡಿದ್ದಾಳೆ. ಯಾರಾದರೂ ಈ ಘಟಕವನ್ನು ಅಳವಡಿಸಲು ಬಯಸಿದಲ್ಲಿ ಲಭ್ಯ ಸಮಯಾವಕಾಶದಲ್ಲಿ ತೆರಳಿ ಸಿದ್ಧಪಡಿಸಿ ಅಳವಡಿಸುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ.

ಜಾಗೃತಿ ಮೂಡಿಸುತ್ತೇನೆ
ಪ್ರಕೃತಿಯಿಂದ ಹೇರಳವಾಗಿ ಲಭಿಸುವ ನೀರನ್ನು ನಾವೆಲ್ಲರೂ ಪೋಷಿಸಬೇಕು. ರಕ್ತದ ಹನಿಯಂತೆ ನೀರಿನ ಹನಿ ಹನಿಯೂ ಬೆಲೆಬಾಳುತ್ತದೆ. ಈ ಬಗ್ಗೆ ಜನಮನದ ಜೀವ ನಾಡಿಯಾದ ಉದಯವಾಣಿ ದಿನಪತ್ರಿಕೆ ಎಚ್ಚರಿಸುವ ರೀತಿಯಿಂದ (ಜನಜಾಗೃತಿ) ಉತ್ತೇಜಿತನಾಗಿದ್ದೇನೆ. ಬಹಳಷ್ಟು ಕಡಿಮೆ ವೆಚ್ಚದ ಘಟಕ ಅಳವಡಿಸಲು ನನ್ನ ಸಂಬಂಧಿಕರಲ್ಲಿಯೂ ಕೋರಿಕೊಂಡಿದ್ದೇನೆ. ಸ್ವತಃ ಉದಾಹರಣೆಯಾಗಿ ಗ್ರಾಹಕರಲ್ಲೂ ಜಾಗೃತಿ ಮೂಡಿಸುತ್ತೇನೆ .
-ಗಣೇಶ್‌ ಸಾಲ್ಯಾನ್‌ ಕುಚ್ಚಿಕಾಡು,
ಸೆಲೂನು ಮಾಲಕ, ಕೋಟೆ, ಕಟಪಾಡಿ

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆ ಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್‌ನಲ್ಲಿ ಕಳುಹಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529

ಟಾಪ್ ನ್ಯೂಸ್

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Udyavara: ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

Udyavara: ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

Udupi; ಕಾರು ಢಿಕ್ಕಿ: ಸ್ಕೂಟರ್‌ ಸವಾರ ಆಸ್ಪತ್ರೆಗೆ

Udupi; ಕಾರು ಢಿಕ್ಕಿ: ಸ್ಕೂಟರ್‌ ಸವಾರ ಆಸ್ಪತ್ರೆಗೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.