ಜಾತಿ-ಧರ್ಮಕ್ಕಿಂತ ಮಾನವ ಧರ್ಮ ಮೇಲು: ಜಯಮಾಲಾ
Team Udayavani, Jan 26, 2019, 12:30 AM IST
ಕಾರ್ಕಳ: ಜಾತಿ, ಧರ್ಮಕ್ಕಿಂತ ನಂಬಿಕೆ ಮತ್ತು ಮಾನವ ಧರ್ಮ ಶೇಷ್ಠ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಹೇಳಿದರು.
ಐತಿಹಾಸಿಕ ಅತ್ತೂರು ಸಂತಲಾರೆನ್ಸ್ ಬಸಲಿಕಾ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.ಚರ್ಚ್ನ ಸಹಾಯಕ ಧರ್ಮಗುರು ಜೆನ್ಸಿಲ್ ಆಳ್ವ, ಪಾಲನಾ ಮಂಡಳಿಯ ಜಾನ್ ಡಿಸಿಲ್ವ, ಸಂತೋಷ್ ಡಿಸಿಲ್ವ, ತಹಶೀಲ್ದಾರ್ ಮಹಮ್ಮದ್ ಇಸಾಕ್, ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೈನ್, ತಾ.ಪಂ. ಸದಸ್ಯ ಸುಧಾಕರ ಶೆಟ್ಟಿ, ಪುರಸಭಾ ಸದಸ್ಯ ಶುಭದರಾವ್, ರಹಮತ್ ಶೇಖ್, ಪ್ರತಿಮಾ ರಾಣೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾನ್, ಸುಭೀತ್ ಎನ್.ಆರ್., ಮತ್ತಿತರರು ಉಪಸ್ಥಿತರಿದ್ದರು.